ಸಮಾಜಸೇವಕ ಅಬ್ದುಲಖಾದರ ಧಾರವಾಡರಿಗೆ ಆರ್ಟಿಒ ವತಿಯಿಂದ ಸನ್ಮಾನ
Social worker Abdulkhadar Dharwad honored by RTO
ಲೋಕದರ್ಶನ ವರದಿ
ಹಾವೇರಿ 28: ರಸ್ತೆ ಅಪಘಾತದಲ್ಲಿ ಗಾಯಗೊಂಡವರನ್ನು,ಅನಾಥರನ್ನು ಹಾಗೂ ನಿರ್ಗತಿಕರನ್ನು ಆಸ್ಪತ್ರೆಗೆ ಸೇರಿಸುವ ನಿಸ್ವಾರ್ಥ ಸೇವೆ ಮಾಡುತ್ತಿರುವ ನಗರದ ನಿವಾಸಿ,ಸಮಾಜ ಸೇವಕರಾದ ಅಬ್ದುಲಖಾದರ ಹಜರತಸಾಬ ಧಾರವಾಡ ಅವರಿಗೆ ಹಾವೇರಿ ಪ್ರಾದೇಶಿಕ ಸಾರಿಗೆ ಕಚೇರಿಯ ವತಿಯಿಂದ ಅಭಿನಂದನಾ ಪತ್ರ ನೀಡಿ,ಗೌರವಿಸಿ ಸನ್ಮಾನಿಸಲಾಯಿತು. ಅಬ್ದುಲಖಾದರ ಧಾರವಾಡ ಅವರು ಸುಮಾರು 11 ವರ್ಷಗಳಿಂದ ಸೇವೆಯೇ ಪರಮ ಧರ್ಮ ಎಂಬ ಧ್ಯೇಯದೊಂದಿಗೆ ಈ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿದ್ದು,ಮಾನವೀಯತೆಯ ಕೆಲಸಕ್ಕೆ ಪ್ರೋತ್ಸಾಹಕವಾಗಿ ಅವರ ಸೇವೆ ಇನ್ನೂ ಮುಂದುವರಿಯಲಿ ಹಾಗೂ ಇನ್ನೂ ಹೆಚ್ಚು ಪ್ರಶಸ್ತಿ ಗೌರವ ಸಿಗಲಿ ಎಂದು ಆರ್ಟಿಓ ಕಛೇರಿಯಿಂದ ಅಭಿನಂದನಾ ಪತ್ರ ನೀಡಿ ಗೌರವಿಸಲಾಗಿದೆ.ಈ ಸಂದರ್ಭದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಕು.ವಿನಯ ಕಾಟೋಕರ್ ಆರ್, ಸಿಬ್ಬಂದಿಗಳಾದ ಶ್ರೀಪಾದ ಬ್ಯಾಶಿಯವರ,ಮೆಹಬೂಬಲಿ ಹೊಟೆಗಾಶಿ, ಶಂಭುಲಿಂಗಯ್ಯ ಹೊಸಳ್ಳಿಮಠ ಇದ್ದರು.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 