ಸಸಿಗಳಿಗೆ ಜಲಾಭಿಷೇಕ ಮಾಡಿ ಶ್ರೀಗಳ ಜನ್ಮ ದಿನ ಆಚರಣೆ

Dr. Basavaraj Devaru's birthday celebration

ಧಾರವಾಡ 06: ಮನಸೂರು ಶ್ರೀ ರೇವಣಸಿದ್ದೇಶ್ವರ ಮಹಾಮಠದ ಯಾತ್ರಿ ನಿವಾಸದ ಸಭಾಂಗಣದಲ್ಲಿ ಜರುಗಿದ ವಿಶ್ವಪರಿಸರ ದಿನಾಚರಣೆ ಹಾಗೂ ಪರಮಪೂಜ್ಯ ಡಾ:ಬಸವರಾಜ ದೇವರು ಶ್ರೀಗಳ ಜನ್ಮ ದಿನಾಚಾರಣೆಯು ವಿಶೇಷವಾಗಿ ಅದರಲ್ಲಿಯೂ ಕೇಕ್‌- ಶಾಲು ಹಾರ ತುಲಾಭಾರ  ಅದ್ದೂರಿಯಾಗಿ ಆಚರಿಸದೇ ಈಗಾಗಲೇ ಶ್ರೀಗಳ ಹುಟ್ಟು ಹಬ್ಬದ ನಿಮಿತ್ಯವಾಗಿ ಹಚ್ಚಿದ ಮರಗಳಿಗೆ ಅಭಿಷೇಕ, ಸದ್ಯ ಹಚ್ಚಿದ ಸಸಿಗಳಿಗೆ ಜಲಾಭಿಷೇಕ ಮಾಡಿ ಸಸಿಗಳನ್ನು ಹಚ್ಚಿ ವೈಶಿಷ್ಟವಾಗಿ ಹುಟ್ಟು ಹಬವನ್ನು ಆಚರಿಸಿಕೊಳ್ಳಲಾಯತು.  

ಶ್ರೀಗಳ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಶ್ರೀ ರೇವಣಸಿದ್ದೇಶ್ವರ ಮಹಾಮಠದಲ್ಲಿ ಸಶಿ-ಶಿಶು ಸಂಭ್ರಮ ಮತ್ತು ಮುಂಗಾರು ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರಿ​‍್ಡಸಲಾಗಿತ್ತು. 

ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ಶ್ರೀ ಪರಮಪೂಜ್ಯ ಡಾ:ಬಸವರಾಜ ದೇವರುಗಳು ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಇನ್ನೋರ್ವ ಪರಮಪೂಜ್ಯ ಶ್ರೀ ಕನ್ನಯ್ಯ ಮಹಾರಾಜ ಶ್ರೀ ಅಮೋಘಸಿದ್ದೇಶ್ವರ ಮಠ ಗುಬ್ಬೇವಾಡ ವಹಿಸಿಕೊಂಡಿದ್ದರು ಹಿರಿಯ ಜಾನಪದ ಕಲಾವಿದರಾದ ಬಸವರಾಜ್ ಹಾಗೂ ಸುಮಾ ಹಡಪದ ದಂಪತಿಗಳಿಬ್ಬರು ಹಾಗೂ ತಬಲಾ ವಾದಕರು ಭಾಗವಹಿಸಿದ್ದರು ಸದ್ಭಕ್ತರು ಉಪಸ್ಥಿತರಿದ್ದರು  ರಮೇಶ ಬಿಂಜವಾಡಗಿ ನಿರೂಪಿಸಿದರು ಹೈಯ್ಯಾಳಪ್ಪ ಕೆಂಭಾವಿ ವಂದಿಸಿದರು. ನಂತರ ಅನ್ನಸಂತರೆ​‍್ಣ ಜರುಗಿತು.