ವಿಜಯಪುರ 02: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರದ 58 ವರ್ಷ ವಯಸ್ಸಿನ ಧರ್ಮಪ್ಪ ಕೃಷ್ಣಪ್ಪ ರಾಠೋಡ ಎಂಬ ವ್ಯಕ್ತಿ ದಿನಾಂಕ : 05-05-2025ರಿಂದ ಕಾಣೆಯಾಗಿರುವ ಕುರಿತು ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾಣೆಯಾದ ವ್ಯಕ್ತಿಯ ಪತ್ತೆಗೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕಾಣೆಯಾದ ವ್ಯಕ್ತಿಯು ಉದ್ದನೆಯ ಮುಖ, ಗೋದಿ ಮೈಬಣ್ಣ, ಸದೃಢ ಮೈಕಟ್ಟು ಹೊಂದಿದ್ದು, 5.5 ಅಡಿ ಎತ್ತರ, ಕಾಣೆಯಾದ ಸಂದರ್ಭದಲ್ಲಿ ಗುಲಾಬಿ ಬಣ್ಣದ ಉದ್ದ ತೋಳಿನ ಶರ್ಟ ಹಾಗೂ ನೀಲಿ ಬಣ್ಣದ ಪ್ಯಾಂಟ್ ಮತ್ತು ಹೆಗಲ ಮೇಲೆ ಬಿಳಿ ಬಣ್ಣದ ಟಾವೆಲ್ ಧರಿಸಿದ್ದನು. ಕನ್ನಡ, ಹಿಂದಿ ಹಾಗೂ ಲಂಬಾಣಿ ಭಾಷೆ ಬಲ್ಲವನಾಗಿದ್ದು, ಈ ಚಹರೆಪಟ್ಟಿಯುಳ್ಳ ವ್ಯಕ್ತಿ ಕಂಡು ಬಂದಲ್ಲಿ ಜಲನಗರ ಪೊಲೀಸ್ ಠಾಣೆ ದೂ: 08352-276300, ವಿಜಯಪುರ ಕಂಟ್ರೋಲ್ ರೂಂ ದೂ:08352-250751, ಪೊಲೀಸ್ ಉಪ-ನೀರೀಕ್ಷಕರು ಮೊ:9480804269, ಪೊಲೀಸ್ ವೃತ್ತ ನೀರೀಕ್ಷಕರು ಗೋಲಗುಮ್ಮಜ್ ವೃತ್ತ ಮೊ: 9480804232 ಸಂಖ್ಯೆಗೆ ಮಾಹಿತಿ ನೀಡಲು ಪ್ರಕಟಣೆಯಲ್ಲಿ ಕೋರಿಕೊಂಡಿದ್ದಾರೆ.