ಹದಿಹರೆಯದ ಯುವತಿಯರ ಮಾನಸಿಕ-ದೈಹಿಕ ಆರೋಗ್ಯದ ಜಾಗೃತೆ ಅತ್ಯವಶ್ಯ: ಡಾ. ಕುಲಕರ್ಣಿ
Awareness of mental and physical health of adolescent girls is essential: Dr. Kulkarni
ಧಾರವಾಡ 22: ದಿ. 21ರಂದು ನಗರದ ಟೋಲನಾಕಾದ ಅರ್ಜುನ ಪ.ಪೂ. ಮಹಾವಿದ್ಯಾಲಯದ ಸಭಾಂಗಣದಲ್ಲಿ ಸಂಸ್ಕಾರ ಭಾರತಿ ಹಾಗೂ ಅರ್ಜುನ ಪ.ಪೂ. ಮಹಾವಿದ್ಯಾಲಯದ ಸಹಯೋಗದಲ್ಲಿ “ಹದಿಹರೆಯದ ಯುವತಿಯರಿಗಾಗಿ ಆಪ್ತ ಸಮಾಲೋಚನೆ” ಕಾರ್ಯಕ್ರಮವನ್ನು ಏರಿ್ಡಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸ್ಕಾರ ಭಾರತಿ ಕರ್ನಾಟಕ ಉತ್ತರ ಪ್ರಧಾನ ಕಾರ್ಯದರ್ಶಿಗಳಾದ ಡಾ.ಶಶಿಧರ ನರೇಂದ್ರ ಅವರು ಮಾತನಾಡುತ್ತ, ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು. ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ. ಎಂಬ ಗಾದೆ ಮಾತುಗಳು ಇಂದಿನ ದಿನಮಾನಕ್ಕೆ ಅತ್ಯಂತ ಅವಶ್ಯಕ ಎಂಬಂತಾಗಿದೆ. ಅದರಲ್ಲೂ ಓದು...ಓದು..ಓದು..ಅಂಕ..ಅಂಕ..ಅಂಕ..ಎಂಬ ಧಾವಂತದಲ್ಲಿ ಕರಿಯರ್ ಎಂಬ ಭ್ರಮೆಯಲ್ಲಿ... ವಸತಿ ಸಹಿತ ಶಾಲೆ ಕಾಲೇಜುಗಳು ವಿದ್ಯಾರ್ಥಿಗಳಿಗೆ ಅನಿವಾರ್ಯ ಎಂಬಂತಾಗಿರುವಾಗ ವಿದ್ಯಾರ್ಥಿಗಳ ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯಗಳು ಏರುಪೇರಾಗುತ್ತಿವೆ. ಇಂದು ಹದಿಹರೆಯದ ಯುವತಿಯರಿಗೆ ತಜ್ಞವೈದ್ಯರಿಂದ ಆಪ್ತ ಸಮಾಲೋಚನೆ ಅತ್ಯಗತ್ಯವಾಗಿದೆ ಎಂದರು.
ಧಾರವಾಡ ಖ್ಯಾತ ಸ್ತ್ರೀರೋಗ ತಜ್ಞೆ ಹಾಗೂ ಸಂಸ್ಕಾರ ಭಾರತಿ, ಧಾರವಾಡ ಅಧ್ಯಕ್ಷರಾದ ಡಾ. ಸೌಭಾಗ್ಯ ಕುಲಕರ್ಣಿ ಅವರು ಹದಿಹರೆಯದ ಯುವತಿಯರ ಮಾನಸಿಕ ಸಮಸ್ಯೆಗಳು ಕುರಿತು ಆಪ್ತ ಸಮಾಲೋಚನ ನಡೆಸಿದರು. ವಸತಿಶಾಲೆಯ ಸುಮಾರು ನೂರು ವಿದ್ಯಾರ್ಥಿನಿಯರು ಪಾಲ್ಗೊಂಡು ಲಾಭ ಪಡೆದುಕೊಂಡರು. ಜೊತೆಗೆ ಡಾ.ಸೌಭಾಗ್ಯ ಕುಲಕರ್ಣಿ ಅವರು ವಿದ್ಯಾರ್ಥಿನಿಯರಿಗೆ ಸ್ತ್ರೀರೋಗಕ್ಕೆ ಸಂಬಂಧಿಸಿದಂತೆ ಉಚಿತ ಸಂದರ್ಶನವನ್ನು ಕಲ್ಪಿಸಿದ್ದಲ್ಲದೆ, ತಮ್ಮ ಪ್ರಶಾಂತ ನಸಿಂರ್ಗ ಹೋಮ ಮೂಲಕ ಆರೋಗ್ಯ ವಿಷಯಕ್ಕೆ ಅರ್ಜುನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯವನ್ನು ದತ್ತು ತೆಗೆದುಕೊಳ್ಳುವುದಾಗಿ ತಿಳಿಸಿದರು. ಪ್ರತಿ ಎರಡು ತಿಂಗಳಿಗೊಮ್ಮೆ ಕಾಲೇಜಿಗೆ ಭೇಟಿ ನೀಡಿ ಉಚಿತವಾಗಿ ವಿದ್ಯಾರ್ಥಿನಿಯರ ಆರೋಗ್ಯ ತಪಾಸಿಸುವುದಾಗಿ ತಿಳಿಸಿದರು. ಅರ್ಜುನ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ನಿರ್ದೇಶಕ ಶಿವರಾಜ ಸುಲಾಖೆ ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಪ್ರೊ.ಸಂತೋಷ ಹಂಚಾಟೆ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸಂತೋಷ ಭಟ್ ಉಪಸ್ಥಿತರಿದ್ದರು. ಸಂಸ್ಕಾರ ಭಾರತಿಯ ಸಾಧನಾ ಮಿರಜಕರ ಮತ್ತು ವೈಶಾಲಿ ರಸಾಳಕರ ವಿದ್ಯಾರ್ಥಿನಿಯರೊಂದಿಗೆ ಆಪ್ತ ಸಂಯೋಜಕಿಯರಾಗಿ ಕಾರ್ಯನಿರ್ವಹಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 