2 ಉಪಚುನಾವಣೆಯ ಪ್ರಚಾರಕ್ಕೆ ಹಿಂದೂ ಹುಲಿ ಬಸವನಗೌಡ ಯತ್ನಾಳರನ್ನು ಕರೆತರಲು ವರಿಷ್ಠರಿಗೆ ಬಿಜೆಪಿ ಮುಖಂಡರ ಒತ್ತಾಯ

2 ಉಪಚುನಾವಣೆಯ ಪ್ರಚಾರಕ್ಕೆ ಹಿಂದೂ ಹುಲಿ ಬಸವನಗೌಡ ಯತ್ನಾಳರನ್ನು ಕರೆತರಲು ವರಿಷ್ಠರಿಗೆ ಬಿಜೆಪಿ ಮುಖಂಡರ ಒತ್ತಾಯ BJP leaders urge top brass to bring Hindu tiger Basavanagowda Yatnal to campaign for 2 by-elections

ಲಕ್ಷ್ಮೇಶ್ವರ" 31:  ರಾಜ್ಯದಲ್ಲಿ ರಂಗಿರುತ್ತಿರುವ ಬಾಗಲಕೋಟೆ ಮತ್ತು ದಾವಣಗೆರೆ 2 ಉಪಚುನಾವಣೆ ಪ್ರಚಾರಕ್ಕೆ ಫೈಯರ್ ಬ್ರಾಂಡ್ ಹಿಂದೂ ಹುಲಿ ಬಸನಗೌಡ ಯತ್ನಾಳ್ ಅವರನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಂಡರೆ 2 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ನಿಶ್ಚಿತ ಎಂದುಶಿರಹಟ್ಟಿ ಮತಕ್ಷೇತ್ರದ ಬಿಜೆಪಿ ಪಕ್ಷದ ಹಿರಿಯ ಮುಖಂಡರಾದ ಶಿಗ್ಲಿ ಗ್ರಾಮದ ಸೋಮಣ್ಣ ಡಾಣಗಲ್ ಕುಂದ್ರಳ್ಳಿ ಗ್ರಾಮದ ಶಿವಾನಂದ ದೇಸಾಯಿ ಅವರು ಬಿಜೆಪಿ ಪಕ್ಷದ ವರಿಷ್ಠರನ್ನು ಒತ್ತಾಯಿಸಿದ್ದಾರೆ  ಈ ಕುರಿತು ಮಾಹಿತಿ ನೀಡಿ ಮಾತನಾಡಿದಅವರು ರಾಜ್ಯದಲ್ಲಿ ಬಸನಗೌಡ ಯತ್ನಾಳ್ ಅವರ ಮೇಲೆ ಹಿಂದೂ ಮತದಾರರು ಬಹಳ ಉತ್ಸಾಹಕರಾಗಿದ್ದಾರೆ ಅದರಲ್ಲಿ ಹಿಂದೂ ಯುವಕರಿಗೆ ಬಸವನಗೌಡ ಯತ್ನಾಳರಮಾತು ಅಂದರೆ ವೇದವಾಕ್ಯ ಹಾಗಾಗಿ ದಿನೇ ದಿನೇ ರಂಗೇರುತ್ತಿರುವ ರಾಜ್ಯದ 2 ಉಪ ಚುನಾವಣೆ ಪ್ರಚಾರಕ್ಕೆ ಬಿಜೆಪಿ ಪಕ್ಷದ ವರಿಷ್ಠರು ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಗಳ ಗೆಲುವಿನಪ್ರಚಾರಕ್ಕೆ ಬಸನಗೌಡ ಯತ್ನಾಳ ಅವರನ್ನು ಕರೆತಂದು ಪ್ರಚಾರ ಮಾಡಿಸಿದರೆ ಎರಡು ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