ಸಂಭ್ರಮದಿಂದ ಸೀಗೆ ಹುಣ್ಣಿಮೆ ಹಬ್ಬ ಆಚರಿಸಿದ ರೈತರು
Farmers celebrate the full moon festival of the Seege River with joy
ಸಂಭ್ರಮದಿಂದ ಸೀಗೆ ಹುಣ್ಣಿಮೆ ಹಬ್ಬ ಆಚರಿಸಿದ ರೈತರು
ರಾಣೆಬೆನ್ನೂರು 07: ಹೊರವಲಯದ ಜಮೀನುಗಳು ಸೇರಿದಂತೆ, ತಾಲೂಕಿನಾದ್ಯಂತ ರೈತರು ಸೀಗೆ ಹುಣ್ಣಿಮೆ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದೊಂದಿಗೆ ಬಂಧು-ಬಳಗದೆಲ್ಲ ಸೇರಿ, ಸಂಭ್ರಮದೊಂದಿಗೆ ಆಚರಿಸಿದರು.
ರೈತರು ಜಮೀನಿನಲ್ಲಿ ಬನ್ನಿ ಮಹಾಂಕಾಳಿಗೆ ಹಾಗೂ ಕೌರವರು, ಪಾಂಡವರ ಹೆಸರಿನಲ್ಲಿ ಕಲ್ಲಿನ ಮೂರ್ತಿಗಳಿಗೆ ಮತ್ತು ಭೂತಾಯಿಗೆ ಪೂಜೆ ಸಲ್ಲಿಸಿದರು. ಪ್ರತೀವರ್ಷವೂ ಚೆನ್ನಾಗಿ ಮಳೆ ಸುರಿದು ಬೆಳೆಗಳು ಸಮೃದ್ದಿಯಾಗಿ ಬರಲಿ ಮತ್ತು ಸಕಲ ಜೀವ ರಾಶಿಗಳು ನೆಮ್ಮದಿಯಾಗಿ ಬದುಕಲೆಂದು ಹಾರೈಸಿ ರೈತರು ಭೂತಾಯಿಗೆ ರೊಟ್ಟಿ, ಚಟ್ನಿ, ಪಲ್ಯ, ಹಪ್ಪಳ, ಸಂಡಿಗೆ, ಉಂಡಿಗಡಬು, ಕರಿಗಡಬು, ಶೇಂಗಾ ಹೋಳಿಗೆ, ಎಳ್ಳು ಹೋಳಿಗೆ ಚೆರಗ ಚೆಲ್ಲಿದರು.
ರೈತ ಬಾಂಧವರು ಐದು ಸುತ್ತು ಭೂತಾಯಿಗೆ ಪ್ರದಕ್ಷಿಣಿ ಹಾಕುವ ಮೂಲಕ ಹೂಲಿಗೊ..ಹೂ ಲಿಗೂ.. ವಿವಿಧ ಭಕ್ಷ ಬೋಜನೆಗಳಿಂದ ತಯಾರಿಸಿದ ಎಡೆಯನ್ನು ಚರಗದ ರೂಪದಲ್ಲಿ ಭಕ್ತಿ ಮತ್ತು ಭಾವದೊಂದಿಗೆ ಭೂತಾಯಿಗೆ ಸಮರ್ಿಸಿ ಧನ್ಯತೆ ಪಡೆದರು. ತದನಂತರ ರೈತ ಬಾಂಧವರು ಹಾಗೂ ಕುಟುಂಬ ಸದಸ್ಯರು ಎಲ್ಲರೂ ಒಂದು ಕಡೆಗೆ ಕುಳಿತು ಊಟವನ್ನು ಸವಿಯುವ ದೃಶ್ಯವು ಎಲ್ಲೆಡೆಯೂ ಕಂಡು ಬಂದಿತು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 