ದೇಶದ ಪ್ರತಿಯೊಬ್ಬರು ಶುದ್ಧ ಕುಡಿಯುವ ನೀರನ್ನು ಸದುಪಯೋಗ ಮಾಡಿಕೊಳ್ಳಿ: ಐಹೊಳೆ
Everyone in the country should make good use of clean drinking water: Aihole
ರಾಯಬಾಗ 28: ದೇಶದ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸು ಉದ್ದೇಶದಿಂದ ಕೇಂದ್ರ ಸರ್ಕಾರ ಜಲ ಜೀವನ ಮೀಷನ ಯೋಜನೆ ಜಾರಿಗೆ ತಂದಿದ್ದು, ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ರಾಯಬಾಗ ಗ್ರಾಮೀಣ ಭಾಗದ ಆನೆಬಾಯಿಕೋಡಿಯಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯಿಂದ ಜೆಜೆಎಮ್ ಯೋಜನೆಯಡಿ ಮಂಜೂರಾದ 2 ಕೋಟಿ 54 ಲಕ್ಷ ರೂ. ಅನುದಾನದಲ್ಲಿ 966 ಮನೆಗಳಿಗೆ ನಳ ಸಂಪರ್ಕ, 5 ಮೇಲ್ಮಟ್ಟದ ಜಲಸಂಗ್ರಾಲಯ ಕಾಮಗಾರಿ ಹಾಗೂ ಭಿರಡಿ ಗ್ರಾಮದಲ್ಲಿ ಎಸ್ಸಿಪಿ/ಟಿಎಸ್ಪಿ ಯೋಜನೆಯಡಿ ಮಂಜೂರಾದ 25 ಲಕ್ಷ ರೂ. ಅನುದಾನದಲ್ಲಿ ಪ.ಜಾತಿ ಕಾಲೋನಿಯ ಭಿರಡಿ-ಜಲಾಲಪೂರ ರಸ್ತೆಯಿಂದ ರಾಜು ಮೈಶಾಳೆ ತೋಟದ ವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಪ್ರಮುಖವಾಗಿ ನೀರಿನ ಸೌಕರ್ಯ ಮತ್ತು ರಸ್ತೆಗಳನ್ನು ಸುಧಾರಿಸುವುದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಎಇಇ ಸುಭಾಷ ಭಜಂತ್ರಿ, ಜೆಇ ಲೋಹಿತ ಕಾಂಬಳೆ, ಸದಾಶಿವ ಘೋರೆ್ಡ, ಅಣ್ಣಾಸಾಹೇಬ ಖೆಮಲಾಪೂರೆ, ಮಹಾದೇವ ಬೊರಗಾಂವೆ, ಶ್ರೀಧರ ಕುಡಚೆ, ಬಾದಶಾ ಡಾಂಗೆ, ಮಜ್ಜಿದ ಡಾಂಗೆ, ವಸಂತ ಕಾಂಬಳೆ, ಸಿದ್ದಪ್ಪ ಪುಜೇರಿ, ನಿಂಗಪ್ಪ ಪೂಜೇರಿ, ಮುರಗೇಂದ್ರ ನಿಶಾನಂದಾರ, ಕೇಶವ ಹವಾಲ್ದಾರ, ಸುಹಾಸ ಪುಜೇರಿ, ವಸಂತ ನಿಶಾನದಾರ, ಶಂಕರ ಗಂಗನ್ನವರ, ಸುರೇಶ ದೇವಋಷಿ, ಮಧುಕರ ಕಾಂಬಳೆ, ಕೆಂಪಣ್ಣ ಮೈಶಾಳೆ, ಶಂಕರ ನಿಡವಣಿ, ಸದಾಶಿವ ನಿಡವಣಿ, ಗೋಪಾಲ ಕೋಚೆರಿ, ಗೋಪಾಲ ನಿಡಗುಂದಿ, ರಂಜಾನ ಮಕಾಂದಾರ, ಬಸಪ್ಪ ಖಿಲಾರೆ, ಅಝಾದ ಡಾಂಗೆ, ರಮೇಶ ಕಾಂಬಳೆ ಸೇರಿದಂತೆ ಅನೇಕರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 