ಭಕ್ತರ ಗಮನ ಸೆಳೆದ ಪಲ್ಲೇದ ಹಬ್ಬ ವಿಶೇಷ ಪೂಜೆ
Palleda festival is a special worship that has attracted the attention of devotees
ಭಕ್ತರ ಗಮನ ಸೆಳೆದ ಪಲ್ಲೇದ ಹಬ್ಬ ವಿಶೇಷ ಪೂಜೆ
ಹಾವೇರಿ 23: ಇಲ್ಲಯ ಶಿವಲಿಂಗ ನಗರದಲ್ಲಿರುವ ಶ್ರೀ ಬನಶಂಕರಿದೇವಿಯ 21ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ದೇವಿಗೆ ’ಪಲ್ಲೇದ ಹಬ್ಬ’ ವಿಶೇಷ ಪೂಜೆಯನ್ನು ನೆರವೇರಿಸಲಾಯಿತು. ತರಕಾರಿಯಿಂದ ದೇವಿಗೆ ಅಲಂಕಾರ ಮಾಡಿ, ಪೂಜೆ ಸಲ್ಲಿಸಲಾಯಿತು.ಹೀರೇಕಾಯಿ, ಟೊಮ್ಯಾಟೊ, ಈರುಳ್ಳಿ, ಬಿನ್ಸ್, ಮೆಣಸಿನಕಾಯಿ, ಸಾಂಬಾರ ಸೌತೆಕಾಯಿ, ಬಿಟರೂಟ್, ಲಿಂಬೆ ಹಣ್ಣು, ಸೌತೆಕಾಯಿ, ನೆಲ್ಲಿಕಾಯಿ, ಶುಂಠಿ ಸೇರಿದಂತೆ ಕೆಲವು ಬಗೆಯ ಹಸಿ ಸೊಪ್ಪು, ಹೂ, ಬದನೆಕಾಯಿ ಸೇರಿದಂತೆ ವಿವಿಧ ತರಕಾರಿಗಳಿಂದ ದೇವಿಗೆ ಅಲಂಕಾರ ಮಾಡಿ ಅರ್ಚಕರಾದ ಮುಸಂಗಸ್ವಾಮಿ ದೇವಾಂಗಮಠ, ಗುರುನಾಥಸ್ವಾಮಿ ದೇವಾಂಗಮಠ ಪೂಜೆ ಪುನಸ್ಕಾರ ನೆರವೇರಿಸಿದರು.ಈ ಪಲ್ಲೇದ ಹಬ್ಬ ಆಚರಣೆಗೆ ಒಂದು ಇತಿಹಾಸವಿದ್ದು, ನೂರು ವರ್ಷಗಳ ಹಿಂದೆ ಮಳೆ ಇಲ್ಲದೆ ಬರಗಾಲ ಬಂದಾಗ, ಜನ ಊಟಕ್ಕಾಗಿ ಪರದಾಡುತ್ತಿದ್ದರು.
ಆಗ ಋಷಿ ಮುನಿಗಳು ತಪಸ್ಸು ಮಾಡುವ ಮೂಲಕ ದೇವಿಗೆ ಪ್ರಾರ್ಥನೆ ಸಲ್ಲಿಸಿ, ಬರಗಾಲ ಹೋಗಲಾಡಿಸುವಂತೆ ಬೇಡಿ ಕೊಂಡಿದ್ದರಂತೆ. ಆಗ ದೇವಿಯು ತನ್ನ ಮೈಯಿಂದ ತರಕಾರಿ, ಇತರ ಬೆಳೆಗಳು ಬರುವಂತೆ ಮಾಡಿ, ಭಕ್ತರಿಗೆ ನೀಡಿದ್ದಳಂತೆ. ನಂತರ ಭಕ್ತರೆಲ್ಲಾ ಸೇರಿ ಎಲ್ಲಾ ರೀತಿಯ ತರಕಾರಿ ಮಿಕ್ಸ್ ಮಾಡಿ, ದೇವಿಗೆ ನೈವೇದ್ಯ ಮಾಡಿದ್ದಾರೆ. ಅದೇ ಪರಂಪರೆಯನ್ನು ಈಗಲೂ ಮುಂದುವರೆಸಿಕೊಂಡು ಬರಲಾಗುತ್ತಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಸೋಮನಾಥ ಕುದರಿ ತಿಳಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 