ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ
Jatra Mahotsava of Saliduragamma and Matangemma deities
ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ
ಸವಣೂರ 28: ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಸಾಲಿದುರಗಮ್ಮ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ ಡಿ,30 ರಿಂದ ಜ-3ರ ವರೆಗೆ ಅದ್ದೂರಿಯಾಗಿ ಜರುಗಲಿದೆ.ಡಿ,30 ರಂದು ಸೋಮವಾರ ಬೆಳಿಗ್ಗೆ 6 ಘಂಟೆಗೆ ವರದಾ ನದಿಯ ಶ್ರೀ ದುರ್ಗಾದೇವಿ ದೇವಸ್ಥಾನದಿಂದ ತುಂಬಿದ ಕಳಸದೊಂದಿಗೆ ಹಾಗೂ 101 ಕುಂಭ ಮೇಳದೊಂದಿಗೆ ಬಡಗೇರ ಮನೆಯಿಂದ ಶ್ರೀ ಚಂದ್ರಮುಖಿ ಮಹಿಳಾ ಡೊಳ್ಳು ಕಲಾ ತಂಡ ಕೊಣ್ಣೂರ ಹಾಗೂ ರಮದೋತ ನಾಸಿಕ ಡೋಲ್ ಗುತ್ತಲ ವಾಧ್ಯಮೇಳದೊಂದಿಗೆ ಶ್ರೀ ದೇವಿಯನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು.ಸಾಯಂಕಾಲ 5 ಘಂಟೆಗೆ ಕುಂಭಾಬಿಷೇಕ ಶ್ರೀ ದುರ್ಗಾಹೋಮ ಮತ್ತು ನವಗ್ರಹಶಾಂತಿ ಪೂಜೆ ನೇರವೇರುವುದು.ಡಿ,31 ರಂದು ಮಂಗಳವಾರ ಬೆಳಿಗ್ಗೆ 5-30 ಘಂಟೆಗೆ ರುದ್ರಾಭಿಷೇಕ ಬಿಲ್ವಾರ್ಚನೆ ಹಾಗೂ ಮಹಾಮಂಗಳಾರತಿ ಹಾಗೂ ಉಡಿ ತುಂಬುವುದು.
ಮಧ್ಯಾಹ್ನ 11-30 ಘಂಟೆಗೆ ಧರ್ಮಸಭೆ ನಂತರ ಅನ್ನಪ್ರಸಾದ. ರಾತ್ರಿ 8-30 ರಿಂದ ಸಿಡಿಮದ್ದುಗಳ ಪ್ರದರ್ಶನ ಮತ್ತು ನೃತ್ಯದೊಂದಿಗೆ ಶೃಂಗರಿಸಿದ ಮಂಟಪದಲ್ಲಿ ಶ್ರೀದೇವಿಯ ಉತ್ಸವವು ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬೆಳಿಗ್ಗೆ ತಲುಪುವುದು.ಜ.01 ರಂದು ಬುಧವಾರ ಬೆಳಿಗ್ಗೆ ನೈವಿಧ್ಯ ಹಣ್ಣು-ಕಾಯಿ ಮತ್ತು ಯಡೆ ಕೊಡುವುದು.ಸಾಯಂಕಾಲ 6-30ಕ್ಕೆ ರುದ್ರಾಭಿಷೇಕ ಮಹಾಪೂಜೆ ಜರುಗುವುದು.ಜ-02 ರಂದು ಗುರುವಾರ ಬೆಳಿಗ್ಗೆ 6-30 ರಿಂದ ರುದ್ರಾಭಿಷೇಕ ಮತ್ತು ಮಹಾಪೂಜೆ.ರಾತ್ರಿ 8-30 ಘಂಟೆಗೆ ರಸಮಂಜರಿ ಕಾರ್ಯಕ್ರಮ ಜರುಗುವವು.ಜ-03 ರಂದು ಶುಕ್ರವಾರ ಬೆಳಿಗ್ಗೆ 6-30 ರಿಂದ ರುದ್ರಾಭಿಷೇಕ ಮತ್ತು ಉಡಿ ತುಂಬವ ಕಾರ್ಯಕ್ರಮ ಮತ್ತು ಮಹಾಮಂಗಳಾರತಿ.ರಾತ್ರಿ 9-30 ಕ್ಕೆ ಭಾರಿ ಸವಾಲ್ ಜವಾಲ್ ಭಜನಾ ಸ್ಪರ್ಧೆ ಜರುವುದು.ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಊರಿನ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವತೆಗಳ ಆರ್ಶಿವಾದ ಪಡೆದುಕೊಳ್ಳಬೇಕೆಂದು ಸಾಲಿದುರಗಮ್ಮ ಹಾಗೂ ಮಾತಂಗೆಮ್ಮದೇವಿ ಸೇವಾ ಸಮಿತಿ(ರಿ)ಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 