ಎಚ್.ಐ.ವಿ, ಏಡ್ಸ್ ಜಾಗೃತಿಗಾಗಿ ಬೈಕ್ ರಾ್ಯಲಿ
Bike rally for HIV and AIDS awareness
ಗದಗ 17: ಗದಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಲಾಖೆ ಸಹಯೋಗದಲ್ಲಿ ತೀವ್ರಗೊಳಿಸಿದ ಎಚ್ಐವಿ ಏಡ್ಸ್ ಪ್ರಚಾರಾಂದೋಲನ ಬೈಕ್ ರಾ್ಯಲಿಗೆ ಡಿಟಿಓ ಡ್ಯಾಪ್ಕೋ ಅಧಿಕಾರಿ ಡಾ. ಅರುಂಧತಿ ಕೆ ಬುಧವಾರ ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.
ಬೈಕ್ ರಾ್ಯಲಿಯು ಜಿಲ್ಲಾಡಳಿತ ಭವನದಿಂದ ಪ್ರಾರಂಭವಾಗಿ ಟಿಪ್ಪು ಸರ್ಕಲ್ , ಮುಳಗುಂದ ನಾಕಾ, ಜುಮ್ಮಾ ಮಸೀದಿ, ಟಾಂಗಾ ಕೂಟ , ಮಹೇಂದ್ರ ಕರ ಸರ್ಕಲ್ , ಗಾಂಧಿ ಸರ್ಕಲ್ , ಪೋಸ್ಟ್ ಆಫೀಸ್ ಮುಂದೆ ಸಾಗಿ ನಗರದ ಕೆ.ಸಿ.ರಾಣಿ ರೋಡ್ ದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಬಂದು ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ನೌಕರರ ಸಂಘದ ಅಧ್ಯಕ್ಷ ಡಾ.ಬಸವರಾಜ ಬಳ್ಳಾರಿ, ಜಿಲ್ಲಾ ಮೇಲ್ವಿಚಾರಕರಾದ ಬಸವರಾಜ ಲಾಳಗಟ್ಟಿ, ಆರೋಗ್ಯ ಇಲಾಖೆಯ ಎನ್ ಟಿ ಇಪಿ , ಡ್ಯಾಪ್ಕೋ, ಐಸಿಟಿಸಿ ,ಎಆರ್ಟಿ ಸಿಬ್ಬಂದಿ ರಕ್ಷಣೆ, ಸೃಷ್ಟಿ ಸಂಕುಲ, ನವಚೇತನ ಮತ್ತು ಚೈತನ್ಯ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 