3 ದಿನದ ಬದಲು 6 ದಿನಗಳ ಕಾಲ ಕಲಾಪ
Session to last 6 days instead of 3 days
ಲೋಕದರ್ಶನ ವರದಿ
ಯರಗಟ್ಟಿ 04: ತಾಲೂಕಿನ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ವಾರದಲ್ಲಿ 3 ದಿನ ಮಾತ್ರ ಕೋರ್ಟ್ ಕಲಾಪ ನಡೆಯುತ್ತಿತ್ತು ಆದರೆ ಇನ್ಮುಂದೆ ವಾರದ 6 ದಿನಗಳ ಕಾಲ ಕಲಾಪ ನಡೆಸಲು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ ಆದರಿಂದ ಯರಗಟ್ಟಿ ಮತ್ತು ಸುತ್ತಮುತ್ತಲಿನ ಜನರಿಗೆ ದೊಡ್ಡ ಅನುಕೂಲ ಆಗಲಿದೆ. 3 ದಿನ ಮಾತ್ರ ಕೋರ್ಟ್ ಇರುವುದರಿಂದ ಪ್ರಕರಣಗಳು ವಿಳಂಬ ಆಗುತ್ತಿದ್ದವು, ವಕೀಲರು ಮತ್ತು ಕಕ್ಷಿದಾರರು ವಾರಗಟ್ಟಲೆ ಕಾಯಬೇಕಿತ್ತು. ಈಗ 6 ದಿನ ಕಲಾಪ ನಡೆದರೆ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಬೇಗ ಆಗುತ್ತೆ. ಹಾಗೂ ನ್ಯಾಯಾಧೀಶರಾಗಿ ಕೃಷ್ಣಪ್ಪ ಪಮ್ಮಾರ ಅವರನ್ನೇ ಮುಂದುವರಿಸಿದೆ.
ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್ಸಿ ನ್ಯಾಯಾಲಯ ಇದೆ. ಸಿಬ್ಬಂದಿ ಕೊರತೆ ಮತ್ತು ನ್ಯಾಯಾಧೀಶರು ಬೇರೆ ಕೋರ್ಟ್ಗೆ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದರಿಂದ ಹಲವು ತಾಲೂಕು ಮಟ್ಟದ ಕೋರ್ಟ್ಗಳಲ್ಲಿ ವಾರದ 2-3 ದಿನ ಮಾತ್ರ ಕಲಾಪ ನಡೆಯುವ ಪದ್ಧತಿ ಇತ್ತು. ಉಚ್ಚ ನ್ಯಾಯಾಲಯ ಈಗ ಹಂತಹಂತವಾಗಿ ಎಲ್ಲ ಕಡೆ 6 ದಿನ ಕಲಾಪಕ್ಕೆ ಕ್ರಮ ತೆಗೆದುಕೊಂಡಿದೆ ಎಂದು ಯರಗಟ್ಟಿ ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ರೆಬ್ಬನ್ನವರ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 