14ರಂದು ಲಿಂಗಾಯತ, ಜಂಗಮ ವಧು ವರರ ಬೃಹತ್ ಸಮಾವೇಶ
ಲೋಕದರ್ಶನ ವರದಿ
ಗದಗ 10: ಗದಗದಲ್ಲಿ ವೀರಶೈವ ಲಿಂಗಾಯತ ಮತ್ತು ಜಂಗಮ ವಧು ವರರ ಬೃಹತ್ ಸಮಾವೇಶವನ್ನು 25 ವರ್ಷದಿಂದ ರಾಜ್ಯದಲ್ಲಿ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದು ಈ ಸಲವು ಗದಗ ನಗರದ ಚೇಂಬರ್ ಆಫ್ ಕಾಮಸರ್್ ಎಪಿಎಮ್ಸಿ ಹಾಲ ಗದಗದಲ್ಲಿ ದಿ. 14ರಂದು ಮುಂಜಾನೆ 11.00ರಿಂದ ಮಧ್ಯಾಹ್ನ 03.00 ಘಂಟೆಗಳ ವರೆಗೆ ವಧು ವರರ ಅನ್ವೇಷಣೆ ಇರುವುದು ಎಂದು ಅಧ್ಯಕ್ಷರು ಆದ ರವಿ ಹಂದಿಗೋಳ ತಿಳಿಸಿದರು.
ಈ ಸಮಾವೇಶದಲ್ಲಿ ವಧು ವರರನ್ನು ಪರಸ್ಪರ ಪರಿಚಯಿಸಲಾಗುವುದು, ಅಪೇಕ್ಷೆ ಹೊಂದಿದ ವಧು ವರರು ಹಾಗೂ ಪಾಲಕರನ್ನು ಸ್ಥಳದಲ್ಲಿಯೇ ಮಾತುಕತೆಗೆ ಅವಕಾಶ ಕಲ್ಪಿಸಲಾಗುವುದು, ಹಾಗೂ ಸಮಾವೇಶದಲ್ಲಿ ಭಾಗವಹಿಸಿ ಸದಸ್ಯತ್ವ ಪಡೆದವರಿಗೆ ಮದುವೆ ನಿಶ್ಚಯದವರೆಗೆ ಮಾಹಿತಿ ಹಾಗೂ ಪರಸ್ಪರ ತೋರಿಸುವ ಸೇವೆ ನೀಡಲಾಗುವುದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದರು.ಈ ಸಮಾವೇಶದಲ್ಲಿ ಬರುವ ವಧು ವರರು 2 ಭಾವಚಿತ್ರ (ಪೋಟೋ) ಮತ್ತು ಜಾತಕದೊಂದಿಗೆ ಭಾಗವಹಿಸಬಹುದು ವಿಧವೆ, ವಿಧುರ, ಮರು ವಿವಾಹ ಆಗಬಯಸುವವರು ಅಂಗವಿಕಲರು, ಪಾಲಕರು ಸಹ ಭಾಗವಹಿಸಬಹುದು ಎಂದು ತಿಳಿಸಿದರು.ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಸೇವಾ ಸಭಾ ಟ್ರಸ್ಟ್ ನ ಅದ್ಯಕ್ಷರಾದ ರವಿ ಹಂದಿಗೋಳ, ಕಾರ್ಯದಶರ್ಿಗಳು ಶಕುಂತಲಾ ನಂದಿಮಠ, ಮತ್ತು ಕನರ್ಾಟಕ ವೀರಶೈವ ವಧು ವರರ ಅಧ್ಯಕ್ಷರು ಆದ ಶಿವಕುಮಾರ ಹಿರೇಮಠ ಹಾಗೂ ಪ್ರಕಾಶ ಅಂಗಡಿ ಭಾಗಿಯಾಗಿದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 