ಯುವಕರ ನಡುವೆ ಘರ್ಷಣೆ ಠಾಣೆಯಲ್ಲಿ ದೂರು ದಾಖಲು
Complaint filed at police station over clash between youths
ಕಾರವಾರ 23: ಬೈಕ್ ಓವರ್ ಟೇಕ್ ಮಾಡುವಾಗ ಮತ್ತೊಂದು ಬೈಕ್ ಗೆ ತಾಗಿದ ಕಾರಣಕ್ಕೆ ಯುವಕರು ಹೊಡೆದಾಡಿಕೊಂಡ ಘಟನೆ ಶಿರಸಿಯ ಸಿಂಪಿಗಲ್ಲಿಯಲ್ಲಿ ನಡೆದಿದೆ. ಬೈಕ್ ತಾಗಿದ ವಿಚಾರವಾಗಿ ಯುವಕರ ಗುಂಪಿನ ಮಧ್ಯೆ ನಡು ರಸ್ತೆಯಲ್ಲೇ ಹೊಡೆದಾಡಿಕೊಂಡ ಘಟನೆ ಶಿರಸಿ ನಗರದ ದೇವಿಕೆರೆ ಸಮೀಪದ ಸಿಂಪಿಗಲ್ಲಿಯಲ್ಲಿ ನಡೆದಿದೆ. ಮೇ.21 ರ ರಾತ್ರಿ ಇಬ್ಬರು ಯುವಕರು ಬೈಕ್ ನಲ್ಲಿ ಮತ್ತೊಂದು ಬೈಕ್ ನಲ್ಲಿದ್ದ ಯುವಕರ ವಾಹನವನ್ನು ಚೇಜ್ ಮಾಡುವಾಗ ಬೈಕ್ ಗೆ ಟಚ್ ಆಗಿದೆ.ಈ ವಿಷಯವಾಗಿ ಯುವಕರ ನಡುವೆ ವಾಗ್ವಾದ ನಡೆದು ಯುವಕರ ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಹಲ್ಲೆ ಮಾಡಿದರು ಎನ್ನಲಾಗಿದೆ.ಯುವಕರು ಹೊಡೆದಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ನಂತರ ಈ ಸಿಸಿ ಟಿವಿ ದೃಶ್ಯವನ್ನ ಸ್ಥಳೀಯರೊಬ್ಬರು ಶಿರಸಿ ನಗರ ಠಾಣೆ ಪೊಲೀಸರಿಗೆ ನೀಡಿದ್ದಾರೆ.
ಈ ದೃಶ್ಯ ಆಧರಿಸಿ ತನಿಖೆ ಮಾಡಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಶಿರಸಿಯ ಅಯಾನ್ ಟಿನಮೇಕರ್ , ಸರಾ್ರಜು ಟಿನಮೇಕರ್ ,ಆದಿಲ್ ಸಕ್ಕರ್ ಖಾನ್ , ಶಿರಸಿಯ ಗೋಲ್ ಗೇರಿ ಓಣಿಯ ಅಭಯ್ ಪ್ರಕಾಶ್ ಹುದಾರ್, ಶಿರಸಿ ಸಿಂಪಿಗಲ್ಲಿಯ ಸರ್ವೇಶ್ ಮಾಲ್ತೇಶ್ ಹಿರೇಮಠ್ ಹಾಗೂ ಸಿಂಪಿಗಲ್ಲಿಯ ಆಕಾಶ್ ಗೋಪಾಲ ಕುಂದಣಗಾರ ಸೇರಿದಂತೆ ಒಟ್ಟು ಆರು ಯುವಕರ ವಿರುದ್ಧ ಶಿರಸಿ ನಗರ ಠಾಣೆಯಲ್ಲಿ ಇಂದು ಪ್ರಕರಣ ದಾಖಲಿಸಿದ್ದಾರೆ.
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ 