ವೀರಭದ್ರ ದೇವಸ್ಥಾನ, ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಕಾತರ್ಿಕ ದೀಪೋತ್ಸವ
ಮಾಂಜರಿ 10: ಕಾತರ್ಿಕ ದೀಪೋತ್ಸವ ನಮ್ಮ ಮನಸ್ಸಿನ ಅಂತರಂಗದ ಹಾಗೂ ಬಹಿರಂಗದ ಮನಸ್ಸನ್ನು ಸದೃಢಗೊಳಿಸುತ್ತದೆ. ಅಂತರಂಗದ ಆಚಾರವೆಂಬ ಎಣ್ಣೆ, ಜ್ಞಾನವೆಂಬ ಭಕ್ತಿ ಅರಿವು ಎಂಬ ಜ್ಯೋತಿಯ ಹಣತೆ ಉರಿಯುತ್ತಿರಲು, ಒಳಗೂ ಬೆಳಕು ಹೊರಗು ಬೆಳಕು. ಇದು ಕಾತರ್ಿಕ ಮಾಸದ ಹೊನಲು ಎಂದು ಶ್ರೀಶೈಲ ಜಗದ್ಗುರುಗಳು ಹಾಗೂ ಯಡೂರಿನ ಕಾಡಸಿದ್ಧೇಶ್ವರ ಮತ್ತು ವೀರಭದ್ರ ಸಂಸ್ಥಾನ ಮಠದ ಧಮರ್ಾಧಿಕಾರಿ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರ ದೇವಸ್ಥಾನ ಹಾಗೂ ಕಾಡಸಿದ್ಧೇಶ್ವರ ಸಂಸ್ಥಾನ ಮಠದ ಕಾತರ್ಿಕ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕತ್ತಲು ನಮ್ಮೊಳಗಿದೆ, ದೀಪವು ನಮ್ಮೊಳಗಿದೆ. ದೀಪವನ್ನು ಕತ್ತಲು ಆವರಿಸಿದೆ. ದೀಪವು ಕತ್ತಲನ್ನು ತೊಲಗಿಸಿ ನಮ್ಮೊಳಗಿರುವ ಜ್ಞಾನದ ಜ್ಯೋತಿ ಬೆಳಗೋಣ ಹಣತೆ ಹೆಚ್ಚಿದರೆ ಹೊರಗಿನ ಕತ್ತಲು ದೂರವಾಗುತ್ತದೆ. ಒಳಗಿನ ಹಣತೆ ಹಚ್ಚಿದರೆ ಮಾಯೆ ಎಂಬ ಕತ್ತಲು ದೂರವಾಗುತ್ತದೆ. ಮನೆಗಳಲ್ಲಿರುವ ದೀಪವನ್ನು ಬೆಳಗುವುದರ ಜೊತೆಗೆ ಮನದಲ್ಲಿರುವ ದೀಪಗಳನ್ನು ಬೆಳಗಬೇಕು ಎಂದರು.
ರಾಜಶೇಖರ ಹೆಬ್ಬಾರ, ಮಲ್ಲಯ್ಯಾ ಜಡೆ, ಅಡವಯ್ಯಾ ಅರಳಿಕಟ್ಟಮಠ, ಮಲ್ಲಪ್ಪಾ ಸಿಂದೂರ, ಮಂಜುನಾಥ ದೇವರು, ವಿಶ್ವನಾಥ ದೇವರು, ಮತ್ತಯ್ಯಾ ಮಠದ, ಬಾಳಗೌಡಾ ಪಾಟೀಲ, ಪಾಠಶಾಲೆಯ ಗುರುಗಳು, ವಿದ್ಯಾಥರ್ಿಗಳು ಹಾಗೂ ಭಕ್ತರು ಹಾಜರಿದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 