ಓಲಾ, ಊಬರ್ ಮಾದರಿಯಂತೆ ರೈತರ ನೆರವಿಗೆ ಈಗ ಕಿಸಾನ್ ರಥ
ನವದೆಹಲಿ,
ಏ 18, ಕರೋನ ನಿವಾರಣೆಗಾಗಿ ಆರೋಗ್ಯ ಸೇತು ಮಾದರಿಯಂತೆ ಈಗ ರೈತರ ಪಾಲಿಗೆ
ವರವಾಗುವ ಕಿಸಾನ್ ರಥ ಆಪ್ ಸಿಹಿಸುದ್ದಿ ಬಂದಿದೆ. ರೈತರ ಹಣ್ಣು ಕಾಯಿ ತರಕಾರಿ
ಮುಂತಾದ ಉತ್ಪನ್ನಗಳನ್ನೂ ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ಓಲಾ ಹಾಗೂ ಊಬರ್ ಗಳು
ಕಾರ್ಯ ನಿರ್ವಹಿಸುವ ರೀತಿಯಂತೆ ಕಿಸಾನ್ ರಥ ಸಿದ್ದವಾಗಿದೆ.ಇದಕ್ಕಾಗಿ ಆಪ್
ಕೂಡ ಸಿದ್ದಪಡಿಸಲಾಗಿದೆ. ಲಾಕ್ ಡೌನ್ ನಿಂದ ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ
ಸಾಗಿಸಲು ಪರದಾಡುತ್ತಿರುವ ರೈತರ ಸಮಸ್ಯೆಗಳನ್ನು ಬಗೆಹರಿಸಲು ಇದು ವರದಾನವಾಗಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈ ಆಪ್ ನ್ನು ಬಿಡುಗಡೆ ಮಾಡಿದ್ದು,
ಲಾಕ್ ಡೌನ್ ನಿಂದ ರೈತರು ತಮ್ಮ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಬಹುದಾಗಿದೆ. ಕಿಸಾನ್ ರಥ ದ ಮೂಲಕ ರೈತರು ತಾವು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಸಾಗಿಸಬಹುದು ಎಂದು ಹೇಳಿದ್ದಾರೆ.ಕೇಂದ್ರ
ಸರ್ಕಾರವು ಬಿಡುಗಡೆ ಮಾಡಿರುವ ಈ ನೂತನ ಕಿಸಾನ್ ರಥ್ ಮೂಲಕ ರೈತರು ತಮ್ಮ ಬೆಳೆಗಳನ್ನು
ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸಬಹುದಾಗಿದೆ. ತಕ್ಷಣದ ಅಗತ್ಯವನ್ನು
ಪೂರೈಸಲು ಮನಗಂಡ ಕೇಂದ್ರ ಸರ್ಕಾರ ಉಪಯೋಗ ಮಾಡಿಕೊಂಡು ರೈತರ ನೆರವಿಗೆ ಧಾವಿಸಿದೆ.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 