ಕೆನಡಾ ಮೂಲದ ಕಂಪನಿಯಿಂದ ಉದ್ಯಮಿಗೆ ವಂಚನೆ
ಬೆಂಗಳೂರು, ಫೆ 3, ಕೆನಡಾ ಮೂಲದ ಕಂಪನಿಯಿಂದ ತಮಗೆ 42 ಲಕ್ಷ ರೂ ವಂಚನೆಯಾಗಿದೆ ಎಂದು ಆರೋಪಿಸಿ ಉದ್ಯಮಿಯೊಬ್ಬರು ಸಿಐಡಿ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಂಗಳೂರಿನ ಉದ್ಯಮಿ ಮಲ್ಲೇಶ್ ಲಿಂಗಾಚಾರ್ ಎಂಬುವವರು ಐವರ ವಿರುದ್ಧ ದೂರು ನೀಡಿದ್ದಾರೆ. ಕೆನಡಾ ಮೂಲದ ಕಂಪನಿ ಮುಖ್ಯಸ್ಥ ಅಲೆಕ್ಸ್ ವುಲ್ಫ್, ಜೇಮ್ಸ್ ಗೋಲ್ಡ್ ಬನ್ ಹಾಗೂ ಭಾರತ ಮೂಲದ ಕವಿತಾ ಠಾಕೂರ್, ಪದ್ಮನಾಭನ್, ಕರುಣಾ ಐವರು ತಮಗೆ ವಂಚನೆ ಮಾಡಿದ್ದಾರೆ ಎಂದು ಮಲ್ಲೇಶ್ ಅವರು ಆರೋಪಿಸಿದ್ದಾರೆ. ಕೆನಡಾದ ಕ್ಯಾನ್ಸರ್ ಸಂಶೋಧನಾ ಕೇಂದ್ರವೊಂದಕ್ಕೆ ಕಚ್ಚಾ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದೆ. ಆದರೆ, ಹಣ ಪಾವತಿ ಸಂದರ್ಭದಲ್ಲಿ ತಮಗೆ 42 ಲಕ್ಷ ರೂ ವಂಚಿಸಲಾಗಿದೆ ಎಂದು ಮಲ್ಲೇಶ್ ಅವರು ದೂರಿದ್ದಾರೆ. ಸದ್ಯ ಪೊಲೀಸರು ಉದ್ಯಮಿ ಮಲ್ಲೇಶ್ ಅವರ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 