ಶಾಸಕರ ಅಭಿವೃದ್ಧಿ ನಿಧಿಯಿಂದ ನವಲಗುಂದ ಪೊಲೀಸ್ ಇಲಾಖೆಗೆ ನೂತನ ಬುಲೆರೋ ವಾಹನ ಹಸ್ತಾಂತರ

 ಶಾಸಕರ ಅಭಿವೃದ್ಧಿ ನಿಧಿಯಿಂದ ನವಲಗುಂದ ಪೊಲೀಸ್ ಇಲಾಖೆಗೆ ನೂತನ ಬುಲೆರೋ ವಾಹನ ಹಸ್ತಾಂತರ  New Bulero vehicle handed over to Navalgund Police Department from MLA Development Fund

ಲೋಕದರ್ಶನ ವರದಿ 

 ಧಾರವಾಡ  15: ಬಹುದಿನ ಬೇಡಿಕೆ ನೂತನ ಹುಬ್ಬಳ್ಳಿ ಗ್ರಾಮೀಣ ಡಿ.ವೈ.ಎಸ್‌.ಪಿ. ಕಚೇರಿಯನ್ನು ಪ್ರಾರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರಾದ ಡಾ: ಜಿ. ಪರಮೇಶ್ವರ ಅವರು ಇದೊಂದು ವಿಷೇಶ ಪ್ರಕರಣ ಎಂದು ಪರಿಗಣಿಸಿ ಆರ್ಥಿಕ ಇಲಾಖೆಯಿಂದ ಒಪ್ಪಿಗೆ ನೀಡಲಾಗಿದೆ ಎಂದು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್‌.ಹೆಚ್‌. ಕೋನರಡ್ಡಿ ಹೇಳಿದರು. 

ಅವರು ದಿ. 14 ರಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ನವಲಗುಂದ ಪೊಲೀಸ್ ಇಲಾಖೆಗೆ ನನ್ನ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಒದಗಿಸಿದ ನೂತನ ಬುಲೆರೋ ವಾಹನವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಬಿಡಗುಡೆ ಮಾಡಿದ ಅವರು ಬಹುದಿನದಿಂದ ರೈತರ ಹೋರಾಟ ಮುಂತಾದ ಸಮಸ್ಯೆಗಳನ್ನು ಬಗೆಹರಿಸಲು ಹುಬ್ಬಳ್ಳಿ ಗ್ರಾಮೀಣ, ನವಲಗುಂದ, ಅಣ್ಣಿಗೇರಿ ಹಾಗೂ ಕುಂದಗೋಳ, ಗುಡಗೇರಿ ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಹೊಂದಿರುವ ನೂತನ ಹುಬ್ಬಳ್ಳಿ ಗ್ರಾಮೀಣ ಡಿ.ವೈ.ಎಸ್‌.ಪಿ. ಕಚೇರಿಯನ್ನು ಪ್ರಾರಂಭಿಸಲು ಇದೊಂದು ವಿಷೇಶ ಪ್ರಕರಣ ಎಂದು   ಆರ್ಥಿಕ ಇಲಾಖೆ ಅನುಮೋದನೆ ನೀಡಲಾಗಿದೆ.

ಈ ತಿಂಗಳ ಅಂತ್ಯದೊಳಗೆ ಗೃಹ ಇಲಾಖೆಯಿಂದ ಆದೇಶ ಹೊರಡಿಸಲಾಗುವದು. ಧಾರವಾಡ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಹೆಚ್ಚು ಕಾರ್ಯನಿರ್ವಹಿಸುಲು ಅನುಕೂಲವಾಗುವಂತೆ ಅವರಿಗೆ ಮೂಲಭೂತ ಸೌಕರ್ಯ ಹಾಗೂ ಇನ್ನೂ ಹೆಚ್ಚಿನ ನೂತನ ವಾಹನಗಳನ್ನು ಸರ್ಕಾರದಿಂದ ಮಂಜೂರು ಮಾಡಿಸುತ್ತೇವೆ, ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಶಾಂತಿ ಸೂವ್ಯವಸ್ಥೆ ಕಾಪಾಡಲು ಪೊಲೀಸ್ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಕೋನರಡ್ಡಿ ಹೇಳಿದರು. 

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಹೆಚ್ಚುವರಿ ಎಸ್‌.ಪಿ. ಶಿವಾನಂದ ಕಟಗಿ, ಡಿ.ವೈ.ಎಸ್‌.ಪಿ. ವಿನೋದ ಮುಕ್ತೇದಾರ, ಡಿ.ಎ.ಆರ್‌. ಡಿವೈಎಸ್‌ಪಿ ಡಿ.ಎಸ್‌. ಧನಗಾರ, ಪೊಲೀಸ್ ಇನಸ್ಪೆಕ್ಟರ್ಗಳಾದ ರವಿ ಕಪ್ಪತನವರ (ನವಲಗುಂದ), ಮುರಗೇಶ ಚನ್ನಣ್ಣವರ (ಹುಬ್ಬಳ್ಳಿ ಗ್ರಾಮೀಣ), ದಿನೇಶ ಜವಳಕರ, ಫಕ್ಕಿರೇಶ ಡೊಕ್ಕಣ್ಣವರ, ನವಲಗುಂದ ಪಿಎಸ್‌ಐ ಜನಾರ್ಧನ ಬಿ., ಸೇರಿದಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.