ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ: ಶಾಸಕ ರಾಜಗೌಡ

Development work to be done in a phased manner: MLA Rajagowda

ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ: ಶಾಸಕ ರಾಜಗೌಡ  

ತಾಳಿಕೋಟಿ 04: ಮತಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವೇಗವಾಗಿ ಮಾಡಲು ಅನುದಾನದ ಕೊರತೆ ಇದೆ ನಾನು ವಿರೋಧ ಪಕ್ಷದಲ್ಲಿರುವುದರಿಂದ ಹೆಚ್ಚಿನ ಅನುದಾನ ಸಿಗುತ್ತಿಲ್ಲ ಆದರೂ ಕಷ್ಟಪಟ್ಟು ಅನುದಾನ ತಂದು ಕ್ಷೇತ್ರದ ಎಲ್ಲ ಗ್ರಾಮಗಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ ಕೊಟ್ಟು ಕೆಲಸ ಮಾಡುತ್ತಿದ್ದೇನೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ನನಗೆ ಬೇಕು ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಹೇಳಿದರು.  

ತಾಳಿಕೋಟಿ ತಾಲೂಕಿನ ದೇವರ ಹಿಪ್ಪರಗಿ ಮತಕ್ಷೇತ್ರ ವ್ಯಾಪ್ತಿಯ ಬೊಮ್ಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಪಂ, ಪಂಚಾಯತ ರಾಜ್ ಇಂಜಿನಿಯರಿಂಗ ವಿಭಾಗ ವಿಜಯಪುರ 2022- 23ನೇ ಸಾಲಿನ ನರೇಗಾ ಕನ್ವರ್ಜನ್ಸ್‌ ಎಸ್ ಡಿ ಪಿ ಯೋಜನೆಯ ರೂ.60 ಲಕ್ಷ ಮೊತ್ತದ ಅನುದಾನದ ಅಡಿಯಲ್ಲಿ ಬೊಮ್ಮನಹಳ್ಳಿ ಹಾಗೂ ಬೋಳವಾಡ ಗ್ರಾಮಗಳಲ್ಲಿ ನಿರ್ಮಾಣಗೊಂಡಿರುವ ಮೂರು ಅಂಗನವಾಡಿ ನೂತನ ಕಟ್ಟಡಗಳನ್ನು ಉದ್ಘಾಟಸಿ ಅವರು ಮಾತನಾಡಿದರು.  

ಶಿಕ್ಷಣ ಅತಿ ಮುಖ್ಯವಾದದ್ದು ಈ ಕ್ಷೇತ್ರಕ್ಕೆ ನಾನು ಆದ್ಯತೆ ಕೊಟ್ಟು ಕೆಲಸ ಮಾಡುತ್ತಿದ್ದೇನೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅಗತ್ಯ ಶಾಲಾ ಕಟ್ಟಡಗಳ ಹಾಗೂ ಅವುಗಳ ಮೂಲಭೂತ ಸೌಕರ್ಯಗಳ ಕುರಿತು ಶಿಕ್ಷಣ ಸಚಿವರೊಂದಿಗೆ ಮಾತನಾಡಿದ್ದೇನೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪಿಡಿಒಗಳು ಇದರ ಕುರಿತು ಅಗತ್ಯ ಮಾಹಿತಿಯನ್ನು ಇಲಾಖೆ ಹಾಗೂ ನನಗೆ ನೀಡಬೇಕು. ಈ ಶಾಲೆಯ ಮುಖ್ಯ ಗುರುಗಳು ಶಾಲಾ ಆವರಣದಲ್ಲಿರುವ ಶಿಥಿಲಗೊಂಡ ಕೊಠಡಿಗಳನ್ನು ಮಕ್ಕಳ ರಕ್ಷಣೆ ಹಿತ ದೃಷ್ಟಿಯಿಂದ ತೆಗೆದ ಹಾಕಲು ಹಾಗೂ ಕೆಲವು ಸಣ್ಣಪುಟ್ಟ ಕೆಲಸಗಳಿಗಾಗಿ ಮನವಿ ಮಾಡಿಕೊಂಡಿದ್ದಾರೆ ಅದನ್ನು ಬಿಇಓ ಹಾಗೂ ಗ್ರಾಮ ಪಂಚಾಯತಿಯವರು ಬೇಗ ಮಾಡಿಸಿಕೊಡಲು ಕಾರ್ಯೋನ್ಮುಖರಾಗಬೇಕೆಂದು ಸೂಚನೆ ನೀಡುತ್ತೇನೆ ಎಂದ ಅವರು ಕ್ಷೇತ್ರದಲ್ಲಿ ಮಾಡಬೇಕಾದ ಅಭಿವೃದ್ಧಿಯ ಕಾರ್ಯಗಳು ಸಾಕಷ್ಟಿವೆ. ಇನ್ನೂ ನನಗೆ ಮೂರು ವರ್ಷಗಳ ಅವಧಿ ಇದೆ. ಎಲ್ಲ ಕಾರ್ಯಗಳನ್ನು ಹಂತ ಹಂತವಾಗಿ ಮಾಡುತ್ತೇನೆ ಎಂದರು. 

