ಗದಗ-ಬೆಟಗೇರಿಯಲ್ಲಿ ಕುಡಿಯುವ ನೀರಿನ ಜಲಸಂಗ್ರಹಾಗಾರ ಲೋಕಾರೆ್ಣ
Drinking water reservoir inaugurated in Gadag-Betageri
ಗದಗ 20: ಗದಗ-ಬೆಟಗೇರಿ ನಗರಸಭೆಯ 27ನೇ ವಾರ್ಡ್ ವ್ಯಾಪ್ತಿಯ ಪ್ರತಿಷ್ಠಿತ ಕೆ.ಎಚ್. ಪಾಟೀಲ್ ಹಾಗೂ ವೀರನಾರಾಯಣ ಬಡಾವಣೆಯಲ್ಲಿ ಸಾರ್ವಜನಿಕರಿಗೆ ಅಗತ್ಯವಾಗಿದ್ದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾದ ಕುಡಿಯುವ ನೀರಿನ ಜಲಸಂಗ್ರಹಾಗಾರವನ್ನು ಲೋಕಾರೆ್ಣ ಮಾಡಲಾಯಿತು.
ನಗರಸಭೆಯ 27ನೇ ವಾರ್ಡ್ ಸದಸ್ಯೆ ಶ್ರೀಮತಿ ಲಲಿತಾ ಬಿ. ಅಸೂಟಿ ಅವರ ಪ್ರಯತ್ನದ ಫಲವಾಗಿ, ನಾಗರಿಕರಿಗೆ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಜಲಸಂಗ್ರಹಾಗಾರ ನಿರ್ಮಿಸಲಾಗಿದೆ.
ಈ ಜಲಸಂಗ್ರಹಾಗಾರದ ಉದ್ಘಾಟನೆಯನ್ನು ಗದಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ 27ನೇ ವಾರ್ಡ್ ಸದಸ್ಯೆ ಶ್ರೀಮತಿ ಲಲಿತಾ ಬಿ. ಅಸೂಟಿ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಡಾವಣೆಯ ಅಧ್ಯಕ್ಷ ಮಾಲಿಂಗಪ್ಪ ಬರಬರಿ, ಉಪಾಧ್ಯಕ್ಷ ಕಲ್ಮೇಶ್ ಆಲದಗಟ್ಟಿ, ಎಸ್.ಜಿ. ಕಟ್ಟಿಗೆಹಳ್ಳಿಮಠ, ಮಂಜುನಾಥ ದೊಡ್ಡಮನಿ, ಮಹಮ್ಮದ್ಸಾಬ್ ವಾಲೀಕಾರ, ಅಪ್ಪಾಸಾಬ್ ಮುದ್ಹೊಳ, ಕುಬೇರಗೌಡ ಪಾಟೀಲ, ಬಾಬುಸಾಬ್ ಶಿರಹಟ್ಟಿ, ಆನಂದ ಇನಾಮತಿ, ಶಿವಪ್ಪ ಮೂಲಿಮನಿ, ಮುಸ್ತಾಕ್ ಬೆಳಿಗಾರ, ಬಸಪ್ಪ ಹಳ್ಳಿಗುಡಿ, ಕಳಕಪ್ಪ ಮಡಿವಾಳರ, ಮುತ್ತು ಸುಂಕದ, ಶ್ರೀಮತಿ ರಾಜಬೀ ಬಳಗಾರ,
ಶ್ರೀಮತಿ ಸರೋಜಾ ಬರಬರಿ, ಭೀಮಣ್ಣ ಮುದ್ಹೊಳ, ಶಿವಾನಂದ ಹೊಸಂಗಡಿ, ಈರಣ್ಣ ಹುಚ್ಚನಗೌಡ್ರ, ಮಲ್ಲನಗೌಡ ಪಾಟೀಲ, ವಿರೂಪಾಕ್ಷಪ್ಪ ಪೊಲೀಸ್ ಪಾಟೀಲ ಸೇರಿದಂತೆ ಬಡಾವಣೆಯ ಅನೇಕ ಗಣ್ಯರು ಹಾಗೂ ನಿವಾಸಿಗಳು ಭಾಗವಹಿಸಿದ್ದರು. ಸ್ಥಳೀಯರು ಈ ಯೋಜನೆಗೆ ಸಂತಸ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆ ಮತ್ತಷ್ಟು ಸುಗಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 