ವರ್ಷದ ಆದರ್ಶ ಮಹಿಳೆ ಡಾ. ಸ್ವಾತಿ ವೈದ್ಯ ಅವರಿಗೆ ಸನ್ಮಾನ
Dr. Swati Vaidya honored as the ideal woman of the year
ಘಟಪ್ರಭಾ 08: ವಿಜಯ ಕರ್ನಾಟಕ, ಡೆಕ್ಕನ್ ಹೆರಾಲ್ಡ್ ಬೆಂಗಳೂರು ಮಿರರ್ ಪತ್ರಿಕಾ ಸಮೂಹದ ಈ ವರ್ಷದ ಆದರ್ಶ ಮಹಿಳಾ ಸಾಧಕಿ ಪ್ರಶಸ್ತಿಗೆ ಭಾಜನರಾದ ಘಟಪ್ರಭಾ ಕೆ ಎಚ್ ಆಯ್ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾಕ್ಟರ್ ಸ್ವಾತಿ ಘನಶ್ಯಾಮ ವೈದ್ಯಅವರಿಗೆ ಶನಿವಾರ ದಿನಾಂಕ 02-04-2026 ರಂದು ಕೆ ಎಚ್ ಆಯ್ ಸಾಂಸ್ಕೃತಿಕ ಭವನದಲ್ಲಿ ನಡೆದ ಭವ್ಯ ಕಾರ್ಯಕ್ರಮದಲ್ಲಿ ಘಟಪ್ರಭಾದ ವಿವಿಧ ರಂಗಗಳಲ್ಲಿಯ ಪ್ರಮುಖರು ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಶಕುಂತಲಾ ಮತ್ತು ಶ್ರೀಕಾಂತ ಮಹಾಜನ ದಂಪತಿಗಳು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ವಂದನಾ ಮತ್ತು ರಾಮ ಕತ್ತಿ ದಂಪತಿಗಳು, ಮಲ್ಲಿಕಾರ್ಜುನ ಕಾರ್ತಿಕ ಸೇವಾ ಸಮಿತಿ, ಕೆಎಚ್ ಆಯ್ ಸಿಬ್ಬಂದಿಗಳು ಘಟಪ್ರಭಾ ವೈದ್ಯಕೀಯ ಸಂಘದ ಸದಸ್ಯರು, ಸೇರಿದಂತೆ ಹಲವಾರು ಗಣ್ಯರು ಸತ್ಕಾರ ಮಾಡಿದರು. ಮಾಜಿ ಸಚಿವ ಆರ್ ಎಮ್ ಪಾಟೀಲ, ರಾಮಣ್ಣ ಹುಕ್ಕೇರಿ, ಡಾ. ವಿಲಾಸ ನಾಯಿಕವಾಡಿ ಸುರೇಶ್ ಪಾಟೀಲ ಸೇರಿದಂತೆ ಹಲವಾರು ಗಣ್ಯರು ಮಾತನಾಡಿದರು, ಬಸವರಾಜ ಹಟ್ಟಿಗೌಡರ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸಾನಿಧ್ಯವನ್ನು ಗುಬ್ಬಲಗುಡ್ಡ ಕೆಂಪಯ್ಯ ಸ್ವಾಮಿಗಳ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮತ್ತು ಘಟಪ್ರಭಾ ಹೊಸ ವಿರೂಪಾಕ್ಷ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು.ಗುರುಬಸಯ್ಯಾ ಕಪೂರಮಠ, ಸುಭಾಷ್ ದಡ್ಡೀಕರ, ಸುಭಾಷ್ ಗಾಯಕವಾಡ ,ಭೂಪಾಲ್ ಖೆಮಲಾಪುರೆ, ರಾಜು ಬಬಲಾದಿ, ಮಲ್ಲಿಕಾರ್ಜುನ ಗೌರಾಣಿ,ನಾಗರಾಜ್ ಹುಡೇದಾರ, ಬಸವರಾಜ ಹೊಸೂರ, ಪ್ರಕಾಶ ಗಾಯಕವಾಡ, ಕೆ ಎಚ್ ಆಯ್ ಸಿಬ್ಬಂದಿ ಮತ್ತು ಹಿರಿಯ ನಾಗರೀಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 