ಬನಹಟ್ಟಿ ವಿಠ್ಠಲ ಮಂದಿರದಲ್ಲಿ ಆಷಾಢ ಏಕಾದಶಿ ಆಚರಣೆ

ಬನಹಟ್ಟಿ ವಿಠ್ಠಲ ಮಂದಿರದಲ್ಲಿ ಆಷಾಢ ಏಕಾದಶಿ ಆಚರಣೆ Ashadha Ekadashi celebration at the Vitthala Temple in Banahatti

ಲೋಕದರ್ಶನ ವರದಿ 

ರಬಕವಿ-ಬನಹಟ್ಟಿ 25 : ಆಷಾಢ ಏಕಾದಶಿ ಪ್ರಯುಕ್ತ ಬನಹಟ್ಟಿ ಮಂಗಳವಾರ ಪೇಟೆಯ ವಿಠ್ಠಲ ಮಂದಿರದಲ್ಲಿ ವಿಠ್ಠಲ ರುಕಮಾಯಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆಗೈಯಲಾಯಿತು. ವಿಠ್ಠಲ ರುಕುಮಾಯಿ ಮೂರ್ತಿಗಳನ್ನು ಪಲ್ಲಕ್ಕಿ ಮೂಲಕ ಕೃಷ್ಣಾ ನದಿಗೆ ಒಯ್ದು, ವಿಶೇಷ ಪೂಜೆ-ಪುನಸ್ಕಾರಗಳು ನಡೆದು, ಪ್ರಸಾದ ವಿತರಿಸಲಾಯಿತು.  ಈ ಸಂದರ್ಭದಲ್ಲಿ ನಾಮದೇವ ಸಿಂಪಿ ಸಮಾಜದ ಪರಶುರಾಮ ಕೋಪರ್ಡೆ (ಪುಜಾರಿ), ವಿಜಯ ಕೋಪರ್ಡೆ, ಬಾಳಕೃಷ್ಣ ಹಾಸೀಲಕರ, ವಿಠ್ಠಲ ಕೋಪರ್ಡೆ, ವಿಜಯ ಬಗಾಡೆ, ಆನಂದ ಬಕರೆ, ಗೋಪಾಲ ಬಗಾಡೆ, ಸಂಜು ಕೋಪರ್ಡೆ, ಕಿರಣ ಭಸ್ಮೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.