ಭಾರತ - ಬಾಂಗ್ಲಾ ಗಡಿ ಯೋಧರ ದೀಪಾವಳಿ ಸಂಭ್ರಮ
ಅಗರ್ತಲಾ, ಅ 26: ಭಾರತ - ಬಾಂಗ್ಲಾ ಗಡಿ ರಕ್ಷಣಾ ಯೋಧರು ದೀಪಾವಳಿಯ ಶುಭಾಶಯ ವಿನಿಮಯ ಮತ್ತು ಸಿಹಿ ಹಂಚಿಕೊಂಡು ಸಂಭ್ರಮ ಪಟ್ಟಿದ್ದಾರೆ. ದೀಪಾವಳಿಗೆ ಎರಡು ದಿನ ಮುನ್ನವೇ ಶುಕ್ರವಾರ ರಾತ್ರಿ ಭಾರತ - ಬಾಂಗ್ಲಾ ಗಡಿ ರಕ್ಷಣಾ ಯೋಧರು, ಅಖೌರಾ ಚೆಕ್ ಪೋಸ್ಟ್ ಬಳಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ದೀಪಾವಳಿ ಆಚರಣೆ ಎರಡೂ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ವೃದ್ಧಿಸಲಿದೆ ಮತ್ತು ಗಡಿ ಭಾಗದಲ್ಲಿನ ಹಿಂಸಾಚಾರವನ್ನು ತಗ್ಗಿಸಿ ಭಾರತ - ಬಾಂಗ್ಲಾ ಜನರು ಸಹೋದರರಂತೆ ಬಾಳುವ ಉತ್ತಮ ವಾತಾವರಣಕ್ಕೆ ನಾಂದಿ ಹಾಡಲಿದೆ ಎಂದು ಬಾಂಗ್ಲಾದ ಕಮಾಂಡರ್ ಜಹಂಗೀರ್ ಆಲಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 