ಮಲೆನಾಡ ಸಿರಿಯಂತೆ ಕಂಗೊಳಿಸುತ್ತಿರುವ ಬಸವನಗುಡಿ ಶಾಲೆ: ಈರಣ್ಣಾ ಹೂಲ್ಲೂರ

Basavanagudi School is becoming a symbol of the Malnad region: Iranna Hullura

ಯರಗಟ್ಟಿ 15: ಸರಕಾರಿ ಶಾಲೆಗಳಲ್ಲಿ ಕಲಿತವರು ಬಹುತೇಕ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ವಿಯಾಗಿರುವುದನ್ನು ಕಾಣುತ್ತೇವೆ. ಸರಕಾರ ಬಹುತೇಕ ಅನುಕೂಲಕರ ವಾತಾವರಣ ಸರಕಾರೀ ಶಾಲೆಗಳಲ್ಲಿ ಇರಬೇಕೆಂದು ಬಯಸುತ್ತದೆ. ಇರುವ ವಾತಾವರಣದಲ್ಲಿ ಬಹಳಷ್ಟು ಪರಿಶ್ರಮದಿಂದ ಶಾಲೆಗಳ ಒಳಗೂ ಹೊರಗೂ ವಿಭಿನ್ನವಾದ ಕ್ರಿಯಾತ್ಮಕ ಪರಿಸರ ನರಾ​‍್ಮಣ ಆಗಿರುವಂತೆ ಹಲವು ಜನ ಮಾಡಿರುತ್ತಾರೆ. ಅಂತಹ ಹಲವರಲ್ಲಿ ಯರಗಟ್ಟಿ ತಾಲೂಕಿನ  ರಾ​‍್ಕರಿ ಕಿರಿಯ ಪ್ರಾಥಮಿಕ ಶಾಲೆ ಬಸವನಗುಡಿ ಎಂಬ ತೋಟದ ಶಾಲೆ ತನ್ನದೇ ಆದ ಪರಿಸರ ದಿಂದ ಗಮನ ಸೆಳೆಯುತ್ತಿದೆ.  

ಈ ಶಾಲೆಗೆ ತಲುಪಬೇಕಾದರೆ ಕನಿಷ್ಠ ಎರಡರಿಂದ ಮೂರು ಕಿಲೋಮೀಟರ್ ಕಚ್ಚಾ ರಸ್ತೆಯ ಮೂಲಕ ಹೋಗಬೇಕು. ಆದರೆ ನಾವು ಕ್ರಮಿಸುವ ಕಚ್ಚಾ ರಸ್ತೆಯ ಆಯಾಸ ಎಲ್ಲವೂ ಈ ಶಾಲೆ ತಲುಪಿದಾಗ ಹೊರಟು ಹೋಗಿರುತ್ತದೆ. ಏಕೆಂದರೆ ಇಲ್ಲಿ ಈಗ ತಾನೇ ಬೆಳೆಯುತ್ತಿರುವ ವಿವಿಧ ತರಹದ ಬಾಳೆ,  ವಿವಿಧ ತರಕಾರಿಗಳು,  ಕುಡಿಯುವ ನೀರಿನ ವ್ಯವಸ್ಥೆ ಶಾಲಾ ಕೊಠಡಿಗಳು. ಮಕ್ಕಳ ಪ್ರತಿಕ್ರಿಯೆ ಹೀಗೆ ಹಲವು ವೈಶಿಷ್ಟ್ಯವನ್ನು ನೋಡಿದಾಗ ಬಹಳ ಸಂತಸವೆನಿಸುತ್ತದೆ.  

