ಗುರುವಿನ ಕೃಪೆಯಿಂದ ಸಾಧನೆ ಸಾಧ್ಯ: ಯಲಬುರ್ಗಾ ಶ್ರೀ
Achievement is possible with the grace of the Guru: Yelaburga Sri
ಗುರುವಿನ ಕೃಪೆಯಿಂದ ಸಾಧನೆ ಸಾಧ್ಯ: ಯಲಬುರ್ಗಾ ಶ್ರೀ
ಕುಕನೂರ 12 : ಮನುಷ್ಯ ತನ್ನ ಜೀವನದಲ್ಲಿ ಗುರುವಿನ ಕೃಪೆಯಿಂದ ಮಾತ್ರ ಎತ್ತರಕ್ಕೆ ಬೆಳೆಯಲು ಸಾದ್ಯ ಎಂದು ಯಲಬುರ್ಗಾದ ಶ್ರ ಷ ಬ್ರ ಬಸವಲಿಂಗೇಶ್ವರ ಸ್ವಾಮೀಜೀ ಹೇಳಿದರು.
ಅವರು ಕುಕನೂರ ತಾಲ್ಲೂಕಿನ ತಳಕಲ್ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ ಅನ್ನದಾನೀಶ್ವರರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡುತ್ತಾ ಶ್ರೀಮಠದ 9 ನೇ ಜಗದ್ಗುರುಗಳು ಪಂಡಿತರಾಗಿ, ಭವರೋಗ ವೈದ್ಯರಾಗಿ ಜೀವನ ನಡೆಸಿದವರು ತಮ್ಮ ಬದುಕಿನುದ್ದಕ್ಕೂ ಹಲವಾರು ಪವಾಡಗಳನ್ನ ಮಾಡುತ್ತಾ ಲೀಲಾಮೂರ್ತಿಯಾಗಿ ಅಪಾರ ಭಕ್ತರನ್ನ ಸಂಪಾದಿಸಿದವರು ಎಂದರು.
ನಂತರ ಮಾತನಾಡಿದ ಶ್ರೀಮಠದ ಪೂಜ್ಯ ಮಹಾದೇವ ಸ್ವಾಮೀಜಿ ನಮ್ಮ ಮಠದ ಗುರುಗಳು ತಳಕಲ್ ಗ್ರಾಮದ ಜನರಿಗೆ 4 ಎಕರೆ ಭೂಮಿ ನೀಡಿದ ಭೂ ದಾನಿಗಳು, ಅವರ ಕಾಲದಲ್ಲಿ ಶ್ರೀಮಠ ಹಲವಾರು ಧರ್ಮಪರ ಕಾರ್ಯಗಳಿಗೆ ದಾನ ಧರ್ಮ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ, ಹಲವಾರು ಮಠ ಮಂದಿರಗಳ ಕಲ್ಯಾಣಕ್ಕೆ ಶ್ರೀಮಠದ ಗುರುಗಳು ಶ್ರಮಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಗುರುಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ರುದ್ರಾಬಿಷೇಕ, ಮಹಾದಾಸೋಹ ನಡೆಸಲಾಯಿತು. ಮಲ್ಲಪ್ಪ ಗೋರಿ, ಮುದಿಯಪ್ಪ ಯೋಗೆಮ್ಮನವರ, ರಾಮಣ್ಣ ನಿಟ್ಟಲಿ, ಸೋಮಣ್ಣ ಕರ್ಜಗಿ, ಬಸವರಾಜ ಬ್ಯಾಳಿ, ಸುರೇಶ, ಪಕ್ಕಪ್ಪ ಅಳವಂಡಿ, ಮಂಜುನಾಥ, ನವೀನಕುಮಾರ, ಹನುಮಂತ, ಕಲ್ಲಯ್ಯ ಸೇರಿದಂತೆ ಹಲವಾರು ಭಕ್ತರು ಇದ್ದರು.
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ 