ಶೋಭಾ ಕರಂದ್ಲಾಜೆ ಅವರಿಂದ ಉಚಿತ ದಿನಸಿ ವಿತರಣೆ
ಬೆಂಗಳೂರು,
ಏ.19, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಚೋಳ ನಾಯಕನ ಹಳ್ಳಿಯಲ್ಲಿ ಸಂಸದೆ
ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಡಾ ವೈ. ಎ. ನಾರಾಯಣ ಸ್ವಾಮಿ ಅವರ
ನೇತೃತ್ವದಲ್ಲಿ ಕೊರೊನಾ ಕಾರಣದಿಂದ ಸಂಕಷ್ಟ ಕ್ಕೆ ಸಿಲುಕಿರುವ ಬಡವರು, ಕಟ್ಟಡ
ಕಾರ್ಮಿಕರು, ಕೊಳಗೇರಿ ನಿವಾಸಿಗಳು, ಪೌರ ಕಾರ್ಮಿಕರಿಗೆ ಇಂದು ಉಚಿತ ದಿನಸಿ
ವಿತರಿಸಲಾಯಿತು.
ಶೋಭಾ ಕರಂದ್ಲಾಜೆ ಮಾತನಾಡಿ, ಈಗಾಗಲೇ ಈ ಭಾಗದಲ್ಲಿ ಅಡುಗೆ ಮನೆ
ನಿರ್ಮಿಸಿ ಪ್ರತಿದಿನ ಆಹಾರ ವಿತರಿಸಲಾಗುತ್ತಿದೆ. ಸುಮಾರು ಒಂದು ಸಾವಿರ ಮಂದಿಗೆ ದಿನಸಿ
ವಿತರಿಸಲಾಯಿತು. ಲಾಕ್ ಡೌನ್ ಆದಾಗಿನಿಂದ ಹಲವಾರು ಜನ ರಾಜಕಾರಣಿಗಳು ದಿನಸಿ
ವಿತರಿಸುತ್ತಿದ್ದಾರೆ. ಹೆಬ್ಬಾಳದಲ್ಲಿ ನಾರಾಯಣ ಸ್ವಾಮಿ ಕೂಡಾ ಬಡಜನರಿಗೆ ದಿನಸಿ
ವಿತರಿಸುತ್ತಿದ್ದಾರೆ ಎಂದರು.ಪಡಿತರ ಚೀಟಿ ಇಲ್ಲದವರೂ ಬಹಳ ಜನ ಇದ್ದಾರೆ. ಅವರೆಲ್ಲರಿಗೂ
ಇದರಿಂದ ಅನುಕೂಲ ಆಗುತ್ತಿದೆ. ದಿನಸಿ ಮಾತ್ರವಲ್ಲದೇ ಪ್ರತಿದಿನ ಆಹಾರ ವಿತರಣೆ ಕೂಡಾ
ಮಾಡಲಾಗುತ್ತಿದೆ. ಕೊರೊನಾ ಆದಷ್ಟು ಬೇಗ ಹೋಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ
ಎಂದರು.ಡಾ. ವೈ ಎ ನಾರಾಯಣ ಸ್ವಾಮಿ ಮಾತನಾಡಿ, ಲಾಕ್ ಡೌನ್ ಎಲ್ಲಿವರೆಗೂ
ಮುಂದುವರೆಯುತ್ತದೆಯೋ , ಅಲ್ಲಿಯವರೆಗೂ ಅನ್ನ ದಾಸೋಹ ನಡೆಸಲಾಗುವುದು. ಈ ಭಾಗದಲ್ಲಿ
ಬೇರೆ ರಾಜ್ಯಗಳ ಬಹುತೇಕ ಜನ ಸಿಲುಕಿ ಹಾಕಿಕೊಂಡಿದ್ದಾರೆ. ಅಂತಹವರಿಗೆ ಆಹಾರಕ್ಕೆ ಬಹಳ
ತೊಂದರೆ ಆಗುತ್ತಿದೆ. ಪಡಿತರ ಇಲ್ಲದವರಿಗೂ ನಾವು ದಿನಸಿ ವಿತರಣೆ ಮಾಡುತ್ತಿದ್ದೇವೆ
ಎಂದರು.
ಬಹುಕೋಟಿ ಹಣ ವಂಚನೆ : ಆದಿತ್ಯರಾಜ್ ಕೇಸು ಸಿಐಡಿಗೆ, ಸಿಇಓ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ, ಏರ್ಪೋರ್ಟ್ ಗಳಿಗೆ ಮಾಹಿತಿ ರವಾನೆ
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ 