ಕಲ್ಲು ಕ್ವಾರಿಯ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳ ದಾಳಿ
ಲೋಕದರ್ಶನ ವರದಿ
ಸಿದ್ದಾಪುರ,28: ತಾಲೂಕಿನ ಶಿರಳಗಿ ಗ್ರಾಮಪಂಚಾಯತ ಬಾಳೆಕೊಪ್ಪ ಗ್ರಾಮದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಚಿರೆ (ಕೆಂಪು) ಕಲ್ಲು ಕ್ವಾರಿಯ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಏಳು ಟಿಲ್ಲರ್ ವಶಪಡಿಸಿಕೊಂಡಿದ್ದಾರೆ.
ಬಾಳೆಕೊಪ್ಪ ಗ್ರಾಮದ ಸವರ್ೇ ನಂ 11,12 ರಲ್ಲಿ ಸರಕಾರದಿಂದ ಏಂಟು ಜನರಿಗೆ ಮಂಜೂರಾಗಿತ್ತು. ಈ ಜಾಗದಲ್ಲಿ ಮನೆ ಕಟ್ಟಲು ಉಪಯೋಗಿಸುವ ಕೆಂಪುಕಲ್ಲುಗಳನ್ನು ಸುಮಾರು 16 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ ತೆಗೆಯಲಾಗಿದೆ. ಜಾಗ ಮಂಜೂರಿ ಪಡೆದಿದ್ದವರು ಕಲ್ಲು ಕ್ವಾರೆ ನಡೆಸಲು ನಾಲ್ವರಿಗೆ ನೀಡಿದ್ದಾರೆ. ಈ ಹಿಂದೆ ತಹಸೀಲ್ದಾರ ಪಟ್ಟರಾಜ ಗೌಡ ಈ ಸ್ಥಳದಲ್ಲಿ ಪರವಾನಿಗೆ ಇಲ್ಲದೆ ಕಲ್ಲುಕ್ವಾರೆ ನಡೆಸುತಿದ್ದ ಬಗ್ಗೆ ಮಾಹಿತಿ ಪಡೆದು ದಂಡ ಹಾಕಿದ್ದು ಆವಾಗ ಕ್ವಾರೆಯನ್ನು ಸ್ಥಗಿತಗೊಳಿಸಲಾಗಿತ್ತು. ನಂತರ ಪುನಃ ಕ್ವಾರೆಯನ್ನು ಆರಂಭಿಸಲಾಗಿದೆ.
ಈ ಕುರಿತು ದೂರು ಬಂದ ಹಿನ್ನೇಲೆಯಲ್ಲಿ ಶಿರಸಿ ಉಪವಿಭಾಗಾದಿಕಾರಿ ರಾಜು ಮೊಗವೀರ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದ್ದು, ಸುಮಾರು ಒಂದು ಸಾವಿರಕ್ಕಿಂತ ಅಧಿಕ ಕಡಿದಿಟ್ಟ ಕಲ್ಲುಗಳು ಕಂಡು ಬಂದಿದೆ ಎಂದು ಉಪವಿಭಾಗಾದಿಕಾರಿ ತಿಳಿಸಿದ್ದಾರೆ. ಈ ಸಂದರ್ಬದಲ್ಲಿ ತಹಸೀಲ್ದಾರ ಪಟ್ಟರಾಜ ಗೌಡ ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 