ಕಳಪೆ ಬೀಜ, ಓಷಧಿ ಮತ್ತು ಅತಿವೃಷ್ಠಿಯಿಂದ ಬೆಳೆ ಹಾನಿ: ಪರಿಹಾರಕ್ಕಾಗಿ ರೈತರ ಮನವಿ
Crop damage due to poor seeds, pesticides and heavy rains: Farmers appeal for compensation
ಬೆಳಗಾವಿ 31: ಕರ್ನಾಟಕ ರಾಜ್ಯ ಹಾಗೂ ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಈ ಬಾರಿ ಕಳಪೆ ಬೀಜಗಳು ಮತ್ತು ಕಳಪೆ ಕೀಟನಾಶಕ ಓಷದ ಹಾಗೂ ಅತಿವೃಷ್ಟಿ ಮಳೆಹಾನಿಯಿಂದ ಸೋಯಾಬಿನ, ಹೆಸರು,ಹತ್ತಿ,ಕಬ್ಬು ಬೆಳಗಾರರಿಗೆ ಬಹಳಷ್ಟು ನಷ್ಟ ಉಂಟಾಗಿದೆ. ಬೆಳೆವಿಮೆ ಸಮೀಕ್ಷೆಯಲ್ಲೂ ಬಹಳಷ್ಟು ರೈತರಿಗೆ ಅನ್ಯಾಯವಾಗಿದೆ. ಇನ್ನೂವರೆಗು ರೈತರ ಖಾತೆಗೆ ಜಮಾ ಆಗದೆ ಇರುವುದು ಖಂಡನೀಯ ಸರಿಯಾಗಿ ಪರೀಶಿಲಿಸಿ ರೈತರಿಗೆ ಕನಿಷ್ಠ 25000 ಪರಿಹಾರ ನಿಗದಿಪಡಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ನೇಗಿಲಯೋಗಿ ರೈತ ಸೇವ ಸಂಘ ಮನವಿ ಸಲ್ಲಿಸಿದರು.ಈ ವರ್ಷ ಮಳೆ ಹೆಚ್ಚಾಗಿ ಕಬ್ಬಿನ ಬೆಲೆ ಕುಂಟಿತವಾಗಿದೆ, ಬಿಳಿ ಉಣ್ಣೆ ರೋಗ ತಗುಲಿದೆ. 2025/26 ನೇ ಸಾಲಿನಲ್ಲಿ ಕಬ್ಬಿಗೆ ಗುಜರಾತ್ ಮತ್ತು ಪಂಜಾಬ ಹಾಗೂ ಮಹಾರಾಷ್ಟ್ರ ಮಾದರಿಯಲ್ಲಿ 1 ಟನ್ ಗೆ 3500 ರಿಂದ 4000 ಬೆಲೆ ಘೋಷಣೆ ಮಾಡಬೇಕೆಂದು ಪ್ರಮುಖ ಬೆಳೆಗಳಿಗೆ ಖರೀದಿ ಕೇಂದ್ರ ಸ್ಥಾಪಿಸಲು ಒತ್ತಾಯಿಸಿದರು. ರಾಜ್ಯ ರೈತರ ಹಲವಾರು ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದರು. ಸರ್ಕಾರ ಇತ್ತೀಚಿನ ದಿನಗಳಲ್ಲಿ ರೈತ ಮತ್ತು ಬಡವರ್ಗದವರನ್ನು ಕಡೆಗಣಿಸುತ್ತಿರುವುದು ಖಂಡನೀಯ, ಮುಂದಿನ ದಿನಗಳಲ್ಲಿ ರೈತರೆಲ್ಲರೂ ಉಗ್ರಹೋರಾಟ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 