1 ರಿಂದ 5 ತರಗತಿ ಹೊಂದಿರುವ ಈ ಶಾಲೆಯಲ್ಲಿ  ಸುತ್ತಲಿನ ತೋಟಪಟ್ಟಿಗಳಿಂದ ಬರುವ ಮಕ್ಕಳ ಉತ್ಸಾಹ, ಅವರ ಪ್ರತಿಕ್ರಿಯೆ ಗಮನ ಸೆಳೆಯುತ್ತದೆ. ಇದಕ್ಕೆ ಕಾರಣ ವಾಗಿರುವ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಹಾಗೂ ಮುಖ್ಯ ಶಿಕ್ಷಕ ವಿಜಯ ಮೆಳವಂಕಿಯವರ ಪರಿಶ್ರಮ ನಿಜಕ್ಕೂ ಅಭಿಮಾನ ಪಡುವಂತಹ ಸಂಗತಿ. ವಿವಿಧ ತರಹದ ಬಾಳೆ, ತೆಂಗು, ನುಗ್ಗೆಕಾಯಿ, ಟೊಮೇಟೋ,  ವಿವಿಧ ಬಗೆಯ ತರಕಾರಿಗಳನ್ನು ಈ ಆವರಣದಲ್ಲಿ ಬೆಳೆದು ಅಕ್ಷರದಾಸೋಹ ಕರ‌್ಯ ಯಶಸ್ವಿಯಾಗಿ ಜರುಗಲು ಕಾರಣರ‌್ತರಾದ ವಿಜಯ ಮೆಳವಂಕಿಯವರ ಪರಿಶ್ರಮ ತರಗತಿ ಕೋಣೆಯಲ್ಲಿ ಕೂಡ ಕಂಡು ಬರುತ್ತದೆ. ನಲಿಕಲಿ ತರಗತಿಯ ಜೊತೆಗೆ 4 ಮತ್ತು 5 ನೇ ತರಗತಿ ವಿದ್ಯರಿ​‍್ಥಗಳ ಕಲಿಕಾ ಚಟುವಟಿಕೆಗಳನ್ನು ಗಮನಿಸಿದಾಗ ನಮ್ಮ ಸರಕಾರಿ ಶಾಲೆ ನಮ್ಮ ಹೆಮ್ಮೆ ಎಂಬ ಮಾತು ಅಕ್ಷರಶಃ ಸತ್ಯ ಎಂದು ಹೆಮ್ಮೆ ಆಗುತ್ತದೆ. ಮುಖ್ಯ ಶಿಕ್ಷಕ ವಿಜಯ ಮೆಳವಂಕಿಯವರು ತಮ್ಮ ಸ್ವಂತ  ರಿ​‍್ಚನಲ್ಲಿಯೇ ವ್ಯವಸ್ಥೆ ಮಾಡಿದ ಕಂಪ್ಯೂಟರ್ ಶಿಕ್ಷಣದ ವ್ಯವಸ್ಥೆ ಮಾಡಿದ್ದಾರೆ. ನರೇಗಾ ಯೋಜನೆ ಅಡಿ ನರಿ​‍್ಮಸಿದ ಹೈಟೆಕ್ ಶೌಚಾಲಯ ಕೂಡ ಗಮನ ಸೆಳೆಯುತ್ತದೆ. ಸುತ್ತಲೂ ತಡೆಗೋಡೆ ಇನ್ನೂ ಪರ‌್ಣಗೊಂಡಿಲ್ಲವಾದರೂ ಇಲ್ಲಿನ ಪರಿಸರವನ್ನು ಪಾಲಕರೆ ಕಾಪಾಡಿದ್ದಾರೆ. ಈ ಶಾಲೆಗೆ  ಭೇಟಿ ನೀಡಿದ  ಸಿ ಆರ್ ಪಿ ಬಾಳೇಶ ಸಿದ್ದಬಸನ್ನವರ, ಇತ್ತೀಚೆಗೆ ಸರಕಾರಿ ಶಾಲೆಗಳಲ್ಲಿ ಶಿಕ್ಷಕರು ನಮ್ಮ ಮಕ್ಕಳಿಗೆ ಕಲಿಕೆಗೆ ಮಾತ್ರ ಮಹತ್ವ ಕೊಡುತ್ತಾರೆ. ಆದರೆ ವಿಜಯ ಮೆಳವಂಕಿಯವರು ಮಕ್ಕಳಿಗೆ  ಒಳ್ಳೆಯ ಶಿಕ್ಷಣದ ಜೊತೆಗೆ ಶಾಲಾ ಆವರಣದಲ್ಲಿ ತೋಟವನ್ನು ಮಾಡಿದ್ದಾರೆ.  