ಆಶ್ರಯ ನಿವೇಶನ ಹಂಚಿಕೆಯಲ್ಲಿ ದುಡ್ಡಿನ ಆಮಿಷಕ್ಕೆ ಒಳಗಾಗಿಲ್ಲ: ಆರೋಪದಲ್ಲಿ ಹುರುಳೆಲ್ಲ: ಈರ್ಪ ಹಿರೇಮನಿ
I was not lured by money in the allocation of shelters: There is no substance in the allegations: Ir
ಆಶ್ರಯ ನಿವೇಶನ ಹಂಚಿಕೆಯಲ್ಲಿ ದುಡ್ಡಿನ ಆಮಿಷಕ್ಕೆ ಒಳಗಾಗಿಲ್ಲ: ಆರೋಪದಲ್ಲಿ ಹುರುಳೆಲ್ಲ: ಈರ್ಪ ಹಿರೇಮನಿ
ಕುಕನೂರು 25: ಆಶ್ರಯ ನಿವೇಶನ ಹಂಚಿಕೆಯಲ್ಲಿ ಹನುಮಂತ ಗೌಡ ಚಂಡೂರು ಹಾಗೂ ಪಿಡಿಓ, ಅಧ್ಯಕ್ಷರ ಯಾವುದೇ ದುಡ್ಡಿನ ಆರೋಪದಲ್ಲಿ ಹುರುಳೆಲ್ಲ ಅಧ್ಯಕ್ಷೆ ಹಣ ಪಡೆದು ನಿವೇಶನ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಕ್ಕೆ ಸಾಕ್ಷಿ ಪುರಾವೆ ಒದಗಿಸಿ ಮಾತನಾಡಬೇಕು ಎಂದು ಚಂಡೂರು ಗ್ರಾಮದ ಗ್ರಾಮಸ್ಥ ಈರ್ಪ ಹಿರೇಮನಿ ಹೇಳಿದರು. ಅವರು ರವಿವಾರದಂದು ಕುಕುನೂರು ಪಟ್ಟಣದ ನೀರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿನ್ನೆ ಶನಿವಾರದಂದು ಪಟ್ಟದಲ್ಲಿ ಸುದ್ದಿಗೋಷ್ಠಿಯಲ್ಲಿ ಚಂಡೂರು ಗ್ರಾಮದ ಕೇಲವೊಂದಿಷ್ಟು ಜನ ಆರೋಪ ಮಾಡಿದ್ದು ಒಂದು ಕುಟುಂಬಕ್ಕೆ ಎರಡೆರಡು ನಿವೇಶನ ಕೇಳುತಿದ್ದು, ಹಾಗೇ ಕೊಡಲು ಬರುವುದಿಲ್ಲಾ ಎಂದು ಹೇಳಿದ್ದಕ್ಕೆ ತಮಗೆ ತಿಳಿದಂತೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. ಅಧ್ಯಕ್ಷರು, ಪಿಡಿಒ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಕೋಟಾ ಪ್ರಕಾರ ಪ್ರತಿಯೊಬ್ಬರಿಗೂ ನಿವೇಶನ ಹಂಚಿಕೆ ಮಾಡಿದ್ದಾರೆ.ಪರಿಶಿಷ್ಟ ಜಾತಿ, ಪಂಗಡ, ವಿಕಲಚೇತನರಿಗೆ, ಮಹಿಳೆಯರಿಗೆ, ನಿವೇಶನ ರಹಿತರಿಗೆ ಇತರರಿಗೆ ಸಮರ್ಕವಾಗಿ ಹಂಚಿಕೆ ಮಾಡಲಾಗಿದೆ. ಶಿರೂರು ಗ್ರಾಮ ಪಂಚಾಯತಿಯಲ್ಲಿ ಯಾವುದೇ ಗ್ರಾಮ ಸಭೆ ಇದ್ದರು ಪ್ರತಿ ಗ್ರಾಮ ಸಭೆಯನ್ನು ಎರಡು, ಮೂರು ವರ್ಷದಿಂದ ಅಲ್ಲಿಯೇ ಮಾಡುತ್ತಾ ಬಂದಿದ್ದೇವೆ. ಇಷ್ಟು ವರ್ಷ ಎಲ್ಲಾ ಗ್ರಾಮ ಸಭೆಗಳು ಅಲ್ಲಿಯೇ ನಡೆದರು ಸುಮ್ಮನಿದ್ದರು.ಈಗ ತಾವು ಹೇಳಿದಂತೆ ಒಂದೇ ಕುಟುಂಬದವರಿಗೆ ಎರಡು ಮೂರು ನಿವೇಶನ ನೀಡದಿದ್ದಕ್ಕೆ ಕ್ಯಾತೆ ತೆಗೆದು ಮುಖಂಡರ ಹಾಗೂ ಪಿಡಿಒ, ಅಧ್ಯಕ್ಷರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಅವರ ಹೆಸರಿಗೆ ಕಪ್ಪು ಮಸಿ ಬಳಿಯಲು ಯತ್ನಿಸಿದ್ದಾರೆ.ನಿವೇಶನಗಳನ್ನು ಗ್ರಾಮ ಸಭೆ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ,ಯಾವುದೇ ಲೋಪ ದೋಷಗಳು ಇರುವುದಿಲ್ಲ ನಿನ್ನೆ ಹೇಳಿರುವ ಹೇಳಿಕೆಗಳಲ್ಲ ಸುಳ್ಳು ಎಂದು ಹೇಳಿದರು. ನಿನ್ನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ದ್ಯಾಮವ್ವ ಹಂದ್ರಾಳ ಎಂಬ ಮಹಿಳೆ ನಿವೇಶನಕ್ಕಾಗಿ 20 ಸಾವಿರ ಹಣವನ್ನು ನೀಡಿರುವದಾಗಿ ಹೇಳಿಕೆ ನೀಡಿದ್ದು ಶುದ್ಧ ಸುಳ್ಳು ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ದ್ಯಾಮವ್ವ ಹಂದ್ರಾಳ ಮಗಳಾದ ಯಲ್ಲಮ್ಮ ಹಂದ್ರಾಳ ಹೇಳಿದರು.ಈ ಸಂದರ್ಭದಲ್ಲಿಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಮ್ಮ ಸಣ್ಣ ಹನುಮಪ್ಪ ಜ್ಯೋತಿ, ಶಂಕ್ರ್ಪ ಕುರಿ ಗ್ರಾಮ ಪಂಚಾಯತ್ ಸದಸ್ಯರು, ಈರ್ಪ ಡಿ ಹಿರೇಮನಿ, ದೇವಪ್ಪ ಕುರಿ, ಗುಡದಪ್ಪ ನಿಂಗಾಪೂರ, ಲಕ್ಷ್ಮಣ ತಳವಾರ, ಶಶಿಕಲಾ ಸಂಖಿನ, ಶಾರವ್ವ ಬಳಗೇರಿ, ಹನುಮವ್ವ ತಳಕಲ, ಅನಸಮ್ಮ ತಳಬಾಳ, ಯಲ್ಲಮ್ಮ ಹಂದ್ರಾಳ, ಈರ್ಪ ನಿಂಗಾಪುರ, ಹನುಮಪ್ಪ ಜ್ಯೋತಿ, ದೇವಪ್ಪ ಇತರರು ಇದ್ದರು,ವರಡಿ ಚನ್ನಯ್ಯ ಹಿರೇಮಠ ಕುಕನೂರುಆಶ್ರಯ ನಿವೇಶನ ಹಂಚಿಕೆಯಲ್ಲಿ ಹನುಮಂತ ಗೌಡ ಚಂಡೂರು ಹಾಗೂ ಪಿಡಿಓ, ಅಧ್ಯಕ್ಷರ ಯಾವುದೇ ದುಡ್ಡಿನ ಆರೋಪದಲ್ಲಿ ಹುರುಳೆಲ್ಲ ಅಧ್ಯಕ್ಷೆ ಹಣ ಪಡೆದು ನಿವೇಶನ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಕ್ಕೆ ಸಾಕ್ಷಿ ಪುರಾವೆ ಒದಗಿಸಿ ಮಾತನಾಡಬೇಕು ಎಂದು ಚಂಡೂರು ಗ್ರಾಮದ ಗ್ರಾಮಸ್ಥ ಈರ್ಪ ಹಿರೇಮನಿ ಹೇಳಿದರು. ಅವರು ರವಿವಾರದಂದು ಕುಕುನೂರು ಪಟ್ಟಣದ ನೀರೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿನ್ನೆ ಶನಿವಾರದಂದು ಪಟ್ಟದಲ್ಲಿ ಸುದ್ದಿಗೋಷ್ಠಿಯಲ್ಲಿ ಚಂಡೂರು ಗ್ರಾಮದ ಕೇಲವೊಂದಿಷ್ಟು ಜನ ಆರೋಪ ಮಾಡಿದ್ದು ಒಂದು ಕುಟುಂಬಕ್ಕೆ ಎರಡೆರಡು ನಿವೇಶನ ಕೇಳುತಿದ್ದು, ಹಾಗೇ ಕೊಡಲು ಬರುವುದಿಲ್ಲಾ ಎಂದು ಹೇಳಿದ್ದಕ್ಕೆ ತಮಗೆ ತಿಳಿದಂತೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.ಅಧ್ಯಕ್ಷರು, ಪಿಡಿಒ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಕೋಟಾ ಪ್ರಕಾರ ಪ್ರತಿಯೊಬ್ಬರಿಗೂ ನಿವೇಶನ ಹಂಚಿಕೆ ಮಾಡಿದ್ದಾರೆ.ಪರಿಶಿಷ್ಟ ಜಾತಿ, ಪಂಗಡ, ವಿಕಲಚೇತನರಿಗೆ, ಮಹಿಳೆಯರಿಗೆ, ನಿವೇಶನ ರಹಿತರಿಗೆ ಇತರರಿಗೆ ಸಮರ್ಕವಾಗಿ ಹಂಚಿಕೆ ಮಾಡಲಾಗಿದೆ. ಶಿರೂರು ಗ್ರಾಮ ಪಂಚಾಯತಿಯಲ್ಲಿ ಯಾವುದೇ ಗ್ರಾಮ ಸಭೆ ಇದ್ದರು ಪ್ರತಿ ಗ್ರಾಮ ಸಭೆಯನ್ನು ಎರಡು, ಮೂರು ವರ್ಷದಿಂದ ಅಲ್ಲಿಯೇ ಮಾಡುತ್ತಾ ಬಂದಿದ್ದೇವೆ. ಇಷ್ಟು ವರ್ಷ ಎಲ್ಲಾ ಗ್ರಾಮ ಸಭೆಗಳು ಅಲ್ಲಿಯೇ ನಡೆದರು ಸುಮ್ಮನಿದ್ದರು.ಈಗ ತಾವು ಹೇಳಿದಂತೆ ಒಂದೇ ಕುಟುಂಬದವರಿಗೆ ಎರಡು ಮೂರು ನಿವೇಶನ ನೀಡದಿದ್ದಕ್ಕೆ ಕ್ಯಾತೆ ತೆಗೆದು ಮುಖಂಡರ ಹಾಗೂ ಪಿಡಿಒ, ಅಧ್ಯಕ್ಷರ ಮೇಲೆ ಇಲ್ಲ ಸಲ್ಲದ ಆರೋಪ ಹೊರಿಸಿ ಅವರ ಹೆಸರಿಗೆ ಕಪ್ಪು ಮಸಿ ಬಳಿಯಲು ಯತ್ನಿಸಿದ್ದಾರೆ.ನಿವೇಶನಗಳನ್ನು ಗ್ರಾಮ ಸಭೆ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು ,ಯಾವುದೇ ಲೋಪ ದೋಷಗಳು ಇರುವುದಿಲ್ಲ ನಿನ್ನೆ ಹೇಳಿರುವ ಹೇಳಿಕೆಗಳಲ್ಲ ಸುಳ್ಳು ಎಂದು ಹೇಳಿದರು. ನಿನ್ನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ದ್ಯಾಮವ್ವ ಹಂದ್ರಾಳ ಎಂಬ ಮಹಿಳೆ ನಿವೇಶನಕ್ಕಾಗಿ 20 ಸಾವಿರ ಹಣವನ್ನು ನೀಡಿರುವದಾಗಿ ಹೇಳಿಕೆ ನೀಡಿದ್ದು ಶುದ್ಧ ಸುಳ್ಳು ಎಂದು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ದ್ಯಾಮವ್ವ ಹಂದ್ರಾಳ ಮಗಳಾದ ಯಲ್ಲಮ್ಮ ಹಂದ್ರಾಳ ಹೇಳಿದರು.ಈ ಸಂದರ್ಭದಲ್ಲಿಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಮ್ಮ ಸಣ್ಣ ಹನುಮಪ್ಪ ಜ್ಯೋತಿ, ಶಂಕ್ರ್ಪ ಕುರಿ ಗ್ರಾಮ ಪಂಚಾಯತ್ ಸದಸ್ಯರು, ಈರ್ಪ ಡಿ ಹಿರೇಮನಿ, ದೇವಪ್ಪ ಕುರಿ, ಗುಡದಪ್ಪ ನಿಂಗಾಪೂರ, ಲಕ್ಷ್ಮಣ ತಳವಾರ, ಶಶಿಕಲಾ ಸಂಖಿನ, ಶಾರವ್ವ ಬಳಗೇರಿ, ಹನುಮವ್ವ ತಳಕಲ, ಅನಸಮ್ಮ ತಳಬಾಳ, ಯಲ್ಲಮ್ಮ ಹಂದ್ರಾಳ, ಈರ್ಪ ನಿಂಗಾಪುರ, ಹನುಮಪ್ಪ ಜ್ಯೋತಿ, ದೇವಪ್ಪ ಇತರರು ಇದ್ದರು,
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 