ಆಕಾಶವಾಣಿ ವಾಕಥಾನ್ ಚಾಲನೆ
All India Radio Walkathon launched
ಲೋಕದರ್ಶನ ವರದಿ
ಕಾರವಾರ ಮೇ.15: ಆಕಾಶವಾಣಿ 90ರ ವರ್ಷಾಚರಣೆಯ ಅಂಗವಾಗಿ ಕಾರವಾರ ಆಕಾಶವಾಣಿ ಕೇಂದ್ರವು ರವೀಂದ್ರ ಠಾಗೋರ್ ಕಡಲ ತೀರದಲ್ಲಿ ಹಮ್ಮಿಕೊಂಡಿದ್ದ ಸಮೂಹ ನಡಿಗೆಗೆ ಕಾರವಾರದ ಅವರ್ ಸೋಷಿಯಲ್ ಗುಡ್ ಸಂಸ್ಥೆಯ ಪವನ್ ಸಾವಂತ್, ಬ್ರಹ್ಮಕುಮಾರಿ ಈಶ್ವರೀಯವಿಶ್ವ ವಿದ್ಯಾಲಯದ ಜಿಲ್ಲಾ ಸಂಯೋಜಕಿ ಬಿ.ಕೆ.ಕವಿತಾ ಹಾಗೂ ಆಕಾಶವಾಣಿ ಕಾರವಾರ ಕೇಂದ್ರದ ಕಾರ್ಯಕ್ರಮ ಮುಖ್ಯಸ್ಥ ಟಿ.ಶ್ಯಾಮ ಪ್ರಸಾದ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಶುಕ್ರವಾರ ಚಾಲನೆ ನೀಡಿದರು.
ನಡಿಗೆಯು ಠಾಗೋರ್ ಕಡಲ ತೀರದಿಂದ ಆರಂಭಗೊಂಡು ಹೆಂಜಾ ನಾಯ್ಕ ವೃತ್ತ, ಕೋಡಿಭಾಗ್ ರಸ್ತೆಯ ಮೂಲಕ ಸಾಗಿ ಬಂದ ಮೆರವಣಿಗೆ ಆಕಾಶವಾಣಿ ಕಾರವಾರ ಕಚೇರಿ ಆವರಣದಲ್ಲಿ ಸಮಾಪನಗೊಂಡಿತು. ದಾರಿಯುದ್ದಕ್ಕೂ ಆಕಾಶವಾಣಿ-ಮಧುರವಾಣಿ,ಉಲಿ-ಬಾನುಲಿ, ಆಕಾಶವಾಣಿ-ನಮ್ಮ ವಾಣಿ ಮೊದಲಾದ ಉದ್ಘೋಷಗಳು ಮೊಳಗಿದವು. ಕಾರ್ಯಕಮದಲ್ಲಿ ಕಾರವಾರದ ಆಕಾಶವಾಣಿ ಸಿಬ್ಬಂದಿ, ಕಾರ್ಯಕ್ರಮ ಸಹಾಯಕರು, ರೋಟರಿ ಕಾರವಾರ,ಅವರ್ ಸೋಷಿಯಲ್ ಗುಡ್ ಸಂಸ್ಥೆ ಹಾಗೂ ಇನ್ನಿತರರು ಸೇರಿದಂತೆ 100ಕ್ಕೂ ಹೆಚ್ಚು ಜನರು ನಡಿಗೆಯಲ್ಲಿ ಭಾಗವಹಿಸಿದರು.ಎಲ್ಲರಿಗೂ ಪ್ರಮಾಣ ಪತ್ರ ವಿತರಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 