ಇವರ  ಕರ‌್ಯ ವೈಖರಿಯನ್ನು   ನಮ್ಮ ಮೇಲಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಶಾಲೆ ತಲುಪುವ ರಸ್ತೆ ಇಕ್ಕಟ್ಟಿನಲ್ಲಿ ಇದ್ದರೂ ಕೂಡ ಮಲೆನಾಡಿನ ಪ್ರಕೃತಿ ಈ ಶಾಲೆ ತಲುಪಿದಾಗ ಗಮನ ಸೆಳೆಯುತ್ತದೆ. ಇಲ್ಲಿನ ಶಾಲಾ ಅಡುಗೆಯವರ ಬಗ್ಗೆ ಕೂಡ ಹೆಮ್ಮೆ ಅನಿಸುತ್ತದೆ. ಮಕ್ಕಳ ಊಟಕ್ಕೆ ರುಚಿಕರವಾದ ಅಡುಗೆ ಮಾಡಿ ಬಡಿಸುವ ಇವರ ಕರ‌್ಯ ಕೂಡ ಮಹತ್ವದ್ದು. ಅಂದ ಹಾಗೆ ಈ ಶಾಲೆ ಆರಂಭವಾಗಿದ್ದು 1997 ರಲ್ಲಿ ಈ ಹಿಂದೆ ಇಲ್ಲಿ ಯರಗಣವಿ ಹಾಗೂ ಎಚ್‌. ಎಲ್‌. ನದಾಫ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ 2006 ರಿಂದ ವಿಜಯ ಮೆಳವಂಕಿಯವರು ಸೇವೆ ಸಲ್ಲಿಸುತ್ತಿರುವರು. ವಿದ್ಯುತ್ ಸಂರ‌್ಕ ಹಾಗೂ ವಿದ್ಯುತ್ ಪರಿಕರಗಳನ್ನು ವ್ಯವಸ್ಥಿತವಾಗಿ ಮಾಡುವಲ್ಲಿ ಕೂಡ ಇವರು ನಿಪುಣರು. ಶಿಕ್ಷಕ ವೃತ್ತಿ ಜೊತೆಗೆ ಕಂಪ್ಯೂಟರ್ ಕೂಡ ದುರಸ್ತಿ ಮಾಡುವ ಜೊತೆಗೆ ಕಂಪ್ಯೂಟರ್ ಕರ‌್ಯ ಕೂಡ ಮಾಡುವರು. ಹೀಗಾಗಿ ಸ್ವತಃ ತಮ್ಮ ಕರ‌್ಯದಿಂದ ಶಾಲೆಯ ಪರಿಸರವನ್ನು ಅಂದಗೊಳಿಸಲು ಕಾರಣೀಕರ‌್ತರಾಗಿರುವರು. ಪ್ರತಿ ಕೊಠಡಿಯಲ್ಲಿ ಫ್ಯಾನ್ , ವಿದ್ಯುತ್ ಬಲ್ಬ್‌ ಅಳವಡಿಸುವ ಜೊತೆಗೆ ಶಾಲೆಯಲ್ಲಿ ವಾಟರ್ ಫಿಲ್ಟರ್ ಅಳವಡಿಸಿ ಶುಚಿ ರುಚಿಯೊಂದಿಗೆ ಶೈಕ್ಷಣಿಕ ವಾತಾವರಣ ಕೂಡ ಗಮನ ಸೆಳೆಯುವಂತೆ ಮಾಡಿರುವಲ್ಲಿ ಇವರ ಪರಿಶ್ರಮ ಎದ್ದು ಕಾಣುತ್ತದೆ. ಕೈ ತೋಟ ಹಾಗೂ ಕುಡಿಯುವ ನೀರಿನ ಸಲುವಾಗಿ ಬೋರವೆಲ್ ಕೂಡ ಈ ಶಾಲಾ ಆವರಣದಲ್ಲಿ ಇರುವುದು ಶಾಲಾ ಕೈತೋಟದ ಮೆರಗನ್ನು ಹೆಚ್ಚಿಸಲು ಕಾರಣ. ಎರಡು ನೀರಿನ ಟ್ಯಾಂಕ್ ಗಳು ಕುಡಿಯುವ ನೀರಿನ ಸಲುವಾಗಿ ಹಾಗೂ ಕೈತೋಟದ ಸಲುವಾಗಿ ಹೊಂದಿರುವ ಕಾರಣ ನೀರಿನ ಹರವು ಅನುಕೂಲಕರವಾಗಿದೆ. 6 ಕಂಪ್ಯೂಟರ್ ಈ ಶಾಲೆಯಲ್ಲಿ ಇರುವುದು ಕೂಡ ಹೆಮ್ಮೆಯ ಸಂಗತಿ. ಪಪ್ಪಾಯಿ, ಮಾವು, ಬದಾಮ, ಸವತೆಕಾಯಿ,  ಬದನೆಕಾಯಿ, ಟೊಮೇಟೋ,  ಎಲೆಕೋಸು, ಲಿಂಬೆ ಹಣ್ಣು,  ಕೊತಂಬರಿ, ಕರಿಬೇವು, ಇನ್ನಿತರ ತರಕಾರಿಗಳನ್ನು ಇಲ್ಲಿನ ಕೈತೋಟದಲ್ಲಿ ನಾವೂ ಕಾಣಬಹುದು.ಶಾಲೆಗೆ ರಜೆ ಇದ್ದರೂ ಸಹ ಮೆಳವಂಕಿ ಅವರು ಬಂದು  ಶಾಲಾ ಕೈ ತೋಟಕ್ಕೆ ನೀರು ಬಿಡುವ ಕೆಲಸ ಮಾಡುತ್ತಾರೆ ಇವರಿಂದಾಗಿ ಇಡಿ ಶಾಲೆ ಮಲೆನಾಡು ಸಿರಿಯಂತೆ ಕಂಗೊಳಿಸುತ್ತಿದೆ. 

