ವಿರುಪಣ್ಣ ಕಲ್ಲೂರ್‌ಗೆ ಸನ್ಮಾನ

ಕೊಪ್ಪಳ 21:  ಸಮಾಜದ ಜಿಲ್ಲಾ ಉಪಾಧ್ಯಕ್ಷ ಕ್ರಿಯಾಶೀಲ ವ್ಯಕ್ತಿ ವಿರುಪಣ್ಣ ಕಲ್ಲೂರ್ ಇವರಿಗೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಭಿವೃದ್ಧಿ ನಿಗಮದ ನಾಮನಿರ್ದೇಶಕರಾಗಿ ಹಾಗೂ ಸಮಾಜದವರಾದ ಸಿದ್ದಪ್ಪ ಕಾರಟಗಿ ಇವರನ್ನು ಕಾರಟಗಿ ಪುರಸಭೆಗೆ ನಾಮ ನಿರ್ದೇಶಕರಾಗಿ ಆಯ್ಕೆ ಮಾಡಿದ್ದಾರೆ.  ಕನಕಗಿರಿ ಸಮಾಜದ ತಾಲೂಕ ಅಧ್ಯಕ್ಷ ಟಿ ಜೆ ರಾಜಶೇಖರ್ ಹಾಗೂ ಯುವಕ ಸಂಘದ ಅಧ್ಯಕ್ಷ ಕೃಷ್ಣ ಬೆನಕನಾಳ್ ಎಲ್ಲರಿಗೂ ಕೊಪ್ಪಳ ತಾಲೂಕು ಗಂಗಾಮತ ಸಮಾಜದ ವತಿಯಿಂದ ಸನ್ಮಾನ ಮಾಡಲಾಯಿತು. ಕೊಪ್ಪಳ ತಾಲೂಕು ಅಧ್ಯಕ್ಷ ಹುಲುಗಪ್ಪ ಬಾರಕೇರ, ಕಾರ್ಯದರ್ಶಿ ರಾಜು ಕಲೆಗಾರ, ಗೌರವಾಧ್ಯಕ್ಷ ರಮೇಶಪ್ಪ ಕಬ್ಬೆರ್ ಹಾಗೂ ಗೌರವ ಸಲಹೆಗಾರ ಕಾಂಗ್ರೆಸ್ ಪಕ್ಷದ  ನಿವೃತ್ತಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಓ ಯಂಕಪ್ಪ ಮತ್ತು ಉದಯ್ ಕಬ್ಬೆರ್ ಉಪಸ್ಥಿತರಿದ್ದರು.