ಎಚ್. ಕೆ ಪಾಟೀಲ ಸೇವಾ ತಂಡದ ಪರೋಪಕಾರಿ ನಡೆಯ ಪ್ರೇರಣೆಯಿಂದ ಅಂಗಾಂಗ ದಾನ ನೋಂದಣಿಗೆ ಸ್ಫೂರ್ತಿ
Inspired by the philanthropic initiative of the H.K. Patil Seva Team, people are motivated to regist
ಲೋಕದರ್ಶನ ವರದಿ
ಗದಗ 31 : ಮುದ್ರಣ ನಗರಿಯಾದ ಗದಗ ಬೆಟಗೇರಿ ಅವಳಿ ನಗರದಲ್ಲಿ ಕಳೆದ ಹಲವಾರು ವರ್ಷಗಳಿಂದ ಎಚ್ ಕೆ ಪಾಟೀಲ್ ಸೇವಾ ತಂಡವು ವಿವಿಧ ಕ್ಷೇತ್ರಗಳಲ್ಲಿ ತನ್ನದೇಯಾದ ವಿಶಿಷ್ಠ ಸೇವೆಯನ್ನು ನೀಡುತ್ತಾ ಬಂದಿರುತ್ತದೆ, ಅದು ಬಡಜನಸಾಮಾನ್ಯರ ಗಂಭೀರ ಖಾಯಿಲೆಗಳಿಗೆ ವೈದ್ಯಕೀಯ ನೆರವು, ಬಡ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗವನ್ನೋದಗಿಸಿ ಸ್ವಾವಲಂಬಿ ಜೀವನಕ್ಕೆ ನೆರವು, ಶುದ್ಧ ನೀರಿನ ಪೂರೈಕೆ, ಅದರಂತೆ ಜಾಗತಿಕವಾಗಿ ಎಷ್ಟೋ ನಾಗರಿಕರು ಬಹು ಅಂಗಾಂಗಗಳ ವೈಫಲ್ಯದಿಂದ ಬಳಳುತ್ತಿರುವರು ಅವರಿಗೆ ಬಹು ಅಂಗಾಂಗಗಳ ದಾನದಿಂದಾಗಿ ಪುನರ್ಜ್ಜಿವನ ನೀಡಬಹುದಾಗಿದೆ. ಉದಾಹರಣೆಗೆ ಮೂತ್ರಪಿಂಡ, ಹೃದಯ, ಕಣ್ಣು, ಲಿವರ್ ಇತ್ಯಾದಿಗಳನ್ನು ನಾವುಗಳು ಸಂಪ್ರದಾಯದ ಮತ್ತು ಧಾರ್ಮಿಕ ವಿಧಿ-ವಿಧಾನಗಳ ಕಟ್ಟುಪಾಡುಗಳ ಬಂಧನಕ್ಕೋಳಗಾಗಿ ನಮ್ಮ ಅಮೂಲ್ಯವಾದ ದೇಹದ ಅಂಗಾಂಗಗಳಿಂದ ಎಂಟು ಜನರ ಜೀವಕ್ಕೆ ಆಧಾರವಾಗಬಹುದಾಗಿದೆ.
ಇದರ ಒಂದು ಅವಿಸ್ಮರಣೀಯ ಪರಿಕಲ್ಪನೆಯ ಅವಲೋಕನವನ್ನು ಸಮಸ್ತ ನಾಗರಿಕರಿಗೂ ಮನವರಿಕೆ ಮಾಡುವ ಸದುದ್ದೇಶದಿಂದ ಪ್ರತಿವರ್ಷ ಆಗಸ್ಟ್ 13 ರಂದು ವಿಶ್ವ ಅಂಗಾಂಗ ದಾನ ದಿನಾಚರಣೆಯನ್ನು ಹಾಗೂ ಭಾರತದಲ್ಲಿ ರಾಷ್ಟೀಯ ಅಂಗಾಂಗ ದಾನ ದಿನಾಚರಣೆಯನ್ನು ಪ್ರತಿವರ್ಷ ಆಗಸ್ಟ್ 3 ರಂದು ಆಚರಿಸಲಾಗುತ್ತದೆ. ಈ ಒಂದು ಪರೋಪಕಾರಿ ಪುಣ್ಯ ಪ್ರಾಪ್ತಿಯ ಸಮಾಜ್ಯೋನ್ಮುಖಿ ಸೇವೆಯಲ್ಲಿ ಎಚ್ ಕೆ ಪಾಟೀಲ್ ಸೇವಾ ತಂಡವು ತನ್ನ ತಂಡದ ಅಧ್ಯಕ್ಷರು ಸಂಯೋಜಕರು ಮತ್ತು ಕ್ಯಾಪ್ಟನಗಳ ನೆರವಿನೊಂದಿಗೆ ಅಂಗಾಂಗ ದಾನದ ನೋಂದಣಿಯ ಸೇವೆಯಲ್ಲಿ ನಿರತವಾಗಿರುತ್ತದೆ. ಸೇವಾ ಮನೋಭಾವನೆಯ ಪ್ರತಿಫಲವಾಗಿ ಸಮಸ್ತ ಕರ್ನಾಟಕ ರಾಜ್ಯದಲ್ಲಿಯೇ ಅಂಗಾಂಗ ದಾನ ನೋಂದಣಿಯಲ್ಲಿ ಗದಗ ಜಿಲ್ಲೆಯು ತೃತೀಯ ಸ್ಥಾನದಲ್ಲಿ ಮುನ್ನಲೆಯನ್ನು ಸಾಧಿಸಿರುತ್ತದೆ.
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ 