ಮನೆಗೊಂದು ಸುಂದರ ಕೈತೋಟ ಶೋಭೆಯನ್ನು ತರುತ್ತದೆ : ಹೆಚ್‌.ಮಲ್ಲಿಕಾರ್ಜುನ

A beautiful garden brings beauty to a home: H. Mallikarjuna

ಹರಪನಹಳ್ಳಿ 13: ಸುಂದರ ಕೈತೋಟ ಮನೆಯ ಅಂದ ಚಂದವನ್ನು ಹೆಚ್ಚಿಸುವುದಲ್ಲದೆ ವಾತಾವರಣವನ್ನು ಸುಂದರವಾಗಿಸಿ ಪ್ರಶಾಂತತೆಯನ್ನುಂಟು ಮಾಡುತ್ತದೆ. ಎಂದು ಎಸ್‌.ಯು.ಜೆ.ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಹೆಚ್‌.ಮಲ್ಲಿಕಾರ್ಜುನ ಅಭಿಪ್ರಾಯ ವ್ಯಕ್ತಪಡಿಸಿದರು.  

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನವಜ್ಯೊತಿ ಸಾಂಸ್ಕೃತಿಕ ಸೇವಾ ಸಂಸ್ಥೆ ಏರಿ​‍್ಡಸಿದ "ಸುಂದರ ಕೈತೋಟ" ಬಹುಮಾನ ಸ್ಪರ್ಧೆಯನ್ನು ಹರಪನಹಳ್ಳಿ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಮನೆ ಅಂಗಳ, ತಾರಸಿ ಮೇಲೆ ಅಥವಾ ಶಾಲಾ-ಕಾಲೇಜು, ಕಚೇರಿಗಳಲ್ಲಿ ಸುಂದರ ಕೈತೋಟ ನಿರ್ಮಿಸಿ ಹಚ್ಚ ಹಸಿರಿನಿಂದ ಕಂಗೊಳಿಸುವ ಸುಂದರ ಕೈತೋಟ ನಿರ್ಮಿಸಿದ ಮನೆಗಳಿಗೆ ಭೇಟೀನೀಡಿ ಸನ್ಮಾನಿಸಿ ಬಹುಮಾನ ವಿತರಿಸಿ ಮಾತನಾಡಿ ಕೈತೋಟ ನಿರ್ಮಾಣ ಒಂದು ಕಲೆ. ಉತ್ತಮ ಹವ್ಯಾಸವಾಗಿದೆ. ಮನೆಯ ಸುತ್ತ ಖಾಲಿಯಿರುವ ಸ್ಥಳದಲ್ಲಿ ಮನೆಗೆ ಬೇಕಾಗುವ ಹಣ್ಣು, ತರಕಾರಿ, ಹೂವು ಬೆಳೆದು ಹಣ ಉಳಿತಾಯ, ಮಾನಸಿಕ ನೆಮ್ಮದಿ, ಶುದ್ಧ ಗಾಳಿಯಿಂದ ಆರೋಗ್ಯ ಮತ್ತು ಆನಂದವನ್ನುಂಟು ಮಾಡುತ್ತದೆ ಮನೆಗೊಂದು ಕೈತೋಟ ಶೋಭೆಯನ್ನು ತರುತ್ತದೆ ಎಂದರು.  

ಸಂಸ್ಥೆ ಅಧ್ಯಕ್ಷರಾದ ಸಪ್ನ ಮಲ್ಲಿಕಾರ್ಜುನ ಪ್ರಥಮ ಸ್ಥಾನ ಪಡೆದ ಭಾರತೀ ನಗರದ ಯು.ಎಸ್‌. ಶಿವಶಂಕರ್ ಇವರಿಗೆ ನಗದು ಬಹುಮಾನ ನೀಡಿ ಸನ್ಮಾನಿಸಿ ಮಾತನಾಡಿ ಇವರು ಮನೆ ಮತ್ತು ವೀರಶೈವ ರುದ್ರಭೂಮಿಯ ಪಕ್ಕದಲ್ಲಿರುವ ಸಾರ್ವಜನಿಕ ಪಾರ್ಕಗೆ ಅನೇಕ ಸಸಿಗಳನ್ನು ಹಚ್ಚಿ ಸುಂದರಗೊಳಿಸಿ ಹಸಿರು ಕಂಗೊಳಿಸುವಂತೆ ಮಾಡಿದ್ದಾರೆ. ಕೇವಲ 15 ಸಾವಿರ ವೇತನದಲ್ಲಿ ಸಾಕಷ್ಟು ಹಣವನ್ನು ಪಾರ್ಕ್‌ಗೆ ವಿನಿಯೋಗಿಸಿ ಪರಿಸರ ಸಂರಕ್ಷಕರಾಗಿದ್ದಾರೆ. ಅವರ ಕಾರ್ಯ ಮೆಚ್ಚುವಂತದ್ದಾಗಿದೆ. ಸಾರ್ವಜನಿಕರು ಮನೆಯ ವ್ಯರ್ಥ ನೀರನ್ನು ಸಮರ​‍್ಕವಾಗಿ ಬಳಸಿಕೊಂಡು ಕೈತೋಟಕ್ಕೆ ಬಳಸಿ ಬೆಳೆಸಬೇಕು. ತಮ್ಮ ವಾರ್ಡ್‌ನಲ್ಲಿರುವ ಪಾರ್ಕ್‌ ಅಭಿವೃದ್ಧಿ ಪಡಿಸಲು ಮತ್ತು ಖಾಲಿ ನಿವೇಶನದಲ್ಲಿ ಸಸಿಗಳನ್ನು ನೆಟ್ಟು ಹಸಿರಾಗಿಸಲು ಪ್ರತಿಯೊಬ್ಬ ನಾಗರೀಕರು ಶ್ರಮಿಸಬೇಕಾಗಿದೆ, ಮನೆಯ ಕೈತೋಟ ನಿರ್ಮಿಸುವಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದೆ ಎಂದರು.  

ಯು.ಎಸ್‌. ಶಿವಶಂಕರ್ ಮಾತನಾಡಿ “ನನಗೆ ಪರಿಸರ ಎಂದರೆ ತುಂಬಾ ಇಷ್ಟ. ಅನೇಕ ಸುಂದರ ಪರಿಸರಗಳು ನನಗೆ ಪ್ರೇರಣೆ ನೀಡಿವೆ. ಸ್ನೇಹಿತರ ಸಹಾಯದಿಂದ ಸಾರ್ವಜನಿಕ ಪಾರ್ಕ್‌ನ್ನು ಸ್ವಚ್ಛಗೊಳಿಸಿ ಅನೇಕ ಸಸಿಗಳನ್ನು, ಹೂವಿನ ಗಿಡಗಳನ್ನು  ತಂದು ನೆಟ್ಟು ನೀರನ್ನು ಹಾಕಿ ಹಸಿರಿಕರಣಗೊಳಿಸಿದ್ದೇನೆ. ಪ್ರಥಮ ಬಹುಮಾನ ಪಡೆದಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ಪ್ರೇರಣೆ ನೀಡಿದೆ. ನಮ್ಮ ಆಸರೆ ಆರ್ಗನೈಜೈಷನ್ ವತಿಯಿಂದ ಇನ್ನೂ ಹೆಚ್ಚಿನ ಮಟ್ಟದಲ್ಲಿ ಸಸಿಗಳನ್ನು ಬೆಳೆಸಬೇಕೆಂಬ ಅಭಿರುಚಿ ಮೂಡಿದೆ. ಉಪನ್ಯಾಸಕ ಹೆಚ್‌.ಮಲ್ಲಿಕಾರ್ಜುನ ಮತ್ತು ಸಪ್ನ ದಂಪತಿಗಳು ಪ್ರಥಮ ಬಹುಮಾನ ನೀಡಿರುವುದು ಇನ್ನೂ ಹೆಚ್ಚು ಸಸಿಗಳನ್ನು ಬೆಳೆಸಬೇಕೆಂಬ ಉತ್ಸಾಹ ತಂದಿದೆ. 

