ಕೊಡಗು : 8 ವರ್ಷದ ಹುಲಿ ಸೆರೆ
ಮಡಿಕೇರಿ, ಮೇ 20,ವಿರಾಜಪೇಟೆ ತಾಲ್ಲೂಕಿನಲ್ಲಿ ಕಳೆದ 40 ದಿನಗಳ ಸತತ ಕಾರ್ಯಾಚರಣೆಯ ಬಳಿಕ 24 ಸಾಕು ಪ್ರಾಣಿಗಳನ್ನು ಕೊಂದಿದ್ದ 8 ವರ್ಷದ ಹುಲಿಯನ್ನು ಅರಣ್ಯ ಅಧಿಕಾರಿಗಳು ಮಂಗಳವಾರ ರಾತ್ರಿ ಸೆರೆ ಹಿಡಿದಿದ್ದಾರೆ.ಡಾ.ಸನಾಥ್ ಕೃಷ್ಣಬಾ ಮೌಲಿ ನೇತೃತ್ವದ ತಂಡ ಹುಲಿ ಸೆರೆ ಕಾರ್ಯಾಚರಣೆ ನಡೆಸಿದ್ದು, ಸದ್ಯಕ್ಕೆ ಸ್ಥಳೀಯರು ನಿಟ್ಟುಸಿರಿಟ್ಟಿದ್ದಾರೆ ಎಂದು ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಗೋಪಾಲಸ್ವಾಮಿ ಬೆಟ್ಟಗಳ ಮತ್ತಿಗೂಡು ಅರಣ್ಯ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು, ಹುಲಿಯನ್ನು ವಶಪಡಿಸಿಕೊಂಡ ತಂಡದಲ್ಲಿ ದಸರಾ ಆನೆಗಳಾದ ಭೀಮಾ, ಗಣೇಶ್ ಸೇರಿದ್ದವು, ಬಳಿಕ ಮೈಸೂರು ನಗರದಹೊರವಲಯದಲ್ಲಿರುವ ಕೇರಗಹಳ್ಳಿಯ ಚಾಮುಂಡಿ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಹುಲಿಯನ್ನು ಬಿಡಲಾಯಿತು. ಪಶುವೈದ್ಯ ವೈದ್ಯ ಮುಜುಬ್ ರೆಹಮಾನ್, ಅರಣ್ಯ ಅಧಿಕಾರಿ ತೀರ್ಥ, ರಾಜನ್ ದೇವಯ್ಯ ಮತ್ತು ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 