ಗೂಗಿಹಾಳ ಗ್ರಾಮದ ಹಜರತ್ ಪೀರ್ ರಾಜ್ ಬಸ್ಕರ್ ದೇವರ ಜಾತ್ರೋತ್ಸವದಲ್ಲಿ ಸತೀಶಕುಮಾರ ಅಡವಿಗೆ ಸನ್ಮಾನ
Satishkumar Adawi honored at Hazrat Peer Raj Baskar Devara Jatrotsava of Googihal village
ಲೋಕದರ್ಶನ ವರದಿ
ತಾಂಬಾ 10 : ಉಪಕಾರ ಮಾಡಿದವರನ್ನು ಯಾವತ್ತು ಸ್ಮರಿಸಬೇಕು ಅದು ಮನುಷ್ಯ ಧರ್ಮ ಆದರೆ ಇವತ್ತಿನ ಜನರು ಮಾಡಿದ ಉಪಕಾರವನ್ನು ಬೀಟ್ಟು ಕ್ಷಣಿಕ ಯೋಚನೆ ಮಾಡುತ್ತಾರೆ ಅಂತವರಿಗೆ ಹಜರತ್ ಪೀರ್ ರಾಜ್ ಬಸ್ಕರ್ ತಕ್ಕ ಶಿಕ್ಷೇನಿಡುತ್ತಾನೆ ಎಂದು ನೂತನ ಕೆಡಿಪಿ ಸದಸ್ಯ ಸತೀಶಕುಮಾರ ಅಡವಿ ಹೆಳಿದರು.
ಗೂಗಿಹಾಳ ಗ್ರಾಮದ ಹಜರತ್ ಪೀರ್ ರಾಜ್ ಬಸ್ಕರ್ ದೇವರ ಜಾತ್ರೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಈ ಒಂದು ಚಿಕ್ಕ ಗ್ರಾಮಕ್ಕೆ ಜಮೀನು ನೀಡಿದ ಬೊರಳಗಿ ಮನೆತನದವರು ಹಾಗೂ ಈ ಗ್ರಾಮಕ್ಕೆ ವಿದುತ್ ಸಂಪರ್ಕ ಕಲ್ಪಿಸುವ ಕಾರ್ಯಮಾಡಿದ್ದು ಸಾಲೂಟಗಿ ಯೋಗಪ್ಪಗೌಡ್ರು ಈ ಗ್ರಾಮವು ಒಂದು ಪುಟ್ಟ ದ್ವೀಪದಂತೆ ಇತ್ತು ಯಾವದೆ ರಸ್ತೆ ಸಂಪರ್ಕ ಇರಲಿಲ್ಲ ಅದನ್ನು ಗುರುತ್ತಿಸಿ ಇಲ್ಲಿ ರಸ್ತೆ ಸಂಪರ್ಕ ಕಲ್ಪಿಸಿ ಕೊಟ್ಟ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಕಾರ್ಯ ಶ್ಲಾಘನಿಯ.
ಅದರಂತೆ ಈಗ ಬಸ್ ಸೌಕರ್ಯನು ಕುಡಾ ಮಾಡಿದ್ದಾರೆ. ಇದಕ್ಕೆಲ್ಲಕ್ಕೂ ಕಾರಣಿಕರ್ತರಾದ ಕರಿಮಸಾಬ ಕಸಾಬ ಹಾಗೂ ಶರಣಪ್ಪ ಅಡವಿ ಅವರನ್ನು ನೆನಪಿಸಿ ಕೊಳ್ಳಬೆಕೆಂದರು. ಗ್ರಾಪಂ ಅಧ್ಯಕ್ಷ ರಜಾಕ ಚಿಕ್ಕಗಸಿ, ಪ್ರಕಾಶ ಮುಂಜಿ, ರವಿ ನಡಗಡ್ಡಿ, ಸುನಂದ ಎಂಪೂರೆ, ಮಲ್ಲಪ್ಪ ಸಣ್ಣತಂಗಿ, ಅಶೋಕ ಚೌಧರಿ, ನಜೀರ ಗೌರ, ಕಾಂತನಗೌಡ ಪಾಟೀಲ, ಹಿರಗಪ್ಪ ನಾಯ್ಕೋಡಿ, ಮಶ್ಯಾಕ ಕಸಾಬ, ಹಮ್ಮಿದ ಚೌಧರಿ, ವಿಠ್ಠಲ ಅವಟಿ ಸೇರಿದಂತೆ ಮತ್ತಿತರರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 