ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ 6ನೇ ಮಹಾ ಸಮಾರಾಧನಾ ಮಹೋತ್ಸವ
The 6th Great Celebration of Sri Vishwesha Tirtha Sripadam
ಬೆಳಗಾವಿ, 18 : ನಗರದ ಟಿಳಕವಾಡಿ ಆರ್ಪಿಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠದಲ್ಲಿ ಡಿ. 20ರಿಂದ 23ರ ವರೆಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರ 6ನೇ ಮಹಾ ಸಮಾರಾಧನಾ ಮಹೋತ್ಸವ ಆಯೋಜಿಸಲಾಗಿದೆ.
ಡಿ. 20ರಂದು ಸಂಜೆ 4ರಿಂದ 5:30ರ ವರೆಗೆ ಭಜನಾ ಮಂಡಳಿಗಳಿಂದ ಹರಿ ಭಜನೆ, 5:45ರಿಂದ 7ರವರೆಗೆ ಸ್ವರ ನಿರಂತರ ತಂಡದವರಿಂದ ದಾಸವಾಣಿ, 7ರಿಂದ 8 ರವರೆಗೆ ಮಂತ್ರಾಲಯ ಪಂಡಿತ್ ವೇಣುಗೋಪಾಲಾಚಾರ್ ಪುರೋಹಿತ ಅವರಿಂದ ಶ್ರೀಮದ್ ಭಾಗವತ ಸಂದೇಶ ಹಾಗೂ ಶ್ರೀ ವಿಶ್ವೇಶ ತೀರ್ಥರ ವಿಶಾಲ ಮನೋಭಾವ ವಿಷಯವಾಗಿ ವಿಶೇಷ ಪ್ರವಚನ ನಡೆಯಲಿದೆ.
ಡಿ. 21ರಂದು ಸಂಜೆ 4ರಿಂದ 5:30ರವರೆಗೆ ಭಜನಾ ಮಂಡಳಿಗಳಿಂದ ಹರಿ ಭಜನೆ, 6 ಗಂಟೆಗೆ ಹರಿ ಭಜನೋಪಾಸಕ ತಂಡದಿಂದ ದಾಸವಾಣಿ, 7ರಿಂದ 8 ಗಂಟೆವರೆಗೆ ಹುಬ್ಬಳ್ಳಿಯ ವಿದ್ವಾಂಸ ಸತ್ಯಮೂರ್ತಿ ಆಚಾರ್ಯ ಅವರಿಂದ ಶ್ರೀ ವಿಶ್ವೇಶ ತೀರ್ಥರ ದೃಷ್ಟಿಯಲ್ಲಿ ರಾಮಾಯಣ ಸಂದೇಶ ಹಾಗೂ ಶ್ರೀ ವಿಶ್ವೇಶ ತೀರ್ಥರ ಬಹುಮುಖ ವ್ಯಕ್ತಿತ್ವ ವಿಷಯವಾಗಿ ವಿಶೇಷ ಪ್ರವಚನ ನಡೆಯಲಿದೆ.
ಡಿ. 22ರಂದು ಸಂಜೆ 4ರಿಂದ 5: 30ರವರೆಗೆ ಭಜನಾ ಮಂಡಳಿಗಳಿಂದ ಹರಿ ಭಜನೆ, 6-7 ಗಂಟೆವರೆಗೆ ರಾಗ ರಾಗಿಣಿ ತಂಡದಿಂದ ದಾಸವಾಣಿ, 7-8 ಗಂಟೆವರೆಗೆ ಶ್ರೀ ಭಾರತಿ ರಮಣಾಚಾರ್ಯ ಗಣಾಚಾರಿ ಅವರಿಂದ ಮಹಾಭಾರತ ಸಂದೇಶ ಹಾಗೂ ಶ್ರೀ ವಿಶ್ವೇಶ ತೀರ್ಥರ ಪಂಚ ಪರ್ಯಾಯಗಳು ವಿಷಯವಾಗಿ ಪ್ರವಚನ ನಡೆಯಲಿದೆ.
ಡಿ. 23ರಂದು ಬೆಳಗ್ಗೆ 6ಕ್ಕೆ ಧನುರ್ಮಾಸ ಪೂಜೆ, 7:30ಕ್ಕೆ ವಾಯುಸ್ತುತಿ ಪುನಶ್ಚರಣ ಹೋಮ, 10:30ಕ್ಕೆ ವಿದ್ವಾಂಸರಿಂದ ಶಾಸ್ತ್ರಾನುವಾದ ಹಾಗೂ ಪ್ರವಚನ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ರಥೋತ್ಸವ, ನೈವೇದ್ಯ, ಮಹಾ ಮಂಗಳಾರತಿ, 1 ಗಂಟೆಗೆ ತೀರ್ಥ ಪ್ರಸಾದ, ಸೇವಾ ಕರ್ತೃಗಳಿಗೆ ಪ್ರಸಾದ ವಿತರಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9886457735 ಮತ್ತು 9986779878 ಇಲ್ಲಿಗೆ ಸಂಪರ್ಕಿಸಬಹುದು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 