ಕೇರಳ; ಚೇರಾಮನ್ ಜುಮಾ ಮಸೀದಿಯ ನವೀಕರಣಕ್ಕೆ ರಾಜ್ಯಪಾಲರಿಂದ ಶಂಕುಸ್ಥಾಪನೆ
ಕೊಚ್ಚಿ, ನ 11 : ಕೇರಳದಲ್ಲಿರುವ ಭಾರತದ ಮೊಟ್ಟ ಮೊದಲ ಮಸೀದಿ ಹಾಗೂ ಉಪಖಂಡದ ಪುರಾತನ ಮಸೀದಿಯಾದ ಚೇರಮನ್ ಜುಮಾ ಮಸೀದಿಯ ನವೀಕರಣಕ್ಕೆ ಅಲ್ಲಿನ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇಲ್ಲಿನ ಕೋಡುಂಗಲ್ಲೂರು ಪ್ರದೇಶದಲ್ಲಿರುವ ಕ್ರಿ.ಶ. 629 ರಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ಪುರಾತನ ಮಸೀದಿಯನ್ನು 1.13 ಕೋಟಿ ರೂ. ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ. ಕೇರಳವ ಪ್ರವಾಸೋದ್ಯಮ ಇಲಾಖೆ ಮುಜಿರಿಸ್ ಪಾರಂಪರಿಕ ಯೋಜನೆಯಾಗಿ ಈ ಪಾರಂಪರಿಕ ತಾಣವನ್ನು ಸಂರಕ್ಷಿಸುತ್ತಿದೆ ಎಂದು ರಾಜ್ಯಪಾಲರು ಮಾಹಿತಿ ನೀಡಿದರು. ನಂತರ ಟ್ವೀಟ್ ಮಾಡಿದ ಅವರು 'ಶತಮಾನದ ಸಂಸ್ಕೃತಿಯನ್ನು ಸಂರಕ್ಷಿಸಿ ಬಿಂಬಿಸುವುದರಿಂದ ನಮಗೆ 'ನೀವು ಹಿಂದೆ ನೋಡಿದಷ್ಟೂ ಮುಂದೆ ನೋಡಲು ಸಾಧ್ಯವಾಗುತ್ತದೆ' ಎಂಬ ಸಂದೇಶ ನೀಡುತ್ತದೆ' ಎಂದಿದ್ದಾರೆ. ಈ ಮಸೀದಿಯಲ್ಲಿ ಇಂದಿಗೂ ಶತಮಾನದ ಹಿಂದಿನ ಕೆರೆ ಮತ್ತು ದೀಪಗಳನ್ನು ಸಂರಕ್ಷಿಸಲಾಗಿದ್ದು, ಈ ದಿನಗಳು ಪ್ರತಿನಿತ್ಯ ಎಲ್ಲಾ ಧರ್ಮದ ಯಾತ್ರಿಕರು ಮತ್ತು ಪ್ರವಾಸಿಗರು ತರುವ ಎಣ್ಣೆಯಿಂದ ಸಾವಿರಾರು ವರ್ಷಗಳಿಂದ ಉರಿಯುತ್ತಿದೆ ಎನ್ನಲಾಗಿದೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 