ಬಾರದ ಮಳೆಯಿಂದ ಬೆಳೆದ ಕಡಲೆ ಈಳುವರಿ ಕುಂಟಿತ
Chickpea yield stunted due to lack of rain
ಬಾರದ ಮಳೆಯಿಂದ ಬೆಳೆದ ಕಡಲೆ ಈಳುವರಿ ಕುಂಟಿತ
ಯಲಬುರ್ಗಾ 14: ಈ ವರ್ಷದ ಮುಂಗಾರಿನಆರಂಭದಲ್ಲಿ ಸುರಿದಅಲ್ಪ ಮಳೆ ರೈತರಲ್ಲಿ ಮೂಡಿಸಿದ ಮಂದಹಾಸ ಬಹುಕಾಲ ಉಳಿಯಲಿಲ್ಲ, ನಂತರ ಸಕಾಲದಲ್ಲಿ ಮಳೆ ಸುರಿಯದಕಾರಣ ಮತ್ತೆರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ತಾಲ್ಲೂಕಿನ ಹೊಸಳ್ಳಿ ಚಿಕ್ಕೋಪ್ಪ, ಮುಧೋಳ, ಕರಮುಡಿ, ತೊಂಡಿಹಾಳ, ಬಂಡಿಹಾಳ, ಹಿರೇಮ್ಯಾಗೇರಿ, ಸಂಗನಾಳ, ಕಲ್ಲೂರು ಸೇರಿ ವಿವಿಧೆಡೆ ಹಿಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಕಡಲೆ ಬೆಳೆಯಲಾಗಿದೆ. ಆದರೆ ಸಕಾಲಕ್ಕೆ ಮಳೆ ಆಗದೇತೇವಾಂಶಕೊರತೆ ಹಾಗೂ ಚಳಿಯ ಅಭಾವದಿಂದಕಡಲೆ ಬೆಳೆ ಇಳುವರಿ ಕುಸಿದಿದೆ.ಎಕರೆಗೆ 2 ಕ್ವಿಂಟಾಲ್: ಹೋಬಳಿಯ ಹಲವಡೆ ಹಿಂಗಾರು ಹಂಗಾಮಿನಲ್ಲಿಅಧಿಕ ಪ್ರಮಾಣದಲ್ಲಿಕಡಲೆ ಬೆಳೆಯಲಾಗಿದೆ.ಫಸಲಿನ ರಾಶಿ ಮಾಡುವಕಾರ್ಯ ಭರದಿಂದ ಸಾಗಿದ್ದರೂ ಇಳುವರಿ ಮಾತ್ರತೀವ್ರವಾಗಿ ಕುಸಿದಿದೆ. ಪ್ರತಿ ಬಾರಿ ಎಕರೆಗೆ 5ರಿಂದ 6 ಕ್ವಿಂಟಾಲ್ ಇಳುವರಿ ಬರುತ್ತಿತ್ತು.ಈ ಬಾರಿಎರಡುಕ್ವಿಂಟಾಲ್ದಾಟದಿರುವುದುರೈತರ ನಿದ್ದೆಗಡೆಸಿದೆ.ಹೆಚ್ಚು ಖರ್ಚು: ಕಪ್ಪು ಮಣ್ಣು ಪ್ರದೇಶದಲ್ಲಿ ಹಿಂಗಾರು ಹಂಗಾಮಿಗೆ ಕಡಲೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ.
ಈ ಬೆಳೆಗೆ ಕೀಟಬಾಧೆ ಹೆಚ್ಚು.ಬಿತ್ತನೆ ಮಾಡಿ ಬೆಳೆಗೆ ಹೂ ಹಾಗೂ ಕಾಯಿ ಹಿಡಿಯವರೆಗೂ ಕೀಟಗಳಿಂದ ಸಂರಕ್ಷಿಸಲುಕೀಟನಾಶಕ ಸಿಂಪಡಿಸಬೇಕು.ಎಕರೆಗೆ ಕನಿಷ್ಠ 6 ರಿಂದ 7 ಸಾವಿರರೂ.ಖರ್ಚು ಮಾಡಬೇಕಾಗುತ್ತದೆ.ರಾಶಿ ಮಾಡಲು 8 ರಿಂದ 10 ಸಾವಿರರೂ.ಖರ್ಚಾಗುತ್ತದೆ.ಖರ್ಚು ಹೆಚ್ಚಾದರೂಎಕರೆಗೆ 2 ಕ್ವಿಂಟಾಲ್ ಇಳುವರಿ ಬಂದಿರುವುದು ನುಗ್ಗಲಾರದತುತ್ತಾಗಿ ಪರಿಣಮಿಸಿದೆ.ಕಳೆದ ಮೂರ್ನಾಲ್ಕು ವರ್ಷಗಳಿಂದ ಕಡಿಮೆ ಮಳೆ ಆಗುತ್ತಿದ್ದು, ಈ ವರ್ಷ ಮುಂಗಾರು, ಹಿಂಗಾರು ಮಳೆ ಇಲ್ಲದೆರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಿಂಗಾರು ಬೆಳೆಗೆ ಮಳೆಗಿಂತ ತೇವಾಂಶ ಮತ್ತು ಚಳಿ ಅಗತ್ಯ.ಈ ಬಾರಿಅದೂಕಡಿಮೆಯಾಗಿಕಡಲೆ ಬೆಳೆ ಇಳುವರಿ ಕುಸಿದಿದೆ. ಬಾಕ್ಸ್ ಸುದ್ದಿ ಹೋದ ವರ್ಷ ಒಳ್ಳೆ ಮಳೆಯಾಗಿತ್ತು ಚಲೋ ಬೆಳೆ ಬಂದಿತ್ತು ಈ ವರ್ಷನೂ ಮಳೆ ಸರಿಯಾಗಿ ಬೀಳಬಹುದೆಂಬ ಆಸೆಯಿಂದದುಬಾರಿ ಮೆಕ್ಕೆಜೋಳ ಬೀಜ ಖರೀದಿಸಿ ಬಿತ್ತಿದ್ವೀ... ಆದ್ರೆ ಮಾರುದ್ದ ಬೆಳೆದು ನಿಂತಿದ್ದ ಬೆಳೆ ದಿನದಿಂದ ದಿನಕ್ಕೆ ಬಾಡಿ ಹೋಯ್ತಿರ್ರಿ ಮನಸ್ಸಿಗೆ ಬಾಳ ನೋವು ಆಗೈತ್ರಿ.ಸರ್ಕಾರಕೂಡಲೇ ನೆರವು ನೀಡಿದರೆಜೀವನಕ್ಕೆಒಂದುದಾರಿಆಕೈತ್ರಿ. ಽ ಸಂಗನಗೌಡ ಪಾಟೀಲ್ರೈತಚಿಕ್ಕೊಪ್ಪ
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 