ಶೇಖರಗೌಡ ಷಷ್ಠಾಬ್ದಿ ಕಾರ್ಯಕ್ರಮದಲ್ಲಿ ಒಡನಾಡಿ ಪುಸ್ತಕ ಬಿಡುಗಡೆ

Odanaadi book released at Shekar Gowda's sixtieth anniversary event

ಕೊಪ್ಪಳ 02: ಸಹಕಾರಿರಂಗದ ನಾಯಕ ಕೊಪ್ಪಳ ಸಹಕಾರಿ ಯೂನಿಯನ್ ನ ಅಧ್ಯಕ್ಷಡಾ.ಶೇಖರಗೌಡ ಮಲಿ ಪಾಟೀಲ್ ಇವರ 66ನೇ ವರ್ಷದ ಷಷ್ಠಾಬ್ದಿ ಕಾರ್ಯಕ್ರಮದಲ್ಲಿ ಅವರ ಕುರಿತಾದ "ಒಡನಾಡಿ" ಪುಸ್ತಕ ಬಿಡುಗಡೆಯನ್ನು ಬೆಂಗಳೂರಿನ ಹಿರಿಯ ಸಾಹಿತಿ, ಚಿಂತಕ, ಮಾಜಿ  ಕಸಾಪ ಅಧ್ಯಕ್ಷರುಆದ ಮನು ಬಳೆಗಾರ ಅವರು ಬಿಡುಗಡೆಗೊಳಿಸಿ, ಶೇಖರಗೌಡರ ಕಾರ್ಯ ಸಾಧನೆ ಮೆಚ್ಚುವಂತದ್ದು. ಸಾಹಿತ್ಯ, ಸಹಕಾರಿ, ರಾಜಕೀಯ, ಸಮಾಜ ಸೇವೆ, ಎಲ್ಲಾ ಕ್ಷೇತ್ರದಲ್ಲೂ ಗಣನೀಯವಾದ ಸಾಧನೆ ಮಾಡಿದ ಶೇಖರಗೌಡರ, ಬಾಳು, ಬದುಕು, ಸದಾ ಹಸನ್ಮುಖಿಯಾಗಿರಲಿ, ಅವರಿಂದ ಇನ್ನು ಹೆಚ್ಚಿನ ಜನಪರವಾದ ಸೇವೆಗಳು ಮುಂದುವರೆಯಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಅವರು ಶೇಖರಗೌಡ ಮಾಲಿ ಪಾಟೀಲರ ಸ್ವರ ಚಿತ ಪುಸ್ತಕ "ಯುರೋಪ್ ರಾಷ್ಟ್ರಗಳ ಅಧ್ಯಯನ ಪ್ರವಾಸ" ಕೃತಿಯನ್ನು ಬಿಡುಗಡೆ ಮಾಡಿ, ಮಾಲಿ ಪಾಟೀಲರು ನನಗಿಂತ ಹಿರಿಯರು, ಅವರ ಸದಾ ಚಟುವಟಿಕೆಯ ಕಾರ್ಯಗಳನ್ನು ನೋಡಿದಾಗ ಅವರಿಂದ ಇನ್ನು ಹೆಚ್ಚು ಜನಪರ  ಹಾಗೂ ಕನ್ನಡ ನಾಡು ನುಡಿ ಭಾಷೆ ಸಂಸ್ಕೃತಿಗಳ ಸಮೃದ್ಧಿಗಾಗಿ, ಶ್ರಮವಹಿಸಿ ದುಡಿಯಲಿ.  

ಆ ಶಕ್ತಿಯನ್ನು ಭಗವಂತನ ಅವರಿಗೆ ಕರುಣಿಸಲೆಂದು ಆಶಿಸಿ ಶುಭಕೋರುತ್ತೇನೆ ಎಂದು ಮಾತನಾಡಿದರು. ಕೊಪ್ಪಳ ಸಂಸದರಾದ ರಾಜಶೇಖರ ಹಿಟ್ನಾಳ.ಕೊಪ್ಪಳದ ಶಾಸಕರಾದ ರಾಘವೇಂದ್ರ ಹಿಟ್ನಾಳ್, ಮಾಜಿ ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಜಿ.ಎಸ್‌. ಪಾಟೀಲ್ ಮಾಜಿ ಸಚಿವರಾದ ಅಮರೇಗೌಡ ಬಯ್ಯಾಪುರ.ಹಿರಿಯ ಸಾಹಿತಿ, ಎಸ್, ಜಿ, ಸಿದ್ದರಾಮಯ್ಯ. ವಿಧಾನ ಪರಿಷತ್ ಸದಸ್ಯರಾದ ಶರಣೆಗೌಡ ಮಾಲಿಪಾಟೀಲ. ಹಾಗೂ ಪೂಜ್ಯರಾದ ಶ್ರೀಶೈಲ ಪೀಠದ  ಜಗದ್ಗುರುಗಳಾದ ಸಿದ್ದರಾಮಯ್ಯ ಸ್ವಾಮಿಗಳು ಮತ್ತು ಶಿರಟ್ಟಿ ಮಠದ ಫಕೀರೇಶ್ವರ ಶ್ರೀಗಳು.  ಶೇಖರಗೌಡ ಮಾಲಿ ಪಾಟೀಲರ ಶಷ್ಟಾಬ್ದಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿ ಆಶೀರ್ವದಿಸಿದರು.  ಈ ಸಂದರ್ಭದಲ್ಲಿ ಶೇಖರ ಗೌಡರ ಧರ್ಮಪತ್ನಿ ಶರಣಮ್ಮ ಮಾಲಿ ಪಾಟೀಲ್ ಅವರಿಗೆ, ಅವರ  ನೂರಾರು ಅಭಿಮಾನಿಗಳು ಸನ್ಮಾನಿಸಿ, ಸತ್ಕರಿಸಿ ಅಭಿನಂದಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಡಾ. ಜೀವನ್ ಸಾಬ ಬಿನ್ನಾಳ. ಸಾಹಿತಿ ನಟರಾಜ ಸೋನಾರ್ ನೆರವೇರಿಸಿದರು. 


ಇತ್ತೀಚಿನ ಸುದ್ದಿ