ಮಂತ್ರಿಗಳಿಗೆ ಐ-ಪ್ಯಾಡ್, ಕಾಗದ ರಹಿತವಾಗಲಿದೆ ಇನ್ನೂ ಯುಪಿ ಸಂಪುಟ ಸಭೆ
ಲಕ್ನೋ, ಫೆ13 : ಯೋಗಿ ಆದಿತ್ಯನಾಥ ಸರ್ಕಾರ ಶಾಸಕರಿಗೆ ಐ-ಪ್ಯಾಡ್ಗಳನ್ನು ನೀಡಲು ನಿರ್ಧರಿಸಿದ್ದು ಇನ್ನು ಮುಂದೆ ಸಚಿವ ಸಂಪುಟ ಸಭೆ ಕಾಗದರಹಿತವಾಗಲಿದೆ.
ಸಿಎಂ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಎಲ್ಲಾ ಸಂಪುಟ ಸಚಿವರಿಗೆ ಐ-ಪ್ಯಾಡ್ ನೀಡಲಾಗುವುದು. ಮುಂದಿನ ವಾರದಿಂದಲೇ ನಡೆಯಲಿರುವ ಎಲ್ಲ ಸಂಪುಟ ಸಭೆ ಕಾಗದರಹಿತವಾಗಲಿದೆ ಎಂದೂ ಸಿಎಂ ಕಚೇರಿ ಗುರುವಾರ ಪ್ರಕಣೆಯಲ್ಲಿ ತಿಳಿಸಿದೆ.
ಆದಿತ್ಯನಾಥ್ ಅವರು ತಮ್ಮ ಹೆಚ್ಚಿನ ಕೆಲಸಗಳನ್ನು ಪತ್ರಗಳ ರೂಪಕ್ಕೆ ಬದಲಾಗಿ ಗೆ ಐಪ್ಯಾಡ್ ಮೂಲಕವೇ ಮಾಡುತ್ತಿದ್ದು, ಇದನ್ನು ಇತರೆ ಮಂತ್ರಿಗಳು ಅನುಸರಿಸಬೇಕೆಂದು ಬಯಸುತ್ತಿದ್ದಾರೆ.
ಮುಂದಿನವಾರ ನಡೆಯಲಿರುವ ಸಚಿವ ಸಂಪುಟ ಸಭೆ ಕಾಗದರಹಿತವಾಗಿರುತ್ತದೆ ಮತ್ತು ಟಿಪ್ಪಣಿಗಳನ್ನು ಆಯಾ ಐಪ್ಯಾಡ್ ಮೂಲಕ ಸಚಿವರಿಗೆ ಕಳುಹಿಸಲಾಗುತ್ತದೆ. ತೊಂದರೆಗಳನ್ನು ಎದುರಿಸುತ್ತಿರುವ ಶಾಸಕರಿಗೆ ಸರ್ಕಾರವು ತಮ್ಮ ಟ್ಯಾಬ್ಲೆಟ್ಗಳನ್ನು ಸುಲಭವಾಗಿ ನೋಡುವಂತೆ , ಉತ್ತರಿಸುವಂತೆ ತರಬೇತಿ ಸಹ ನೀಡುತ್ತದೆ.
ಇತ್ತೀಚಿನ ದಿನಗಳಲ್ಲಿ, ಆದಿತ್ಯನಾಥ್ ಐಪ್ಯಾಡ್ ಅನ್ನು ವ್ಯಾಪಕವಾಗಿ ಬಳಸುತ್ತಿದ್ದಾರೆ ಮತ್ತು ಡಿಫೆನ್ಸ್ ಎಕ್ಸ್ಪೋ 2020 ನಲ್ಲಿ ಟಿಪ್ಪಣಿಗಳನ್ನು ಓದುವುದು ಮತ್ತು ತೆಗೆದುಕೊಳ್ಳುವುದನ್ನು ಸಹ ಗುರುತಿಸಲಾಗಿದೆ.
ಇದನ್ನು ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಭಾವಿತರಾಗಿ ಕಲಿತಿದ್ದಾರೆ ಎಂದು ಯುಪಿ ಮುಖ್ಯಮಂತ್ರಿಯ ಆಪ್ತ ಸಹಾಯಕ ಹೇಳಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 