ಜಾತೀಯ ಆಧಾರದಲ್ಲಿ ಚೆಲ್ಲಾಟ ಆಡುತ್ತಿರುವುದು ಯೋಗ್ಯವಲ್ಲ: ಡಾ.ಅನ್ನದಾನೀಶ್ವರ ಶ್ರೀ
It is not appropriate to play games on the basis of caste: Dr. Annadanishwar Sri
ಮುಂಡರಗಿ 18: ಭಾರತ ದೇಶ ಜ್ಯಾತ್ಯಾತೀತವಾದುದು. ಪ್ರಸ್ತುತ ಜಾತಿಯ ಗಣತಿಯನ್ನು ಮಾಡಿ, ಆರ್ಥಿಕವಾಗಿ ಹಿಂದುಳಿಕೆಯನ್ನು ಗುರುತಿಸುವುದನ್ನು ಬಿಟ್ಟು ಜಾತೀಯ ಆಧಾರದಲ್ಲಿ ಚೆಲ್ಲಾಟ ಆಡುತ್ತಿರುವುದು ಯೋಗ್ಯವಲ್ಲ ಎಂದು ಜಗದ್ಗುರು ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿ ಇದರಲ್ಲಿ ನಿಷ್ಪಕ್ಷಪಾತತನ ಉಳಿದಿಲ್ಲ. ನಾಡಿನಲ್ಲಿ ವೀರಶೈವರು ಬಹು ಸಂಖ್ಯಾತರಿದ್ದರೂ ಕೇವಲ 72 ಲಕ್ಷ ಎಂಬುದು ಪ್ರಸ್ತುತ ಸರಕಾರದ ಧೋರಣೆೆಯಾಗಿದೆ. ಇದು ಸೂಕ್ತವಲ್ಲ. ಸಮಾಜದ ಹಿರಿಯರ ಅನಿಸಿಕೆಯಂತೆ ವೀರಶೈವ-ಲಿಂಗಾಯತರು 1.50 ಕೋಟಿ ಜನರೆಂಬುದು ಗಣನೆ ಮಾಡಿದ್ದನ್ನೂ ನೋಡಿದರೆ ಸದ್ಯದ ವರದಿ ಅರ್ಥವಿಲ್ಲದ್ದು, ವೀರಶೈವ ಲಿಂಗಾಯತರು ಭಿನ್ನತೆಗೊಳಗಾಗಿ ಸಮಾಜದ ಹಿನ್ನೆಡೆಗೆ ಕಾರಣವಾಗಿದೆ. ಆದ್ದರಿಂದ ವೀರಶೈವ-ಲಿಂಗಾಯತರು ಒಳಪಂಗಡದವರಲ್ಲ,ಒಟ್ಟುಗೂಡಿ ಗಣನೆಗೆ ಬಂದಾದರೆ ಸಮಾಜದ ಮಕ್ಕಳಿಗೆ ಕಲ್ಯಾಣವಾಗುವುದು ಮತ್ತು ಸಮಾಜಕ್ಕೂ ಸಹಕಾರಿಯಾಗುವುದು. ಸಮಾಜಬಾಂಧವರು ಐಕತೆಯನ್ನು ಸಾಧಿಸಲಿ. ಒಳಪಂಗಡವನ್ನು ಮರೆತು ವೀರಶೈವ-ಲಿಂಗಾಯತರು ಬಾಂಧವರೆಲ್ಲರೂ ಒಗ್ಗಟ್ಟನ್ನು ಸಾಧಿಸಿ ಸಮಾಜದ ಹಿತವನ್ನು ಕಾಪಾಡುವಂತಾಗಲಿ ಎಂದು ಹಾರೈಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 