ಎಎಸ್‌ಐ ಶಿವಾನಂದ ಕಟ್ಟಿಮನಿಗೆ ಸನ್ಮಾನ

Felicitation for ASI Shivanand Kattimani

ವಿಜಯಪುರ 05:  ವಿಶ್ವ ಪರಿಸರ ದಿನಾರಣೆ ಅಂಗವಾಗಿ ಪರಿಸರ ಪ್ರೇಮ ಹಾಗೂ ಅವರ ದಕ್ಷ ಸೇವೆಗೆ ಹೆಸರುವಾಸಿಯಾದ, ಪರಿಸರ ಪ್ರೇಮಿ, ಸಿಎಂ ಪದಕ ಪುರಸ್ಕೃತ ಎಎಸ್‌ಐ ಶಿವಾನಂದ ಕಟ್ಟಿಮನಿ ಅವರನ್ನು ಸುವಿಧಾ ಸಾಮಾಜಿಕ ಸಂಸ್ಥೆ ವಿಜಯಪುರ ವತಿಯಿಂದ ವಿಜಯಪುರ ಸುವಿಧಾ ಸಂಸ್ಥೆಯ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. 

ಈ ಸಂದರ್ಭದಲ್ಲಿ ಸುವಿಧಾ ಸಂಸ್ಥೆಯ ಅಧ್ಯಕ್ಷರಾದ ಫಯಾಜ ಕಲಾದಗಿ, ಪದಾಧಿಕಾರಿಗಳಾದ ಡಾ. ಅಶೋಕ ಕುಮಾರ ಜಾಧವ, ಮೊಹ್ಮದ ನಶೀಮ ರೋಜಿನ್‌ದಾರ, ಮೊಹ್ಮದ ಸಾಧಿಕ ಜಾನ್ವೇಕರ, ಬಸವರಾಜ ಹುದ್ಲೂರ, ಲತೀಫ ಕಲಾದಗಿ, ದಾದಾಪೀರ ಮುಜಾವರಿ, ಜಯಂರಾಮ ಜಾಧವ, ರಾಮಣ್ಣಾ ಪಾಟೀಲ, ಪಿದಾ ಕಲಾದಗಿ, ದಸ್ತಗೀರ ಶಾನವಾಲೆ, ಭೀಮಪ್ಪ ಮುಧೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.