ಅನ್ಮೋಲ್ ಮಲ್ಟಿಪರ್ಪಸ ಸೇವಾ ಸಂಘದ ಭವ್ಯ ಉದ್ಘಾಟನೆ
Grand inauguration of Anmol Multipurpose Service Association
ಬೆಳಗಾವಿ 28 : ವಯಸ್ಸಿನ 40 ವರ್ಷಗಳ ನಂತರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಅದಕ್ಕಾಗಿ ಯೋಗ್ಯ ಆಹಾರವನ್ನು ಸೇವಿಸುವುದರ ಜೊತೆಗೆ ಪ್ರತಿದಿನ ಕನಿಷ್ಠ 40 ನಿಮಿಷಗಳ ಕಾಲ ಬಿಸಿಲಿನಲ್ಲಿ ಇರುವುದು ಅತ್ಯಂತ ಅವಶ್ಯಕವಾಗಿದೆ. ಇದರಿಂದ ನಮ್ಮ ದೇಹದ ಅನೇಕ ದೋಷಗಳು ದೂರವಾಗುತ್ತವೆ. ಹಾಗೆಯೇ ಓಜೋನ್ ಥೆರಪಿಯಂತಹ ಚಿಕಿತ್ಸೆಯಿಂದ ಮಂಡಿ ನೋವಿನಂತಹ ಅಸ್ಥಿರೋಗಗಳನ್ನು ಗುಣಪಡಿಸಬಹುದು" ಎಂದು ಶ್ರೀ ಆರ್ಥೋ ಟ್ರೌಮಾ ಸೆಂಟರ್ನ ಮುಖ್ಯಸ್ಥರಾದ ಡಾ. ದೇವೇಗೌಡ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.ಇಲ್ಲಿನ ಅನ್ಮೋಲ್ ಮಲ್ಟಿಪರ್ಪಸ ಸೊಸೈಟಿಯ ವತಿಯಿಂದ ಇಂದಿನಿಂದ ಅನ್ಮೋಲ್ ಸೇವಾ ಸಂಘಕ್ಕೆ ಚಾಲನೆ ನೀಡಲಾಯಿತು.
ರೋಗಿಗಳಿಗೆ ಅಗತ್ಯವಿರುವ ವಿವಿಧ ವೈದ್ಯಕೀಯ ಪರಿಕರಗಳ (ಉಪಕರಣಗಳ) ಕೊರತೆಯನ್ನು ನೀಗಿಸಲು ಪ್ರಾರಂಭಿಸಲಾದ ಈ ಸಂಘದ ಉದ್ಘಾಟನಾ ಸಮಾರಂಭವು ಗುರುವಾರ ಸಾಯಂಕಾಲ ಉಷಾತಾಯಿ ಗೋಗಟೆ ಗರ್ಲ್ಸ ಸ್ಕೂಲ್ನಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ. ಮಾಧವ ಭೋಕರೆ ಮತ್ತು ಪ್ರಾಧ್ಯಾಪಕ ಅನಿಲ್ ಚೌಧರಿ ಅವರ ಹಸ್ತದಿಂದ ದೀಪ ಬೆಳಗಿಸಲಾಯಿತು ಮತ್ತು ವೈದ್ಯಕೀಯ ಪರಿಕರಗಳ ಪೂಜೆ ಮಾಡಲಾಯಿತು. ವೇದಿಕೆಯ ಮೇಲೆ ಅನ್ಮೋಲ್ ಸೇವಾ ಸಂಘದ ಚೇರ್ಮನ್ ಸಂಜಯ್ ಪಂಡಿತ್ ಮತ್ತು ವೈಸ್ ಚೇರ್ಮನ್ ಸುಚಿತಾ ಮಹಂತಶೆಟ್ಟಿ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಭೋಕರೆ ಅವರು "ಅಪಘಾತಕ್ಕೊಳಗಾದ ರೋಗಿಗಳಿಗೆ ಹಾಗೂ ಯಾರ ಮಕ್ಕಳು ಅವರ ಹತ್ತಿರ ಇರುವುದಿಲ್ಲವೋ ಅಂತಹ ರೋಗಿಗಳಿಗೆ ಇಂತಹ ವೈದ್ಯಕೀಯ ಉಪಕರಣಗಳ ಅವಶ್ಯಕತೆ ತುಂಬಾ ಇರುತ್ತದೆ. ಆದ್ದರಿಂದ ಇದು ಅತ್ಯಂತ ಶ್ಲಾಘನೀಯವಾದ ಉಪಕ್ರಮವಾಗಿದೆ" ಎಂದು ಹೇಳಿ ಅನ್ಮೋಲ್ ಸೇವಾ ಸಂಘದ ಕಾರ್ಯವನ್ನು ಗೌರವಿಸಿದರು."ಇಂದಿನ ದಿನಗಳಲ್ಲಿ ಇಂತಹ ಸೇವೆಯ ಅವಶ್ಯಕತೆ ತುಂಬಾ ಹೆಚ್ಚಾಗುತ್ತಿದೆ. ಯುವಕರಿಗೆ 18 ವರ್ಷ ತುಂಬುತ್ತಿದ್ದಂತೆಯೇ ಅವರು ರಕ್ತದಾನ ಮಾಡುವುದು ಮತ್ತು ಅಂಗಾಂಗ ದಾನ ಮಾಡುವುದು ಎಷ್ಟು ಮುಖ್ಯ ಎಂಬುದನ್ನು ನಾವು ತಿಳಿಹೇಳಬೇಕಾಗಿದೆ.
ನಮ್ಮ ಮರಣದ ನಂತರವೂ ಅನೇಕರಿಗೆ ಬದುಕುವ ಭರವಸೆಯು ಅಂಗಾಂಗ ದಾನದ ಮೂಲಕ ಸಿಗುತ್ತದೆ" ಎಂದು ಪ್ರಾಧ್ಯಾಪಕ ಅನಿಲ್ ಚೌಧರಿ ಹೇಳಿದರು.ತೇಜಸ್ವಿನಿ ಹಂಗಿರಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು ನಡೆದು ಬಂದ ಹಾದಿ ಹಾಗೂ ಕಾರ್ಯವೈಖರಿಯನ್ನು ವಿವರಿಸಿದರು. ಅತಿಥಿಗಳ ಪರಿಚಯವನ್ನು ಮಾಧುರಿ ಚೌಗುಲೆ ಅವರು ಮಾಡಿಕೊಟ್ಟರು. ಸಂಜಯ್ ವಾಲಾವಲ್ಕರ್ ಮತ್ತು ರಮೇಶ್ ಕಾಳೆ ಅವರ ಹಸ್ತದಿಂದ ಅತಿಥಿಗಳನ್ನು ಸನ್ಮಾನಿಸಲಾಯಿತು. ನಾಗರಿಕರಿಗೆ ಇಂತಹ ವೈದ್ಯಕೀಯ ಉಪಕರಣಗಳ ಅಗತ್ಯವನ್ನು ಪೂರೈಸುತ್ತಿರುವ ಶಿವರಾಜ್ ಪಾಟೀಲ್ ಅವರನ್ನು ಇದೇ ವೇಳೆ ಗೌರವಿಸಲಾಯಿತು.
ಅದರೊಂದಿಗೆ ಅನ್ಮೋಲ್ ಸೇವಾ ಸಂಘಕ್ಕೆ ಈ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಉಚಿತವಾಗಿ ನೀಡಿದ ಸಾವಿತ್ರಿಬಾಯಿ ಬನ್ಸಲ್ ಅವರನ್ನು ಸುಚಿತಾ ಮಹಂತಶೆಟ್ಟಿ ಅವರು ಸನ್ಮಾನಿಸಿದರು. ಈ ಕಾರ್ಯಕ್ರಮದ ಅಂಗವಾಗಿ ಆರ್ಥೋ ಟ್ರೌಮಾ ಸೆಂಟರ್ ವತಿಯಿಂದ ನೆರೆದಿದ್ದ ಸಾರ್ವಜನಿಕರಿಗೆ ಬಿ.ಪಿ. ಮತ್ತು ಮಧುಮೇಹ (ಶುಗರ್) ತಪಾಸಣೆ ಹಾಗೂ ಹರ್ಕುನಿ ಐ ಕೇರ್ ಸೆಂಟರ್ ವತಿಯಿಂದ ಉಚಿತ ಕಣ್ಣಿನ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿತ್ತು. ರಾಕೇಶ್ ಹರದಿ ಅವರು ವಂದನಾರೆ್ಣ ಮಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸದಸ್ಯರು ಹಾಗೂ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ 