ಯುವಕ ಕಾಣೆ ಪತ್ತೆಗೆ ಮನವಿ

ಯುವಕ ಕಾಣೆ ಪತ್ತೆಗೆ ಮನವಿ Appeal to find missing youth

ಲೋಕದರ್ಶನ ವರದಿ 

ಗದಗ : ಜಿಲ್ಲೆಯ ರೋಣ ತಾಲ್ಲೂಕಿನ ಅಬ್ಬಿಗೇರಿ ಗ್ರಾಮದ ಮಂಜುನಾಥ ತಂದೆ ದೊಡ್ಡಅಂದಪ್ಪ ಹುಳ್ಳಿ(21) ಎಂಬುವರು  ಮೇ. 26 ರಂದು ಬೆಳಿಗ್ಗೆ 9 ಗಂಟೆಗೆ  ಅಬ್ಬಿಗೇರಿ ಗ್ರಾಮದ ತಮ್ಮ ಮನೆಯಿಂದ ಯಾರೀಗೂ ಹೇಳದೆ, ಕೇಳದೆ  ಹೋದವನು ಈವರೆಗೂ ಮರಳಿ ಮನೆಗೆ ಬಂದಿರುವದಿಲ್ಲ ಈ ಕುರಿತು  ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಹರೆ : 5 ಅಡಿ ಎತ್ತರ, ಸದೃಡ ಮೈಕಟ್ಟು, ದುಂಡು ಮುಖ, ಗೋದಿಗೆಂಪು ಮೈ ಬಣ್ಣ, ತಲೆಯಲ್ಲಿ ಕಪ್ಪು ಕೂದಲು ಹೊಂದಿದ್ದು, ಕನ್ನಡ ಮಾತನಾಡುತ್ತಾನೆ. ಮನೆಬಿಟ್ಟು ಹೋಗುವಾಗ ಪುಲ್ ತೋಳಿನ ಬಿಳಿ ಬಣ್ಣದ ಶರ್ಟ,  ಕರಿ ಪ್ಯಾಂಟ್ ಧರಿಸಿದ್ದು, ಬುದ್ದಿಮಾಂದ್ಯ ಇರುತ್ತಾನೆ.  ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಲ್ಲಿ ನರೇಗಲ್ ಪೋಲಿಸ್ ಠಾಣೆಗೆ ತಿಳಿಸಲು ಕೋರಲಾಗಿದೆ.