ನಾಳೆಯಿಂದ ಮನೆಗಳಿಗೆ ಮಾವಿನ ಹಣ್ಣು ಪೂರೈಕೆ: ಅಂಚೆ ಇಲಾಖೆಯಿಂದ ವಿನೂತನ ಸೇವೆ..!!!
ಬೆಂಗಳೂರು, ಏ 17, ರೈತರು ಬೆಳೆದ ತಾಜಾ ಮಾವಿನ ಹಣ್ಣುಗಳನ್ನು ಮನೆ ಮನೆಗೆ ತಲುಪಿಸಲು ಅಂಚೆ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಕೊರೋನಾ ವೈರಸ್ ನಿಯಂತ್ರಣ ಉದ್ದೇಶದಿಂದ ಜಾರಿಮಾಡಿರುವ ಲಾಕ್ ಸೌನ್ ಸಂದರ್ಭದಲ್ಲಿ ಅಂಚೆ ಇಲಾಖೆ ರೈತರ ನೆರವಿಗೆ ಧಾವಿಸಿದೆ. ನಾಳೆಯಿಂದ ಬೆಂಗಳೂರಿನ ನಾಗರೀಕರಿಗೆ ಮನೆ ಬಾಗಿಲಿಗೆ ಬಾಯಲ್ಲಿ ನೀರೂರಿಸುವ ಹಣ್ಣುಗಳ ರಾಜಾ ಮಾವಿನ ಹಣ್ಣುಗಳ ವಿತರಣೆ ಸೇವೆ ಆರಂಭವಾಗಲಿದೆ. ನೇರವಾಗಿ ರೈತರಿಂದ ಗ್ರಾಹಕರ ಮನೆಗೆ ಮಾವಿನ ಹಣ್ಣಿನ ಪೂರೈಕೆಗೆ ಅಂಚೆ ಇಲಾಖೆ ಸಜ್ಜಾಗಿದೆ. ಈ ಮೂಲಕ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಗ್ರಾಹಕರಿಗೂ ಅನುಕೂಲ ಮಾಡಿಕೊಡುವ ಜತೆಗೆ ರೈತರನ್ನು ಉಳಿಸುವ ಮಾನವೀಯ ಸೇವೆಗೆ ಅಂಚೆ ಇಲಾಖೆ ಸಜ್ಜಾಗಿದೆ. ಇಂದು ಮದ್ಯಾಹ್ನದಿಂದ ಅಂಚೆ ಮಿತ್ರ ಅಪ್ ಮೂಲಕ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಎಲ್ಲರೂ ಈ ಸೌಲಭ್ಯ ಉಪಯೋಗಿಸಬೇಕು. ರೈತರಿಗೆ ನೇರವಾಗುವ ದ್ಯೇಯ ನಮ್ಮದಾಗಿದೆ ಎಂದು ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 