ಅಂಬೇಡ್ಕರ್ ಚಿತ್ರವಿರುವ ಸಾಮಾನ್ಯ ವಾಚ್ ತೋರಿಸಿದ ಕುಮಾರಸ್ವಾಮಿ

 ಅಂಬೇಡ್ಕರ್ ಚಿತ್ರವಿರುವ ಸಾಮಾನ್ಯ ವಾಚ್ ತೋರಿಸಿದ ಕುಮಾರಸ್ವಾಮಿ   Kumaraswamy showed off a regular watch with Ambedkar's picture

ಗದಗ, 29: ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್ ಈಶ್ವರ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ನಡೆದ ವಾಗ್ವಾದ ಇದೀಗ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.  

ಜೆಡಿಎಸ್ ರಾಜ್ಯ ವಕ್ತಾರ ಗೋವಿಂದಗೌಡ ವೇಂಕನಗೌಡ ಅವರು ಗದಗದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಪ್ರದೀಪ್ ಈಶ್ವರ್ ಅವರು ಜೆಡಿಎಸ್ ಹಾಗೂ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ನೀಡಿರುವ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿದರು. ತಮ್ಮ ಪಕ್ಷದ ಸಿದ್ಧಾಂತ ಹಾಗೂ ನಾಯಕರ ವಿರುದ್ಧ ಇಂತಹ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.  

ಅವರು ಮುಂದುವರೆದು, “ಕರ್ನಾಟಕದಲ್ಲಿ ಓಬಿಸಿ ಸಮುದಾಯದ ಅನೇಕ ಹಿರಿಯ ನಾಯಕರು ಕಾಂಗ್ರೆಸ್ನಲ್ಲಿದ್ದರೂ, ಪ್ರದೀಪ್ ಈಶ್ವರ್ ಅವರ ರೀತಿಯ ಹೇಳಿಕೆಗಳು ಸರಿಯಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.  

ಇದೇ ವೇಳೆ, ಕುಮಾರಸ್ವಾಮಿ ಅವರ ದುಬಾರಿ ವಾಚ್ ಕುರಿತು ಪ್ರದೀಪ್ ಈಶ್ವರ್ ಮಾಡಿದ ಆರೋಪಕ್ಕೂ ಪ್ರತಿಕ್ರಿಯೆ ನೀಡಲಾಯಿತು. ಅದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಮಾಧ್ಯಮಗಳ ಎದುರು ಸ್ಪಷ್ಟನೆ ನೀಡಿದ ಕುಮಾರಸ್ವಾಮಿ ಅವರು ತಮ್ಮ ಕೈಯಲ್ಲಿದ್ದ ವಾಚ್ ಅನ್ನು ತೋರಿಸಿ, ಅದು ಅಂಬೇಡ್ಕರ್ ಚಿತ್ರವಿರುವ ಸಾಮಾನ್ಯ ಎಚ್‌ಎಂಟಿ ವಾಚ್ ಎಂದು ವಿವರಿಸಿದರು. “ನನ್ನ ಬಳಿ 75ಹಿ80 ಲಕ್ಷ ರೂ. ಬೆಲೆಯ ವಾಚ್ ಇಲ್ಲ” ಎಂದು ಅವರು ತಿರುಗೇಟು ನೀಡಿದರು.  

ಸುದ್ದಿಗೋಷ್ಠಿಯಲ್ಲಿ ಅಮರೇಶ ಅಂಗಡಿ, ಬಸವರಾಜ ಅಪ್ಪಣ್ಣವರ, ಪ್ರಫುಲ್ ಪುಣೇಕರ, ಜಿ.ಕೆ. ಕೊಳ್ಳಿಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.