ದ್ವಿತೀಯ ಬಹುಮಾನ ಪಡೆದ ಆಚಾರ್ಯ ಬಡಾವಣೆಯ ಶ್ವೇತಾ ಜನಾರ್ದನ ರೆಡ್ಡಿ ಮಾತನಾಡಿ “ಬಾಲ್ಯದಿಂದಲೂ ಗಿಡಗಳನ್ನು ಬೆಳೆಸುವ ಹವ್ಯಾಸ ಇದ್ದು, ನಾನು ಶಾಲೆಗಳಲ್ಲಿ ಮತ್ತು ನನ್ನ ತವರು ಮನೆಯ ಆವರಣದಲ್ಲಿ ಹಲವಾರು ಗಿಡಗಳನ್ನು ಬೆಳೆಸಿದ್ದುಂಟು, ಮದುವೆಯ ನಂತರ 400 ವೈವಿಧ್ಯಮಯ ಗಿಡಗಳನ್ನು ಹಾಕಿರುತ್ತೇನೆ. ಕೆಲವೊಂದು ಗಿಡಗಳನ್ನು ಆನ್ಲೈನ್ ಮೂಲಕ ಕೇರಳ, ತಮಿಳುನಾಡಿನಿಂದ ತರಿಸಿರುತ್ತೇನೆ. ಪ್ರತಿನಿತ್ಯ ಅವುಗಳೊಂದಿಗೆ ಸಮಯವನ್ನು ಕಳೆಯುತ್ತಾ ಗೊಬ್ಬರ, ನೀರನ್ನು ಹಾಕಿ ಬೆಳೆಸುತ್ತಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಗಿಡಗಳನ್ನು ಹಾಕುವ ಹಂಬಲವಿದೆ.” 

ದ್ವಿತೀಯ ಬಹುಮಾನ ಪಡೆದ ಶೋಭಾ ಪ್ರಭು, ಆಚಾರ್ಯ ಬಡಾವಣೆ. “ಮೊದಲು  ಪೂಜೇಗೆ ಹೂಗಳಿಗೆಂದು ಮನೆಯ ಮುಂದೆ ಗಿಡಗಳನ್ನು ಬೆಳೆಸಿದ್ದೆ, ಒಮ್ಮೆ ಫೇಸ್ ಬುಕ್ ನಲ್ಲಿ ಗಾರ್ಡನ್ ಗ್ರೂಪ್ಗೆ ಜಾಯಿನ್ ಆಗಿ ಎಲ್ಲರ ಹೂ ಗಿಡಗಳನ್ನು ನೋಡಿದಾಗ ನನಗೂ ಕ್ರಮೇಣ ಹೂ ಗಿಡಗಳ ಹುಚ್ಚು ಜಾಸ್ತಿ ಆಯ್ತು, ನಮ್ಮ ಮನೆಯವರು ಬಾಟನಿ ಪ್ರೊಪೆಸರ್ ಅವರು ಆನ್ಲೈನ್‌ನಲ್ಲಿ ಸುಮಾರು ಗಿಡ ಮತ್ತು ಸೀಡ್ಸ್‌ ತರಿಸಿ ಕೊಟ್ಟರು, ಆದರೆ ಅವುಗಳು ಸುಮಾರು ಗಿಡ ನಮ್ಮ ವಾತಾವರಣಕ್ಕೆ ಬೆಳೆಯಲಿಲ್ಲ ಹಾಗಾಗಿ ಗ್ರೂಪಲ್ಲಿ ವಿನಿಮಯ ಮಾಡಿಕೊಳ್ಳಲು ಶುರು ಮಾಡಿದೆ ಈಗ ಎಲ್ಲಾ ಗಿಡಗಳು ಚೆನ್ನಾಗಿದೆ ಅದಕ್ಕೆ ಬೇಕಾಗುವ ಗೊಬ್ಬರ ಹುಳುಗಳ ಸ್ಪ್ರೇ ವರ್ಮಿ ಕಾಂಪೌಂಸ್ಟ್‌ ಎಲ್ಲಾ ಹಾಕಿ ಬೆಳೆಸುತ್ತಿದ್ದೇವೆ. 

ತೃತೀಯ ಬಹುಮಾನವನ್ನು ಅಕ್ಷತ ಆರ್ ನಾಗರಾಜ್, ಮತ್ತು ಪಿ.ನಾಗರತ್ನ ಪಡೆದರು ಸ್ಪರ್ಧೆಯಲ್ಲಿ 16 ಜನ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರಭು, ದೈಹಿಕ ಶಿಕ್ಷಕರಾದ ಜನಾರ್ದನ ರೆಡ್ಡಿ, ನಂದಿನಿ ಮಂಜುನಾಥ ಮಟ್ಟಿ, ನವ್ಯ ಚಿದಾನಂದ ಗುರುಸ್ವಾಮಿ, ಹೆಚ್‌.ತಿಲಕ್ ಉಪಸ್ಥಿತರಿದ್ದರು.