ಕೊರತೆಗಳು: ಸಿ  ಆಟದ ಮೈದಾನ * ತಡೆಗೋಡೆ ನರಾ​‍್ಮಣ* ರಸ್ತೆ* ಬೋಜನಾಲಯ* ನಿರಂತರ ವಿದ್ಯುತ್ ಸೌಲಭ್ಯ. 

ವಿಜಯ ಮೆಳವಂಕಿಯವರ ಕರ‌್ಯ ತುಂಬಾ ಅಮೋಘ. ನಮ್ಮ ಸರಕಾರಿ ಶಾಲೆಗಳು ನಮ್ಮ ಹೆಮ್ಮೆ. ಈ ದಿಸೆಯಲ್ಲಿ ಈ ಶಿಕ್ಷಕರ ಕರ‌್ಯವನ್ನು ಅಭಿನಂದಿಸಿ ಶಾಲೆಯಿಂದ ಮರಳುವಾಗ ಅಲ್ಲಿನ ಪ್ರಕೃತಿ ಬಿಟ್ಟು ಹೋಗಲು ಮನಸ್ಸು ಬರದಂತೆ ಮಾಡಿದ್ದಾರೆ. ಇವರಿಗೆ ಇನ್ನೂ ಅಬಿವೃದ್ದಿ ಪಡಿಸಲು ನನ್ನ  ಸಹಕಾರ  ಇದೆ. ಈ ಶಾಲೆಗೆ ಕುಂದು ಕೊರತೆಯನ್ನು  ನಿವಾರಿಸುತ್ತೇನೆ. ಶಾಲೆ ಅಭಿವೃದ್ಧಿಪಡಿಸಲು ಅಲ್ಲಿನ ಸುತ್ತ ಮುತ್ತಲಿನ ಸಾರ್ವಜನಿಕರ ಸಹಕಾರ ಅಗತ್ಯವಿದೆ. 

ವಿಶ್ವಾಸ ವೈದ್ಯ, ಶಾಸಕರು ಸವದತ್ತಿ ಯಲ್ಲಮ್ಮ ಮತಕ್ಷೇತ್ರ  

 ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸವನಗುಡಿ ತೋಟ ಮುಗಳಿಹಾಳ ಶಾಲೆಯ ವಿಜಯಕುಮಾರ್ ಮೆಳವಂಕಿ ಒಬ್ಬ ಉತ್ತಮ ಶಿಕ್ಷಕ. ಮಕ್ಕಳಿಗೆ ಅನುಕೂಲಕರವಾದ ಶಾಲಾ ಆವರಣದಲ್ಲಿ ತೋಟವನ್ನು ನರಾ​‍್ಮಣ ಮಾಡಿದ್ದಾರೆ. ಪೌಷ್ಟಿಕ ತೋಟವನ್ನು ನರಾ​‍್ಮಣ ಮಾಡಿದ್ದಾರೆ. ಬಿಸಿಊಟಕ್ಕೆ ಬೇಕಾದ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಬೆಳೆದು ವಿದ್ಯರಿ​‍್ಥಗಳಿಗೆ ನೀಡುತ್ತಿದ್ದಾರೆ.  ನಮ್ಮ ತಾಲ್ಲೂಕಿನಲ್ಲಿಯೇ ಇದೊಂದು ಮಾದರಿ ಶಾಲೆಯಾಗಿ ಹೊರಹೊಮ್ಮಿದೆ. 

ಮೋಹನ ದಂಡಿನಕ್ಷೇತ್ರ ಶಿಕ್ಷಣಾಧಿಕಾರಿಗಳು ಸವದತ್ತಿ