ಕಾಲು ಬಾಯಿ ರೋಗ ತಡೆಗೆ ಪಶುಲಸಿಕಾ ಅಭಿಯಾನ ಆರಂಭ
Animal vaccination campaign begins to prevent foot-and-mouth disease
ಹನುಮಸಾಗರ 03: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ (ಓಂಆಅಕ) ಅಡಿ 9ನೇ ಹಂತದ ಕಾಲು ಬಾಯಿ ರೋಗ (ಈಒಆ) ಲಸಿಕಾ ಅಭಿಯಾನವು ನವೆಂಬರ್ 3ರಿಂದ ಡಿಸೆಂಬರ್ 2ರವರೆಗೆ ಜಿಲ್ಲೆಯಾದ್ಯಂತ ನಡೆಯಲಿದೆ ಎಂದು ಜಾನುವಾರು ಅಧಿಕಾರಿ ಎಮ್ ಜಿ ಹೊಳೆಆಲೂರ ತಿಳಿಸಿದರು.ಹನುಮಸಾಗರದ ಪಶು ಕೇಂದ್ರದ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕ ಅಭಿಯಾನದಲ್ಲಿ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದಂತಹ ರುದ್ರಗೌಡ ಗೌಡಪ್ಪನವರು ಉದ್ಘಾಟಿಸಿದರು. ರಾಜ್ಯ ಸರ್ಕಾರದ ಆಶ್ರಯದಲ್ಲಿ ನಡೆಯುತ್ತಿರುವ ಈ ಅಭಿಯಾನವು ಪಶುಗಳ ಆರೋಗ್ಯ ಕಾಪಾಡಿ, ಹಾಲು ಉತ್ಪಾದಕರ ಹಾಗೂ ರೈತರ ಆರ್ಥಿಕ ಹಿತಾಸಕ್ತಿಯನ್ನು ರಕ್ಷಿಸುವ ಉದ್ದೇಶ ಹೊಂದಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಮತ್ತು ಪಶುಪಾಲನಾ ಸಚಿವ ಕೆ. ವೆಂಕಟೇಶ್ ಅವರ ಆಶ್ರಯದಲ್ಲಿ ಈ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ ಎಂದು ಜಾನುವಾರು ಅಧಿಕಾರಿ ಎಮ್ ಜಿ ಹೊಳೆಆಲೂರ ತಿಳಿಸಿದರು.
ಅಭಿಯಾನದ ಅವಧಿಯಲ್ಲಿ ಜಿಲ್ಲೆಯಾದ್ಯಂತ ಹಸು, ಎಮ್ಮೆ, ಕುರಿ, ಮೇಕೆ ಮುಂತಾದ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ರೈತರು ಹಾಗೂ ಪಶುಪಾಲಕರು ತಮ್ಮ ಹತ್ತಿರದ ಪಶುವೈದ್ಯಕೀಯ ಆಸ್ಪತ್ರೆ, ಪಶು ಚಿಕಿತ್ಸಾ ಕೇಂದ್ರ ಅಥವಾ ಪಶು ಸಹಾಯಕ ಕೇಂದ್ರಗಳಿಗೆ ಸಂಪರ್ಕಿಸಿ ಲಸಿಕೆ ಪಡೆಯಬಹುದು.ಪಶುಗಳಲ್ಲಿ ಕಾಲು ಬಾಯಿ ರೋಗ ತಡೆಗಟ್ಟಲು ಈ ಲಸಿಕೆ ಅತ್ಯಂತ ಪರಿಣಾಮಕಾರಿ ಎಂದು ಇಲಾಖೆಯು ತಿಳಿಸಿದೆ. ರೋಗದಿಂದ ಉಂಟಾಗುವ ಆರ್ಥಿಕ ನಷ್ಟವನ್ನು ತಪ್ಪಿಸಲು ಮತ್ತು ಹಾಲು ಉತ್ಪಾದನೆಯಲ್ಲಿ ಏರಿಕೆ ತರಲು ಲಸಿಕೆ ಸಹಕಾರಿಯಾಗುತ್ತದೆ. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ರೈತ ಸಂಘ ಘಟಕ ಅಧ್ಯಕ್ಷ ಯಮನೂರ್ಪ ಮಡಿವಾಳರ, ಪಶುವೈದ್ಯ ಪರೀಕ್ಷಕರಾದ ದಂಡಪ್ಪ ಜಾನುವಾರು ಅಧಿಕಾರಿ ಎಮ್ ಜಿ ಹೊಳೆಆಲೂರ ಸಿಬ್ಬಂದಿ ಫೀರಸಾಬ ಹೊಸಮನಿ , ಬೈಫ್ ಸಿಬ್ಬಂದಿ ಮಂಜುನಾಥ ಮಾಳಶೆಟ್ಟಿ, ರೈತರಾದ ಬಸವರಾಜ ಮೊಟಗಿ, ಯಮನಪ್ಪ ಕಬ್ಬರಗಿ, ರಮೇಶ ತಳ್ಳಿಕೇರಿ, ಶಿವುಕುಮಾರ ಚಿನಿವಾಲರ, ಮುತ್ತಣ್ಣ ಹಲಕೂಲಿ, ಯಮನಪ್ಪ ಗಡೇಕಾರ, ಮೈಬೂಬಸಾಬ ಕುಷ್ಟಗಿ, ಪಶು ಸಖಿಯರಾದ ಲಕ್ಷ್ಮೀ ಬಡಿಗೇರ, ದೀಪಾ ಸೂಡಿ ಸೇರಿದಂತೆ ಪ್ರಮುಖ ರೈತರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 