ಆರ್ಥಿಕ ಸಂಪನ್ಮೂಲ ಸಂಗ್ರಹಕ್ಕೆ ಒತ್ತು-ಜನತೆಗೆ ತೆರಿಗೆ ಬರೆ…!
ಬೆಂಗಳೂರು, ಮಾರ್ಚ್.5, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿ ಜನ ಸಾಮಾನ್ಯರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ನಲ್ಲಿ ಬರೆ ಎಳೆದಿದ್ದಾರೆ. ಪೆಟ್ರೋಲ್ ಮೇಲಿನ ದರವನ್ನು ಶೇ.32 ರಿಂದ 35ಕ್ಕೂ, ಡೀಸೆಲ್ ಮೇಲಿನ ತೆರಿಗೆ ದರವನ್ನು ಶೇ.21 ರಿಂದ 24ಕ್ಕೂ ಏರಿಕೆಯ ಪ್ರಸ್ತಾಪ ಮಾಡಲಾಗಿದೆ. ಇದೇ ಪರಿಣಾಮವಾಗಿ ಇನ್ನುಮುಂದೆ ಒಂದು ಲೀಟರ್ ಪೆಟ್ರೋಲಿಗೆ 1.60 ಪೈಸೆ, ಡೀಸೆಲ್ ಗೆ 1.59 ಪೈಸೆ ಹೆಚ್ಚಾಗಲಿದೆ. ಮದ್ಯದ ಮೇಲೆ ಹಾಲಿ ಇರುವ ತೆರಿಗೆ ಮೇಲೆ ಶೇ.6 ರಷ್ಟು ಹೊಸ ಅಬಕಾರಿ ತೆರಿಗೆ ವಿಧಿಸಲಾಗಿದ್ದು, ಪಾನಪ್ರತಿಯರಿಗೂ ಒಂದು ರೀತಿಯ ಕಸಿವಿಸಿ ಉಂಟುಮಾಡಿ, ಅವರ ಜೇಬಿಗೂ ನೇರ ಕೈ ಹಾಕಿದ್ದಾರೆ. ಮಂದಗತಿಯ ಆರ್ಥಿಕ ಹಿನ್ನೆಲೆಯ ಕಾರಣ ಹೊಸ ಸಂಪನ್ಮೂಲ ಕ್ರೂಢೀಕರಿಸಲು ಇರುವ ಸೀಮಿತ ಅವಕಾಶಗಳನ್ನು ಮುಖ್ಯಮಂತ್ರಿಗಳು ಬಳಕೆ ಮಾಡಿಕೊಂಡಿದ್ದಾರೆ. 2020-21ನೇ ಸಾಲಿನ ಆಸನ ಸಾಮರ್ಥ್ಯ 12ಕ್ಕಿಂತ ಹೆಚ್ಚು ಹಾಗೂ 20 ಆಸನಗಳನ್ನು ಮೀರದ ಪ್ರಯಾಣಿಕರನ್ನು ಕೊಂಡೊಯ್ಯುವ ಒಪ್ಪದದ ವಾಹನಗಳ ಪ್ರತಿ ಆಸನಕ್ಕೂ 900 ರೂಪಾಯಿ ಮೋಟಾರು ವಾಹನ ತೆರಿಗೆ ವಿಧಿಸಲಾಗಿದೆ. ಈ ಮೂಲಕ ಸಾರಿಗೆ, ಪೆಟ್ರೋಲ್ ಮತ್ತು ಅಬಕಾರಿ ವಲಯದ ಮೂಲಗಳಿಂದ ಹೆಚ್ಚಿನ ಆರ್ಥಿಕ ಸಂಪನ್ಮೂಲ ಸಂಗ್ರಹಣೆಗೆ ಮುಖ್ಯಮಂತ್ರಿಗಳು ಕೈ ಹಾಕಿದ್ದಾರೆ.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 