ಶಿವಶಾಂತವೀರ ಪಬ್ಲಿಕ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ
ಕೊಪ್ಪಳ- ಪರಿಸರದ ರಕ್ಷಣೆ ನಮ್ಮೇಲ್ಲರ ಜವಾಬ್ದಾರಿ ಪರಿಸರವನ್ನು ರಕ್ಷಣೆ ಮಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಅದರ ಉಳಿವಿಗೆ ನಾವು ಅರಿವು ಹೊಂದುವದು ಅವಶ್ಯಕ ಎಂದು ದಿನಾಂಕ 05-06-2025 ರಂದು ಗುರುವಾರ ನಗರದ ಶ್ರೀ ಶಿವಶಾಂತವೀರ ಪಬ್ಲಿಕ ಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಹ ಶಿಕ್ಷಕರಾದ ಅನೀಲ.ಜಿ ಅವರು ಹೇಳಿದರು.
ಮುಂದುವರೆದು ಇತ್ತೀಚಿನ ದಿನಗಳಲ್ಲಿ ಜಾಗತೀಕ ತಾಪಮಾನ ಹೆಚ್ಚುತಿದ್ದು ಪರಿಸರಕ್ಕೆ ಮಾರಕವಾದ ಕಾರ್ಯಗಳನ್ನು ತಡೆಗಟ್ಟುವದು ಅವಶ್ಯಕವಾಗಿದೆ ಎಂದು ಹೇಳುವುದರ ಮೂಲಕ ಪರಿಸರ ದಿನಾಚರಣೆಯ ಮಹತ್ವದ ಮಾಹಿತಿಯನ್ನು ಮಕ್ಕಳಿಗೆ ತಿಳಿಸಿದರು. ನಂತರ ನಗರದ ಸುರಭಿ ವೃದ್ಧಾಶ್ರಮಕ್ಕೆ ವಿದ್ಯಾರ್ಥಿಗಳೊಂದಿಗೆ ತೆರಳಿ ಆಶ್ರಮದಲ್ಲಿರುವ ವೃದ್ಧರಿಗೆ ಹಣ್ಣು, ಬಿಸ್ಕತ್ತುಗಳನ್ನು ನೀಡಿ ಮಮತೆಯನ್ನು ತೋರಿದರು.ನಂತರ ದತ್ತು ಪಡೆದ ಎಲ್ಲಾ ಸಸಿಗಳನ್ನು ಸಂರಕ್ಷಿಸುವ ಹೊಣೆಯನ್ನು ಹೊತ್ತರು. ಈ ಅರ್ಥಪೂರ್ಣ ಪರಿಸರ ದಿನಾಚರಣೆ ಮಾದರಿಯಾಗಿತ್ತು.
ಕಾರ್ಯಕ್ರಮವನ್ನು ಸಸಿಗೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಶಿಕ್ಷಕಿಯಾದ ನೇಹಾಸಿಂಗ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರು, ಉಪಪ್ರಾಚಾರ್ಯರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.