ಜಿಟಿಜಿಟಿ ಮಳೆ: ಪಂಚಮಿ ಸಂಭ್ರಮಕ್ಕೆ ಅಡೆತಡೆ ಅಣ್ಣ ತಂಗಿಯರ ಅನುಬಂಧದ ನಾಗರ ಪಂಚಮಿ ಆಚರಣೆ
ಲೋಕದರ್ಶನವರದಿ
ರಾಣೇಬೆನ್ನೂರು: ಜಿಟಿಜಿಟಿಯ ಮಳೆಯಲ್ಲೂ ಹಾಗೂ ಬರಗಾಲ ಛಾಯೆಯಲ್ಲಿಯೂ ಸಹ ತಾಲೂಕಿನಾದ್ಯಂತ ನಾಗರ ಪಂಚಮಿ ಹಬ್ಬವನ್ನು ಬಹುತೇಕವಾಗಿ ಸಡಗರ ಸಂಭ್ರಮದ ಮಧ್ಯ ಸಂಪ್ರದಾಯಬದ್ದವಾಗಿ ಆಚರಿಸಲಾಯಿತು. ನಗರ ಸೇರಿದಂತೆ ಕೆಲವಡೆ ಸೋಮವಾರ ಮತ್ತು ರವಿವಾರ ದಿನದಂದು ನಾಗಪ್ಪನಿಗೆ ಹಾಲು ಎರೆದು ಮಹಿಳೆಯರು ಭಕ್ತಿಭಾವ ಮೆರೆದರು.
ನಚಿಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ನಾಗಪ್ಪನಿಗೆ ಹಾಲು ಎರೆಯುವದರ ಮೂಲಕ ಪೂಜೆ ಸಲ್ಲಿಸಿ. ಅಣ್ಣ-ತಂಗಿಯರು ಹಾಲು ಎರೆಯುವ ಸಂಪ್ರದಾಯ.
ಗಂಡನ ಮನೆಯಿಂದ ತವರು ಮನೆಗೆ ಹೆಣ್ಣು ಮಕ್ಕಳನ್ನು ಕರೆತಂದು ಅವರಿಗೆ ಹೊಸ ವಸ್ತ್ರಗಳನ್ನು ಉಡುಗೊರೆಯಾಗಿ ನೀಡಿ, ಮನೆ ಮಂದಿಯಲ್ಲ ನಾಗಪ್ಪನಿಗೆ ಹಾಲೆರೆದು ಸಂಭ್ರಮಿಸಿದರು.
ಕಲ್ಲು ಅಥವಾ ಮಣ್ಣಿನ ನಾಗಪ್ಪನಿಗೆ ಪೂಜೆ ಸಲ್ಲಿಸಿ ಶೇಂಗಾ, ಎಳ್ಳು, ಕಡಲಿ, ಹುರಳಿ, ತಂಬಿಟ್ಟು ಸೇರಿದಂತೆ ವಿವಿಧ ಬಗೆಯ ಉಂಡಿಗಳನ್ನು ನೈವೇದ್ಯ ಮಾಡಿ, ನಂತರ ಭೋಜನ ಸವಿದು ಜೋಕಾಲಿ ಜೀಕುವುದು ಎಲ್ಲಡೆ ಕಂಡು ಬಂದಿತು.
ದಿನವೀಡಿ ಬಂದ ತುಂತುರು ಮಳೆ ಹಾಗೂ ಆಗಾಗ್ಗೆ ಬರುತ್ತಿದ್ದ ಜೋರಾದ ಮಳೆಯಿಂದಾಗಿ ನಾಗರ ಪಂಚಮಿಗೆ ಸಂಭ್ರಮಕ್ಕೆ ಅಡತಡೆಯುಂಟಾಯಿತು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 