 ಇಂದು ನೀವು ನನಗೆ ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿ ಗೌರವಿಸಿದ್ದೀರಿ ಈ ನಿಮ್ಮ ಸನ್ಮಾನ ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು. ಜೆಡಿಎಸ್ ಮುಖಂಡ ಮಡು ಸಾಹುಕಾರ ಬಿರಾದಾರ ಪ್ರಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಶಾಸಕ ರಾಜುಗೌಡರು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ಈ ವರ್ಷದ ಪಠ್ಯ ಪುಸ್ತಕಗಳನ್ನು ವಿತರಿಸಿದರು. ಗ್ರಾಪಂ, ಸಿಡಿಪಿಒ, ಪಿ.ಆರಿ​‍್ಡ.ಎ. ಬಿಇಒ ಸಿಬ್ಬಂದಿ ಹಾಗೂ ಗ್ರಾಮಸ್ಥರಿಂದ ಶಾಸಕ ರಾಜುಗೌಡರಿಗೆ ಸನ್ಮಾನಿಸಲಾಯಿತು. ಗ್ರಾಪಂ ಅಧ್ಯಕ್ಷೆ ಸರೋಜಿನಿ ಮಲ್ಕಣ್ಣ ಮಸರಕಲ್ಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಗಣ್ಯರಾದ ಯಮನಪ್ಪ ಮಸರಕಲ್, ಶಿವಶಂಕರ​‍್ಪ ಕಟ್ಟಿಮನಿ, ನಿಂಗನಗೌಡ ಕಲಬುರ್ಗಿ, ವೀರೇಶಗೌಡ ಕಾರಗನೂರ, ಸಿದ್ದಣ್ಣ ಕಟ್ಟಿಮನಿ, ಸಾಹೇಬಗೌಡ ಪಾಟೀಲ, ಜಗನ್ನಾಥ ಮಸರ್ಕಲ್, ಶಿವು ಕಲಬುರ್ಗಿ, ಬಿಇಒ ಬಿ.ಎಸ್‌.ಸಾವಳಗಿ, ಬಿ.ಆರಿ​‍್ಪ. ಎಸ್‌.ಎಸ್‌.ಹಿರೇಮಠ, ಇಲಿಯಾಸ್ ಬಾಗವಾನ, ಸಿ.ಆರಿ​‍್ಪ. ಎಲ್‌. ಜಿ.ಬಾಗೇವಾಡಿ, ಮು.ಗು.ಎ.ಡಿ.ಗೋನಾಳ, ಎಇಇ ಶಿವರಾಜ ನಾಯಕ, ಅಭಿಯಂತರ ಪ್ರವೀಣ ಬಿರಾದಾರ, ಎಸಿಡಿಪಿಒ ಲಕ್ಷ್ಮಿ ಬಡಿಗೇರ, ಎಸ್‌.ಸಿ.ದೇಸಾಯಿ, ಪಿಡಿಒ ಪಿ.ಬಿ.ಚೆನ್ನೂರ, ತಾಪಂ,ಗ್ರಾಪಂ, ಸಿಬ್ಬಂದಿಗಳು, ಪಿಕೆಪಿಎಸ್ ಸದಸ್ಯರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಗ್ರಾಮಸ್ಥರು ಇದ್ದರು. ಶರಣಮ್ಮ ಪ್ರಾರ್ಥಿಸಿದರು. ಪಿಡಿಓ ಪ್ರಭು ಚೆನ್ನೂರ ಸ್ವಾಗತಿಸಿದರು. ಶಿಕ್ಷಕ ಜಿ.ಕೆ.ಪತ್ತಾರ ನಿರೂಪಿಸಿದರು.