ಭಾರತೀಯ ರೆಡ್ ಕ್ರಾಸ್ ಚುನಾವಣೆ: ಡಾ. ವ್ಹಿ.ಡಿ.ಡಾಂಗೆ ಪ್ಯಾನಲ್ಗೆ ಜಯ
Indian Red Cross Election: Dr. W.H.D. Dange panel wins
ಬೆಳಗಾವಿ 08: ಭಾರತೀಯ ರೆಡ್ ಕ್ರಾಸ್ ಚುನಾವಣೆಯಲ್ಲಿ ಡಾ. ವೆಂಕಣ್ಣ ಡಿ ಡಾಂಗೆಯವರ ನೇತೃತ್ವದ ಪ್ಯಾನಲ್ ಪೂರ್ಣ ಪ್ರಮಾಣದ ಜಯಗಳಿಸಿತು. ಅಕ್ಟೋಬರ 30ರಂದು ಜರುಗಿ ಫಲಿತಾಂಶ ನವೆಂಬರ್ 3ರಂದು ಘೋಷಿಸಲಾಯಿತು. ಡಾ. ವಿ.ಡಿ.ಡಾಂಗೆ, ಪ್ರವೀಣ ಹಿರೇಮಠ, ಪ್ರಿಯಾ ಪುರಾಣಿಕ, ಡಾ. ಸಂಜಯ ಸಿದ್ದಣ್ಣವರ, ಅಶೋಕ ಬದಾಮಿ, ದತ್ತಾತ್ರಯ ಮಿಸಾಳೆ, ರವೀಂದ್ರ ತೋಟಗೇರ, ಶಿವಬಸಪ್ಪ ಸಿದ್ನಾಳ, ಶಿವಾನಂದ ಮೂಲಿಮನಿ, ಲೆ. ಕರ್ನಲ್ ವಿನೋದಿನಿ ಶರ್ಮಾ ಆಯ್ಕೆಯಾಗಿದ್ದಾರೆ. ಬಿಮ್ಸ್ ಸಿ.ಇ.ಓ ಸಿದ್ದು ಹುಲ್ಲೋಳಿಯವರು ಚುನಾವಣೆ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಜಯಗಳಿಸಿದ ಸ್ಪರ್ಧಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಸಂಜೆ.7ಘಂಟೆಗೆ ಸಂಸ್ಥೆಯ ಕಛೇರಿಯಲ್ಲಿ ಕಾರ್ಯಕಾರಿ ಮಂಡಳಿ ಸಭೆ ಸೇರಿ ಡಾ. ವಿ.ಡಿ.ಡಾಂಗೆಯವರನ್ನು ಸರ್ವಾನುಮತದಿಂದ ಚೇರಮನ್ರಾಗಿ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರನ್ನಾಗಿ ಡಾ. ಸಂಜಯ ಸಿದ್ದಣ್ಣವನವರ, ಕಾರ್ಯದರ್ಶಿಯಾಗಿ ಶಿವಾನಂದ ಮೂಲಿಮನಿ, ಖಜಾಂಚಿಯಾಗಿ ಲೆ. ಕರ್ನಲ್ ವಿನೋದಿನಿ ಶರ್ಮಾ, ಜಂಟಿ ಕಾರ್ಯದರ್ಶಿಯಾಗಿ ಪ್ರವೀಣ ಹಿರೇಮಠ, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯರಾಗಿ, ದತ್ತಾತ್ರಯ ಮಿಸಾಳೆ ಯವರನ್ನು, ನೇಮಕ ಮಾಡಲಾಯಿತೆಂದು ಚೇರಮನ್ ಡಾಂಗೆ ತಿಳಿಸಿದರು. ರಾಜ್ಯ ವೀಕ್ಷಕರಾಗಿ ಮಹಾಂತೇಶ ಮೀರಾಪುರ ಪಾಲ್ಗೊಂಡಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 